ಜೆಡಿಎಸ್ -ಬಿಜೆಪಿ ನಡುವೆ ಮತ್ತೊಂದು ಮೈತ್ರಿ : ಗೆದ್ದಿದ್ದು ಜೆಡಿಎಸ್‌ನವರು-ಅಧಿಕಾರ ಬಿಜೆಪಿಗೆ

Kannadaprabha News   | Asianet News
Published : Nov 21, 2020, 11:33 AM ISTUpdated : Nov 21, 2020, 11:47 AM IST
ಜೆಡಿಎಸ್ -ಬಿಜೆಪಿ ನಡುವೆ ಮತ್ತೊಂದು ಮೈತ್ರಿ : ಗೆದ್ದಿದ್ದು ಜೆಡಿಎಸ್‌ನವರು-ಅಧಿಕಾರ ಬಿಜೆಪಿಗೆ

ಸಾರಾಂಶ

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮತ್ತೊಂದು ಮೈತ್ರಿ ಇದೀಗ ಸಕ್ಸಸ್ ಆಗಿದೆ. ಈ ಮೈತ್ರಿಯಲ್ಲಿ ಅಧಿಕಾರ ಬಿಜೆಪಿಗೆ ಒಲಿದಿದೆ. 

ಕೆ.ಆರ್‌. ನಗರ (ನ.21): ಮಂಡ್ಯದ ಡಿಸಿಸಿ ಬ್ಯಾಂಕ್‌ ಮಾದರಿಯಲ್ಲೇ ಕೆ.ಆರ್‌.ನಗರದ ಟಿಎಪಿಸಿಎಂಎಸ್‌ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಶುಕ್ರವಾರ ಯಶಸ್ವಿಯಾಗಿದೆ. 

ಅಧ್ಯಕ್ಷ ಹುದ್ದೆಗೆ ಬಿಜೆಪಿಯ ಎಚ್‌.ಡಿ.ಪ್ರಭಾಕರ ಜೈನ್‌ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಎಚ್‌.ಆರ್‌.ಮಹೇಶ್‌ ಆಯ್ಕೆಯಾಗಿದ್ದಾರೆ.

ರಾಜ್ಯದ ಇಬ್ಬರು ಬಿಜೆಪಿ ಮುಖಂಡರು 6 ವರ್ಷ ಉಚ್ಛಾಟನೆ ..

ಕಳೆದ ವಾರ ಟಿಎಪಿಎಸ್‌ಎಂಎಸ್‌ನ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲದಿಂದ 7 ಮಂದಿ ನಿರ್ದೇಶಕರು ಮತ್ತು ಜೆಡಿಎಸ್‌ ಬೆಂಬಲಿತ 5 ಮಂದಿ ಆಯ್ಕೆಯಾಗಿದ್ದರು. 

ಬಿಜೆಪಿಯ ಯಾವುದೇ ಸದಸ್ಯರು ಚುನಾಯಿತರಾಗದಿದ್ದರೂ ಮಂಡ್ಯದ ಡಿಸಿಸಿ ಬ್ಯಾಂಕ್‌ ಚುನಾವಣೆ ರೀತಿಯಲ್ಲೇ ಸರ್ಕಾರದಿಂದ ಟಿಎಪಿಸಿಎಂಎಸ್‌ಗೆ ನಾಮನಿರ್ದೇಶಿತ ಎಚ್‌.ಡಿ.ಪ್ರಭಾಕರ ಜೈನ್‌ ಅವರು ಜೆಡಿಎಸ್‌ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು.

PREV
click me!

Recommended Stories

ಮದುವೆ ಆಮಿಷವೊಡ್ಡಿ ಟೆಕ್ಕಿಗೆ 1.53 ಕೋಟಿ ರೂ. ವಂಚನೆ: ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಕಿರಾತಕ ಸೆರೆ!
Mandya News: ಸಾಲಬಾಧೆಯಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮ*ಹತ್ಯೆ; ತಾಯಿಗೆ ಹೃದಯಾಘಾತ