'ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ನಮ್ಮ ಸಮಾಜ ಕಾರಣ: ಶ್ರೀರಾ​ಮುಲುಗೆ DCM ಪಟ್ಟ ಕೊಡಿ'

Kannadaprabha News   | Asianet News
Published : Feb 01, 2020, 10:41 AM ISTUpdated : Feb 03, 2020, 11:51 AM IST
'ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ನಮ್ಮ ಸಮಾಜ ಕಾರಣ: ಶ್ರೀರಾ​ಮುಲುಗೆ DCM ಪಟ್ಟ ಕೊಡಿ'

ಸಾರಾಂಶ

ಶ್ರೀರಾ​ಮುಲುಗೆ ಡಿಸಿಎಂ ಪಟ್ಟ ಕೊಡಿ| ವಾಲ್ಮೀಕಿ ಸಮಾ​ಜ ಪಕ್ಷ​ಭೇದ ಮೆರತು ಬಿಜೆ​ಪಿ​ ಬೆಂಬ​ಲಿ​ಸಿ​ದೆ| ರಾಜ್ಯ​ದಲ್ಲಿ ಬಿಜೆಪಿ ಹೆಚ್ಚು ಸ್ಥಾನ​ಗ​ಳನ್ನು ಗಳಿ​ಸಲು ಸಾಧ್ಯ​ವಾ​ಗಿದೆ| 

ಹೊಸಪೇಟೆ(ಫೆ.01): ವಾಲ್ಮೀಕಿ ಸಮಾಜ ಬೆಂಬಲಿಸಿದ್ದರಿಂದಲೇ ಬಿಜೆಪಿ ರಾಜ್ಯದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕಂಪ್ಲಿಯ ಕಾಂಗ್ರೆಸ್‌ ಶಾಸಕ ಜೆ.ಎನ್‌.ಗಣೇಶ್‌, ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

"

ಪಟ್ಟಣದಲ್ಲಿ ಶುಕ್ರವಾರ ಸುದ್ದಿ​ಗಾರರೊಂದಿ​ಗೆ ಮಾತ​ನಾ​ಡಿದ ಅವರು, ಬಿಜೆಪಿ ಸರ್ಕಾ​ರ​ದಲ್ಲಿ ಶ್ರೀರಾ​ಮುಲು ಅವ​ರಿಗೆ ಉಪಮುಖ್ಯ​ಮಂತ್ರಿ ಸ್ಥಾನ ನೀಡು​ತ್ತಾರೆ ಎಂಬ ವಿಶ್ವಾ​ಸ​ದಿಂದ ರಾಜ್ಯದ ಎಲ್ಲ ವಾಲ್ಮೀಕಿ ಸಮಾ​ಜದ ಬಾಂಧ​ವರು, ಪಕ್ಷ​ಭೇದ ಮೆರತು ಬಿಜೆ​ಪಿ​ಯನ್ನು ಬೆಂಬ​ಲಿ​ಸಿ​ದ್ದಾರೆ. ಇದ​ರಿಂದಾಗಿ ರಾಜ್ಯ​ದಲ್ಲಿ ಬಿಜೆಪಿ ಹೆಚ್ಚು ಸ್ಥಾನ​ಗ​ಳನ್ನು ಗಳಿ​ಸಲು ಸಾಧ್ಯ​ವಾ​ಗಿದೆ ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಾ​ಗಲೇ ವಾಲ್ಮೀಕಿ ಸಮಾ​ಜದ ರಾಜ​ನಹಳ್ಳಿ ಗುರು​ಪೀ​ಠದ ಪೀಠಾ​ಧಿ​ಪ​ತಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃ​ತ್ವ​ದಲ್ಲಿ ವಾಲ್ಮೀಕಿ ಸಮಾ​ಜದ ಮುಖಂಡ​ರಾದ ಶ್ರೀರಾ​ಮುಲು ಹಾಗೂ ರಮೇಶ ಜಾರ​ಕಿ​ಹೊಳಿ ಇಬ್ಬ​ರಲ್ಲಿ ಒಬ್ಬ​ರಿಗೆ ಉಪಮುಖ್ಯ​ಮಂತ್ರಿ ಸ್ಥಾನ ನೀಡು​ವು​ದರ ಜೊತೆಗೆ ವಾಲ್ಮೀಕಿ ಸಮಾ​ಜಕ್ಕೆ 7.5 ಮೀಸ​ಲಾ​ತಿ​ಯನ್ನು ಶೀಘ್ರ ನೀಡಲು ಕ್ರಮ ಕೈಗೊ​ಳ್ಳ​ಬೇಕು ಎಂದು ಮುಖ್ಯ​ಮಂತ್ರಿ ಬಿ.ಎ​ಸ್‌. ​ಯ​ಡಿ​ಯೂ​ರ​ಪ್ಪ​ ಅ​ವ​ರನ್ನು ಒತ್ತಾ​ಯಿ​ಸ​ಲಾ​ಗಿದೆ ಎಂದು ತಿಳಿಸಿದರು.
 

PREV
click me!

Recommended Stories

ಕರಾವಳಿಯಿಂದ ಬೆಂಗಳೂರಿಗೆ ಮಾ. 22 ರಂದು ವಿಶೇಷ ರೈಲು ಘೋಷಣೆ, ಮಡ್ಗಾಂವ್‌ನಿಂದ ಮಂಗಳೂರು ಆಗಿ ರಾಜಧಾನಿಗೆ ಪಯಣ
ಮಾರ್ಚ್‌ 22 ರಂದು ಬೆಂಗಳೂರಿಗೆ ವಿಶೇಷ ಮೆಮು ರೈಲು, ತುಮಕೂರಿನಿಂದ ಯಶವಂತಪುರ ಮಾರ್ಗವಾಗಿ ಬಾಣಸವಾಡಿಗೆ ಪ್ರಯಾಣ