ಅಧಿಕಾರಿಗಳ ಬೆಂಡೆತ್ತಿ ಕಂಪ್ಲೀಟ್ ಲಾಕ್‌ಡೌನ್‌ಗೂ ಮುನ್ನ ಸ್ಪಷ್ಟ ಸೂಚನೆ ಕೊಟ್ಟ ಸಿಎಂ

By Suvarna NewsFirst Published Jul 12, 2020, 4:43 PM IST
Highlights

ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಕ್ಲಾಸ್/ ಆಂಬುಲೆನ್ಸ್ ಸಮಸ್ಯೆ ಯಾಕೆ ಆಗುತ್ತಿದೆ?/ ಸಮಸ್ಯೆ ನಿವಾರಣೆ ಮಾಡಿ ಮಾತನಾಡಿ/ ಮಾಧ್ಯಮಗಳ ವರದಿ ನಂತರ ಕೆಂಡಾಮಂಡಲರಾದ ಸಿಎಂ

ಬೆಂಗಳೂರು(ಜು.  12) ಬೆಂಗಳೂರು ಲಾಕ್ ಡೌನ್ ಗೂ ಮುನ್ನ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಂಬುಲೆನ್ಸ್ ಸಮಸ್ಯೆ ಯಾಕೆ ಆಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಲಾಕ್ ಡೌನ್ ಗೂ ಮುನ್ನ ಎಚ್‌ಡಿಕೆ ಸಲಹೆ

ಸರ್ಕಾರ ಸಕಲ ಸವಲತ್ತು ನೀಡಿದ್ದರೂ ಯಾಕೆ ಸಮಸ್ಯೆ ಆಗುತ್ತಿದೆ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಮೆಡಿಕಲ್ ಉಪಕರಣ ಖರೀದಿಗೆ ಮುನ್ನ ಎಚ್ಚರ ವಹಿಸಿ ಎಂದು ತಿಳಿಸಿದ್ದಾರೆ. 

ಸಕಲ ಸೌಕರ್ಯ ನೀಡಲು ಸೂಚನೆ ಮಾಡಿದ್ದರೂ ಮಾಧ್ಯಮಗಳಲ್ಲಿ ಯಾಕೆ ನಿರಂತರ ವರದಿಯಾಗುತ್ತದೆ? ಖಾಸಗಿ ಆಸ್ಪತ್ರೆಗಳು ನೀಡಬೇಕಾದ ಬೆಡ್ ಎಲ್ಲಿ ಹೋದವು? ಇನ್ನು ಮುಂದೆ ಸರಿಯಾಗಿ ಕೆಲಸ ಮಾಡಿ  ಎಂದು ತಿಳಿಸಿದ್ದಾರೆ ಸೋಮವಾರ ಸಹ ಇನ್ನೊಂದು ಸುತ್ತಿನ ಸಭೆ ನಡೆಯಲಿದ್ದು ಬೇರೆ ಜಿಲ್ಲೆಗಳನ್ನು ಲಾಕ್ ಡೌನ್ ಮಾಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. 

 

"

 

click me!