ಜೆಡಿಎಸ್ ಶಾಸಕಗೂ ತಟ್ಟಿದ ಕೊರೋನಾ : ಸಂಪರ್ಕಿತರಿಗೆ ಕ್ವಾರಂಟೈನ್

Suvarna News   | Asianet News
Published : Aug 25, 2020, 03:09 PM IST
ಜೆಡಿಎಸ್ ಶಾಸಕಗೂ ತಟ್ಟಿದ ಕೊರೋನಾ : ಸಂಪರ್ಕಿತರಿಗೆ ಕ್ವಾರಂಟೈನ್

ಸಾರಾಂಶ

ಹಲವು ರಾಜಕೀಯ ಮುಖಂಡರನ್ನು ಕಾಡಿದ ಕೊರೋನಾ ಇದೀಗ ಜೆಡಿಎಸ್ ಶಾಸಕರೋರ್ವರಿಗೂ ತಟ್ಟಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸನ (ಆ.25): ಮಹಾಮಾರಿ ಕೊರೋನಾ ಇದೀಗ ಹಾಸನ ಶಾಸಕರಿಗೂ ತಟ್ಟಿದೆ. 

ಹಾಸನ ಶಾಸಕ ಶಿವಲಿಂಗೇಗೌಡರಿಗೆ  ಟೆಸ್ಟ್ ವೇಳೆ ಕೊರೋನಾ ಪಾಸಿಟಿವ್ ಬಂದಿದೆ. 

ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

8 ದಿನ ಕ್ವಾರಂಟೈನ್ ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ. ಶಿವಲಿಂಗೇಗೌಡರ ಸಂಪರ್ಕದಲ್ಲಿದ್ವರಿಗೂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ. 

ಕಲಬುರಗಿ: ಸಂಸದ ಡಾ.ಜಾಧವ್‌ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು...

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಕೊರೋನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈಗಾಗಲೇ ಹಲವು ರಾಜಕೀಯ ಮುಖಂಡರಿಗೆ ಕೊರೋನಾ ಮಹಾಮಾರಿ ತಟ್ಟಿದ್ದು, ಹಲವರು ಗುಣಮುಖರಾಗಿ ಮರಳಿದ್ದಾರೆ. 

ಮುಂಡರಗಿ: ಕೊರೋನಾ ವಾರಿಯರ್‌ ವೈದ್ಯನ ನೆರವಿಗೆ ಧಾವಿಸಿದ ಸರ್ಕಾರ...

ಸಿಎಂ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಅವರಿಗೂ ಕೊರೋನಾ ತಟ್ಟಿ ಗುಣಮುಖರಾಗಿದ್ದಾರೆ.

PREV
click me!

Recommended Stories

ಪೂಜೆಗೆ ಮಚ್ಚೆ ಇಲ್ಲದ ನಗ್ನ ಫೋಟೋ ಕಳ್ಸು ₹30 ಲಕ್ಷ ಕೊಡ್ತೇನೆ, ರಾಮನಗರದಲ್ಲಿ ಮಹಿಳೆಗೆ ಕಿರುಕುಳ
ಮಹಿಳೆ ಜೊತೆ ಅಕ್ರಮ ಸಂಬಂಧ ಹಿನ್ನಲೆ, ಚಿತ್ರದುರ್ಗದಲ್ಲಿ ಮನೆಗೆ ನುಗ್ಗಿ ವ್ಯಕ್ತಿಯ ಭೀಕರ ಹತ್ಯೆ