ಮುನಿಸು ಸರಿಮಾಡಲು ಪತಿ ಜೊತೆ ಹೋದ ಅನಿತಾ ವಿರುದ್ಧವೇ ಅಸಮಾಧಾನ

By Sujatha NRFirst Published Oct 15, 2020, 3:14 PM IST
Highlights

ಮುನಿಸು ಸರಿಪಡಿಸಲೆಂದು ಪತಿ ಜೊತೆಗೆ ತೆರಳಿದ್ದ ಅನಿತಾ ಕುಮಾರಸ್ವಾಮಿ ವಿರುದ್ಧವೇ ಅಸಮಾಧಾನ ತಿರುಗಿ ಬಿದ್ದಿದೆ. 

ರಾಮ​ನ​ಗ​ರ (ಅ.15): ಬಿಡ​ದಿಯ ಕೇತ​ಗಾ​ನ​ಹ​ಳ್ಳಿಯ ತೋಟದ ಮನೆ​ಯಲ್ಲಿ ಮಾಜಿ ಸಿಎಂ ಕುಮಾ​ರ​ಸ್ವಾಮಿ ಅವರು ನಡೆ​ಸಿದ ಸಭೆ​ಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯ​ಕ​ರ್ತರು ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡ​ದಿ​ರುವ ವಿಚಾ​ರ​ವನ್ನು ಪ್ರಸ್ತಾ​ಪಿಸಿ ಬೇಸರ ವ್ಯಕ್ತ​ಪ​ಡಿ​ಸಿ​ದರು ಎಂದು ತಿಳಿದು ಬಂದಿದೆ.

ಸಭೆ​ಯಲ್ಲಿ ಅನೇ​ಕರು ಶಾಸಕಿ ಅನಿತಾ ಅವರ ಕಾರ್ಯ​ವೈ​ಖರಿ ಬಗ್ಗೆ ಅಸ​ಮಾ​ಧಾ​ನದ ಮಾತು​ಗ​ಳ​ನ್ನಾ​ಡಿ​ದರು ಎಂದು ವಿಶ್ವಾ​ಸ​ನೀಯ ಮೂಲ​ಗ​ಳಿಂದ ಗೊತ್ತಾ​ಗಿ​ದೆ. ರಾಮ​ನ​ಗರ ಶಾಸಕಿ ಅನಿ​ತಾ ಅ​ವರು ಕ್ಷೇತ್ರಕ್ಕೆ ಬರದ ಕಾರಣ ಜನರ ಆಕ್ರೋಶ ಹೆಚ್ಚಾ​ಗು​ತ್ತಿದೆ. ಶಾಸ​ಕರ ಗೈರು, ವಿರೋಧ ಪಕ್ಷ​ಗಳ ನಾಯ​ಕರ ಹೆಚ್ಚಿದ ಓಡಾ​ಟ​ಗಳ ಬಗ್ಗೆ ಕಾರ್ಯ​ಕ​ರ್ತರು ನೋವು ತೋಡಿ​ಕೊಂಡಿ​ದ್ದಾರೆ.

ಮುನಿಸು ಸರಿ ಮಾಡಲು ಪತ್ನಿ ಜೊತೆಗೆ ದಿಢೀರ್ ತೆರಳಿದ್ರು ಎಚ್‌ಡಿಕೆ ...

ರಾಮ​ನ​ಗ​ರ​ದಲ್ಲಿ ಶಾಸಕರ ಪಿಎ ಯಾರು ಅಂತಲೇ ಗೊತ್ತಾ​ಗು​ತ್ತಿಲ್ಲ. ತಮ್ಮ ವ್ಯಾಪ್ತಿಯ ಅಭಿ​ವೃದ್ಧಿ ಸಮ​ಸ್ಯೆ​ಗ​ಳನ್ನು ಹೇಳಿ​ಕೊ​ಳ್ಳಲು ಸರಿ​ಯಾದ ವ್ಯಕ್ತಿ​ಯನ್ನು ಗುರು​ತಿಸಿ ಕೊಡಿ ಎಂದು ಕಾರ್ಯ​ಕ​ರ್ತರು ಮನವಿ ಮಾಡಿ​ಕೊಂಡರು ಎಂದು ಗೊತ್ತಾ​ಗಿ​ದೆ.

ಕೈಲಾಂಚ ಹೋಬಳಿ ಮುಖಂಡರು - ಕಾರ್ಯ​ಕ​ರ್ತರ ಸಭೆಗೆ ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಗೈರಾ​ಗಿ​ದ್ದರು. ಕುಮಾ​ರ​ಸ್ವಾಮಿ ಅವರೇ ಪ್ರತಿ​ಯೊಬ್ಬ ಮುಖಂಡ ಮತ್ತು ಕಾರ್ಯ​ಕ​ರ್ತನ ಅಹ​ವಾಲು ಆಲಿಸಿ, ಪರಿ​ಹಾರ ಕಲ್ಪಿ​ಸುವ ಭರ​ವಸೆ ನೀಡಿ​ದ​ರು.

click me!