ವಿದ್ಯಾರ್ಥಿಯ ಶೂ ಲೇಸ್ ಕಟ್ಟಿ ಸರಳತೆ ಮೆರೆದ ಕೊಪ್ಪಳದ ಗವಿ ಸಿದ್ದೇಶ್ವರ ಶ್ರೀ..!

By Suvarna NewsFirst Published Jan 7, 2020, 7:29 PM IST
Highlights

ಕಳೆದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಜಾತ್ರೆಯ ಸಮಯದಲ್ಲಿ ಚರಂಡಿಯನ್ನು ತಾವೇ ಕ್ಲೀನ್ ಮಾಡಿ ತಮ್ಮ ಸರಳತೆ ಮೆರೆದಿದ್ದ ಗವಿ ಸಿದ್ದೇಶ್ವರ ಶ್ರೀಗಳು, ಬಳಿಕ ಕೊಪ್ಪಳದ  ಹಿರೇಹಳ್ಳದಲ್ಲಿ ತಾವೇ ಇಳಿದು ಸ್ವಚ್ಛತೆ ಮಾಡಿ ಸೈಎನಿಸಿಕೊಂಡಿದ್ದರು. ಇದೀಗ ಅವರ ಸರಳ ಸಜ್ಜನಿಕೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಕೊಪ್ಪಳ, [ಜ.07]: ದಕ್ಷಿಣ ಭಾರತದ ಮಹಾ ಕುಂಬಮೇಳ ಎಂದೇ ಪ್ರಖ್ಯಾತಿ ಪಡೆದಿರೋ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು,  ಇದೇ ಜನವರಿ 12, 13 ಮತ್ತು 14ರಂದು ಮೂರು ದಿನಗಳ ಕಾಲ ಅಜ್ಜನ ಜಾತ್ರೆ ನಡೆಯಲಿದೆ.

ಈ ಬಾರಿಯ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಮಠದ ವತಿಯಿಂದ ಇಂದು [ಮಂಗಳವಾರ] ವಿನೂತನ ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನವನ್ನು ಆಯೋಜಿಲಾಗಿತ್ತು. ಈ ವೇಳೆ ವಿಶ್ವವಿಖ್ಯಾತ ಗವಿ ಮಠದ ಗವಿ ಸಿದ್ದೇಶ್ವರ ಶ್ರೀಗಳು ವಿದ್ಯಾರ್ಥಿತಿಯೋರ್ವನ ಶೂ ಲೇಸ್ ಕಟ್ಟಿ ಸರಳತೆ ಮೆರೆದಿದ್ದಾರೆ. ಈ ಮೂಲಕ ಇಲ್ಲಿ ನೆರೆದಿದ್ದ ಜನರ ಗಮನಸೆಳೆದರು.

ಜ. 12ರಂದು ಕೊಪ್ಪಳದ ಕುಂಭಮೇಳ, 15 ಲಕ್ಷ ಭಕ್ತರಿಗೆ ದಾಸೋಹದ ವ್ಯವಸ್ಥೆ

ಲಕ್ಷ ವೃಕ್ಷೋತ್ಸವ ಜಾಥಾ ಸಮಯದಲ್ಲಿ ಬಾಲಕನೊಬ್ಬ ತನ್ನ ಶೂ ಬಿಚ್ಚಿ ಶ್ರೀಗಳಿಗೆ ನಮಸ್ಕರಿಸಿದ್ದಾನೆ. ಬಳಿಕ ಶೂ ಹಾಕಿಕೊಳ್ಳಲು ಒದ್ದಾಡುತ್ತಿದ್ದ. ಇದನ್ನು ಗಮಿನಿಸಿದ ಗವಿ ಸಿದ್ದೇಶ್ವರ ಶ್ರೀಗಳು, ಬಾಲಕ ಬಳಿಗೆ ಬಂದು ಶೂ ಲೇಸ್ ಕಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶ್ರೀಗಳ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಲಕ್ಷ ವೃಕ್ಷೋತ್ಸವ ಶೀರ್ಷಿಕೆಯ ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕರಕ್ಕೆ ಲಕ್ಷ ವೃಕ್ಷೋತ್ಸವ ಎಂಬ ಘೋಷವಾಕ್ಯದೊಂದಿಗೆ ಕೊಪ್ಪಳದ ಸಾರ್ವಜನಿಕ ಮೈದಾನದಿಂದ ಆರಂಭವಾದ ಜಾಥಾ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್‍ಕುಮಾರ ಚಾಲನೆ ನೀಡಿದ್ದರು. ಈ ಜಾಗೃತಿ ಅಭಿಯಾನದಲ್ಲಿ ವಿವಿಧ ಶಾಲೆ ಹಾಗೂ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ, ಯಾತ್ರಿಕರಿಗೆ ಸುಸಜ್ಜಿತ ವಸತಿ ವ್ಯವಸ್ಥೆ

 ಗವಿಸಿದ್ದೇಶ್ವರ ಶ್ರೀಗಳು ಹೈಫೈ ಉ ಸ್ವಾಮೀಜಿಯಲ್ಲ. ತಲೆಗೆ ಖಾದಿ ರುಮಾಲು ಸುತ್ತಿಕೊಂಡು ಕಾಲಲ್ಲಿ ಸಾಮಾನ್ಯ ಚಪ್ಪಲಿಗಳು ಧರಿಸಿ ಸಾಮಾಜೀಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಕ್ಕೆ ಹಲವಾರು ಉದಾಹರಣೆಗಳು ಸಹ ಉಂಟು.

ಕಳೆದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಜಾತ್ರೆಯ ಸಮಯದಲ್ಲಿ ಚರಂಡಿಯನ್ನು ತಾವೇ ಕ್ಲೀನ್ ಮಾಡಿ ತಮ್ಮ ಸರಳತೆ ಮೆರೆದಿದ್ದ ಗವಿ ಸಿದ್ದೇಶ್ವರ ಶ್ರೀಗಳು, ಬಳಿಕ ಕೊಪ್ಪಳದ  ಹಿರೇಹಳ್ಳದಲ್ಲಿ ತಾವೇ ಇಳಿದು ಸ್ವಚ್ಛತೆ ಮಾಡಿ ಸೈ ಎನಿಸಿಕೊಂಡಿದ್ದರು.

click me!