ತಡರಾತ್ರಿ ಹೊತ್ತಿ ಉರಿದ ಗಾರ್ಮೆಂಟ್..! ಬಟ್ಟೆ, ಯಂತ್ರ ಎಲ್ಲವೂ ಭಸ್ಮ

Published : Feb 17, 2020, 08:23 AM ISTUpdated : Feb 17, 2020, 09:20 AM IST
ತಡರಾತ್ರಿ ಹೊತ್ತಿ ಉರಿದ ಗಾರ್ಮೆಂಟ್..! ಬಟ್ಟೆ, ಯಂತ್ರ ಎಲ್ಲವೂ ಭಸ್ಮ

ಸಾರಾಂಶ

ತಡರಾತ್ರಿ ಗಾಮೆಂಟ್‌ ಫ್ಯಾಕ್ಟರಿ ಹೊತ್ತಿ ಉರಿದು ಸಂಪೂರ್ಣ ಭಸ್ಮವಾದ ಘಟನೆ ಕೋಲಾರದಲ್ಲಿ ನಡೆದಿದೆ. ಬಟ್ಟೆ ಜೊತೆಗೆ ಯಂತ್ರೋಪಕರಣಗಳು ಸುಟ್ಟು ಕರಕಲಾಗಿದೆ.  

ಕೋಲಾರ(ಫೆ.17): ತಡರಾತ್ರಿ ಗಾಮೆಂಟ್‌ ಫ್ಯಾಕ್ಟರಿ ಹೊತ್ತಿ ಉರಿದು ಸಂಪೂರ್ಣ ಭಸ್ಮವಾದ ಘಟನೆ ಕೋಲಾರದಲ್ಲಿ ನಡೆದಿದೆ. ಬಟ್ಟೆ ಜೊತೆಗೆ ಯಂತ್ರೋಪಕರಣಗಳು ಸುಟ್ಟು ಕರಕಲಾಗಿದೆ. ಗಾರ್ಮೆಂಟ್ ಫ್ಯಾಕ್ಟರಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ವಸ್ತುಗಳು ‌ಬೆಂಕಿಗಾಹುತಿಯಾಗಿದೆ.

"

ಕೋಲಾರ ಜಿಲ್ಲೆಯ ಕೆಜಿಎಫ್ ನ ಇರುದಪುರಂ ಬಳಿ ಇರುವ ಕಾಂಗ್ರೆಸ್ ಎಂಎಲ್‌ಸಿ ನಜೀರ್ ಅಹ್ಮದ್ ಅವರ ಒಡೆತನದ ಸ್ಕಾಟ್ ಗಾರ್ಮೆಂಟ್ಸ್‌ನಲ್ಲಿ ಅವಘಡ ಸಂಭವಿಸಿದ್ದು ಬಟ್ಟೆ ಜೊತೆಗೆ ಯಂತ್ರೋಪಕರಣಗಳು ಸುಟ್ಟು ಕರಕಲಾಗಿವೆ.

ರಾತ್ರಿ 2 ಗಂಟೆಗೆ ಹೊತ್ತಿ ಉರಿದ ಕೆನರಾ ಬ್ಯಾಂಕ್..! ಎಲ್ಲವೂ ಭಸ್ಮ

ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಗಾರ್ಮೆಂಟ್ಸ್ ಪ್ಯಾಕ್ಟರಿಯಲ್ಲಿದ್ದ ವಸ್ತುಗಳು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ‌ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೈಸೂರು: ಅಯ್ಯಪ್ಪ ಭಕ್ತರಿದ್ದ ಬಸ್‌ ಬೆಂಕಿಗಾಹುತಿ

PREV
click me!

Recommended Stories

ಬೆಂಗಳೂರು ವಾಹನ ಸವಾರರಿಗೆ ಅಲರ್ಟ್; ಅಕ್ಟೋಬರ್‌ನಿಂದ ಜನವರಿವರೆಗೂ ಹೆಚ್ಚಾಗಲಿದೆ ಟ್ರಾಫಿಕ್‌ ತಲೆನೋವು, ಇಲ್ಲಿದೆ ಕಾರಣ!
ಜೈಲಲ್ಲಿ ನಟಿ ಪವಿತ್ರಾ ಗೌಡಗೆ ಬಿಗ್ ಶಾಕ್; ಇಬ್ಬರಿದ್ದ ಬ್ಯಾರಕ್‌ನಿಂದ 16 ಜನ ಇರುವೆಡೆ ಸ್ಥಳಾಂತರ! ಯಾಕೆ ಗೊತ್ತಾ?