ಕೊರೋನಾ ಆತಂಕ: DCM ಕಾರಜೋಳಗೆ ಕಲಬುರಗಿ ಮಂದಿಯಿಂದ ಶ್ರದ್ಧಾಂಜಲಿ !

Suvarna News   | Asianet News
Published : Mar 19, 2020, 12:27 PM ISTUpdated : Mar 19, 2020, 01:01 PM IST
ಕೊರೋನಾ ಆತಂಕ: DCM ಕಾರಜೋಳಗೆ ಕಲಬುರಗಿ ಮಂದಿಯಿಂದ ಶ್ರದ್ಧಾಂಜಲಿ !

ಸಾರಾಂಶ

ಕೊರೋನಾ ವೈರಸ್‌ ಭೀತಿ| ಕಲಬುರಗಿಯತ್ತ ಮುಖ ಮಾಡದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ| ಸಾಮಾಜಿಕ ಜಾಲತಾಣಗಳಲ್ಲಿ ಕಾರಜೋಳಗೆ ಭಾವಪೂರ್ಣ ಶ್ರದ್ಧಾಂಜಲಿ| ಕಾರಜೋಳ ಮೇಲೆ ಗರಂ ಆದ ಕಲಬುರಗಿ ಮಂದಿ|  

ಕಲಬುರಗಿ(ಮಾ.19): ನಗರದಲ್ಲಿ ಕೊರೋನಾ ವೈರಸ್‌ನಿಂದ ವೃದ್ಧನೊಬ್ಬ ಮೃತಪಟ್ಟ ಬಳಿಕ ಜಿಲ್ಲೆಯ ಜನ ಆತಂಕದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೇಳೆಯಲ್ಲಿ ಜಿಲ್ಲೆಯ ಜನತೆಗೆ ಧೈರ್ಯ ತುಂಬಿ ಆತ್ಮಸ್ಥೈರ್ಯ ಹೇಳಬೇಕಾದ ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ ಇತ್ತ ಕಡೆ ಬಂದಿಲ್ಲ ಎಂದು ಕಲಬುರಗಿ ಮಂದಿ ಆರೋಪಿಸಿದ್ದಾರೆ. 

ಕೊರೋನಾ ಭೀತಿ: ಕಲಬುರಗಿ ಸಂಪರ್ಕಿಸುವ ಎಲ್ಲ ಖಾಸಗಿ ಬಸ್ ರದ್ದು..!

ಈವರೆಗೆ ಮಹಾಮಾರಿ ಕೊರೋನಾಗೆ ಕಲಬುರಗಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಜೊತೆಗೆ ಮೃತಪಟ್ಟ ವೃದ್ಧನ ಮಗಳಿಗೂ ಕೂಡ ಸೋಂಕು ಇರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಬೇಕಾದ ಉಸ್ತುವಾರಿ ಮಂತ್ರಿ ಗೋವಿಂದ ಕಾರಜೋಳ ಮಾತ್ರ ಇತ್ತ ಕಡೆ ಆಗಮಿಸಿಲ್ಲ. 

ಹೀಗಾಗಿ ಇಲ್ಲಿನ ಜನ ಗೋವಿಂದ ಕಾರಜೋಳ ಮೇಲೆ ಗರಂ ಆಗಿದ್ದಾರೆ. ಈ ಸಂಬಂಧ ಕಲಬುರಗಿ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಾರಜೋಳ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎನ್ನುವ ಸಂದೇಶದ ಮೂಲಕ ಆಕ್ರೋಷ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಕಾಟ ಅಷ್ಟಿಷ್ಟಲ್ಲ: ಬರೀ ಕೆಮ್ಮಿದ್ದಕ್ಕೆ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಜನ!

ಕಲಬುರಗಿ ಜಿಲ್ಲೆಯಲ್ಲಿ ಕೊರೋನಾ ಉಲ್ಬಣಗೊಂಡ್ರೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಜಿಲ್ಲೆಯತ್ತ ಸುಳಿದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ. 
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ