ಪ್ರಿಯಾಂಕ್ ಖರ್ಗೆಗೆ ಹಿಡಿದ ಹುಚ್ಚು ಸರಿ ಮಾಡಲು ಜಗತ್ತಿನಲ್ಲಿ ಆಸ್ಪತ್ರೆಯೇ ಇಲ್ಲ: ಕೆ.ಎಸ್. ಈಶ್ವರಪ್ಪ ವಾಗ್ದಾಳಿ

Published : Jul 13, 2025, 03:39 PM IST
KS Eshwarappa

ಸಾರಾಂಶ

ಕೆ.ಎಸ್. ಈಶ್ವರಪ್ಪ ಅವರು ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಬ್ದ ಮಾಲಿನ್ಯ, ಸಿಂಗಂದೂರು ಸೇತುವೆ ಉದ್ಘಾಟನೆ ಮತ್ತು ಹಿಂದುಳಿದ ವರ್ಗಗಳ ಬಗ್ಗೆಯೂ ಮಾತನಾಡಿದ್ದಾರೆ.

ಕಲಬುರಗಿ: ಹಿರಿಯ ರಾಜಕೀಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಶಬ್ದ ಮಾಲಿನ್ಯ, ಸಿಂಗಂದೂರು ಸೇತುವೆ, ಸಿದ್ದರಾಮಯ್ಯ ಅವರ ಐದು ವರ್ಷ ಸಿಎಂ ಘೋಷಣೆ, ಹಾಗೂ ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲದ ಕುರಿತು ಕಲಬುರಗಿಯಲ್ಲಿ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆ ಹೇಳಿಕೆ ಕುರಿತು ಈಶ್ವರಪ್ಪ ವಾಗ್ದಾಳಿ ನಡೆಸಿ ಕೆಂಡಾಮಂಡಲವಾದರು. ಆರ್‌ಎಸ್‌ಎಸ್‌ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ಆರ್‌ಎಸ್‌ಎಸ್ ಇರುವುದರಿಂದಲೇ ದೇಶದಲ್ಲಿ ಹಿಂದುತ್ವ ಉಳಿದಿದೆ. ಪ್ರಿಯಾಂಕ್ ಖರ್ಗೆಗೆ ಹಿಡಿದ ಹುಚ್ಚು ವಾಸಿ ಮಾಡಲು ಪ್ರಪಂಚದಲ್ಲಿ ಯಾವ ಆಸ್ಪತ್ರೆ ಇಲ್ಲ. ಮಿಂಚುಳದಷ್ಟು ಯೋಗ್ಯತೆ ಪ್ರಿಯಾಂಕ್ ಖರ್ಗೆ ಗೆ ಇಲ್ಲ ಆರ್ ಎಸ್ ಎಸ್ ಬಗ್ಗೆ ಮಾತಾಡೋಕೆ ಪ್ರಿಯಾಂಕ್ ಖರ್ಗೆ ಯಾರು ? ಎಂದು ವಾಗ್ದಾಳಿ ನಡೆಸಿದ್ದಾರೆ.

ಆಜಾನ್ ಮತ್ತು ಶಬ್ದ ಮಾಲಿನ್ಯ ನಿಯಂತ್ರಣ

ಶಬ್ದ ಮಾಲಿನ್ಯ ನಿಯಂತ್ರಣದ ಕುರಿತಾಗಿ ಸುಪ್ರೀಂ ಕೋರ್ಟ್‌ ಆದೇಶವಿದೆ. ಪರಿಸರ ಸಂರಕ್ಷಣೆಗಾಗಿ ಶಬ್ದ ಮಾಲಿನ್ಯ ನಿಯಂತ್ರಣ ಅಗತ್ಯವಾಗಿದೆ. ವಿಶೇಷವಾಗಿ ಧಾರ್ಮಿಕ ಸ್ಥಳಗಳಲ್ಲಿ ಜೋರಾಗಿ ಪ್ರಸಾರವಾಗುವ ಆಜಾನ್‌ ಕೂಡ ಇದರೊಳಗೆ ಬರುತ್ತದೆ. ಮಹಾರಾಷ್ಟ್ರದಲ್ಲಿ ಈಗಾಗಲೇ 1500 ಮೈಕ್‌ಗಳನ್ನು ತೆಗೆದುಹಾಕಲಾಗಿದೆ. ಪಠಾಣ್ ಎಂಬ ವ್ಯಕ್ತಿ ಇದನ್ನ ಸ್ವಾಗತ ಮಾಡಿ ಈ ಆದೇಶವನ್ನು ಎಲ್ಲಾ ಎಲ್ಲಾ ಧರ್ಮದವರೂ ಪಾಲಿಸಬೇಕು ಎಂದಿದ್ದಾರೆ. ತಂತ್ರಜ್ಞಾನ ಬಳಸಿ ಆಜಾನ್ ನೀಡಬಹುದು. ಇದೇ ಕ್ರಮ ಕರ್ನಾಟಕದಲ್ಲೂ ಜಾರಿಗೆ ಬರಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ಬಿಜೆಪಿ ಗೊಂದಲವಿಲ್ಲದಿರಬಹುದು, ಆದರೆ...

ಬಿಜೆಪಿಯಲ್ಲಿಯೂ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಧ್ಯಕ್ಷ ಆಯ್ಕೆ ಆಗಬೇಕಿತ್ತು ಇನ್ನೂ ಆಗಿಲ್ಲ. ನಮಗೂ ಕೆಲವೊಂದು ವಿಳಂಬಗಳಿವೆ. ಆದರೆ ಅದು ಸಂಘಟನೆಯ ಅಂತರಂಗದ ವಿಚಾರ. ಬಿಜೆಪಿಯಲ್ಲೂ ಗೊಂದಲ ಇದೆ. ಗೊಂದಲ ಇಲ್ಲ ಅಂತಾ ಹೇಳಿಲ್ಲ ಎಂದರು.

ಸಿಗಂದೂರು ಸೇತುವೆ ಕುರಿತು ಪ್ರೋಟೋಕಾಲ್ ವಿವಾದ

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಿಎಂಗೆ ಆಹ್ವಾನ ನೀಡಿಲ್ಲ ಎಂಬ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ದೊಡ್ಡ ಕಾಮಗಾರಿಗೆ ರಾಜಕೀಯ ವಿಭಜನೆಯಿಂದ ಮೀರಿ ಶ್ಲಾಘನೆ ಬೇಕಾಗುತ್ತದೆ. ಪ್ರೋಟೋಕಾಲ್ ಉಲ್ಲಂಘನೆ ಆಗಬಾರದು. ಸೇತುವೆಯ ಉದ್ಘಾಟನೆಗೆ ಸಂಬಂಧಪಟ್ಟಂತೆ ಎಲ್ಲ ಪಕ್ಷಗಳಿಗೂ ಸೇರಿರುವ ಕ್ರೆಡಿಟ್ ಆಗಿದೆ. ಭಾಜಪ, ಕಾಂಗ್ರೆಸ್, ಜೆಡಿಎಸ್ ಎಲ್ಲರ ಆಡಳಿತದಲ್ಲಿಯೂ ಯೋಜನೆ ಮುಂದುವರಿದಿದೆ ಎಂದರು.

ಸಿದ್ದರಾಮಯ್ಯ ಐದು ವರ್ಷ ಸಿಎಂ ಎನ್ನುವ ಘೋಷಣೆಗೆ ತಿರುಗೇಟು

ಸಿದ್ದರಾಮಯ್ಯ ಅವರ ನಾನು ಐದು ವರ್ಷ ಸಿಎಂ ಆಗುತ್ತೇನೆ ಎಂಬ ಹೇಳಿಕೆಗೆ ಈಶ್ವರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದರು. ದೇಶದಾದ್ಯಂತ ಕಾಂಗ್ರೆಸ್ ನಾಶವಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಜೀವ ಉಳಿದಿದೆ. ಮುಖ್ಯಮಂತ್ರಿಯಾಗಿ ಯಾವ ಹುದ್ದೆ ಘೋಷಣೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಬೇಕು. ಸಿಎಂ ಆಗಿ ನೀವು ತಮ್ಮ ತಾವೇ ಘೋಷಣೆ ಮಾಡಿಕೊಳ್ಳುವುದು ಸರಿ ಅಲ್ಲ ಎಂದ ಅವರು, ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಆಹ್ವಾನಿಸದ ಕಾರಣ, ಗೊಂದಲ ಉಂಟಾಗಿದೆ. ಸುರ್ಜೆವಾಲಾ ಶಾಸಕರ ಸಭೆ ಮಾಡುತ್ತಿರುವುದು ಇದರ ಸಾಕ್ಷಿ, ಎಂದರು.

ಹಿಂದುಳಿದ ವರ್ಗದ ಬಗ್ಗೆ ಟೀಕೆ

ಕೇಂದ್ರದ ಹಿಂದುಳಿದ ವರ್ಗ ಸಮಿತಿಯಲ್ಲಿ ಸಿದ್ದರಾಮಯ್ಯ ಸೇರಿ ಮೂವರು ಇದ್ದರೂ, ಹಿಂದುಳಿದ ವರ್ಗಕ್ಕೆ ಅವರು ಎಂಥ ಪ್ರಗತಿ ತಂದಿದ್ದಾರೆ? ಅವರು ಇದೀಗ ತಮ್ಮ ಸಂಬಂಧಿಕರು ಮತ್ತು ಕೆಲವು ಮತದಾರ ಮುಸ್ಲಿಂರನ್ನು ಮಾತ್ರ ಅವರ ಬಳಿ ಇಟ್ಟುಕೊಂಡಿದ್ದಾರೆ. ತಮ್ಮನ್ನು ದ್ವಿತೀಯ ದೇವರಾಜ್ ಅರಸ್ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ಹಿಂದುಳಿದರಿಗೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಹಿಂದುಳಿದವರ ಹೆಸರಿನಲ್ಲಿ ಸಿಎಂ ಆಗಿದ್ದರೂ, ಕೆಲಸಗಳಿಲ್ಲ ಎಂದು ತೀಕ್ಷ್ಣವಾಗಿ ಟೀಕಿಸಿದರು.

 

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ