ಪ್ರತಿಷ್ಠಾಪನೆ ಮಾಡಿದ್ದ ಗಣೇಶಮೂರ್ತಿಯೇ ಕಳುವು

By Suvarna NewsFirst Published Sep 12, 2021, 11:16 AM IST
Highlights
  • ಮಕ್ಕಳು ಪ್ರತಿಷ್ಠಾಪನೆ ಮಾಡಿದ್ದ ಗಣೇಶಮೂರ್ತಿಯೇ ಕಳುವು
  • ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಘಟನೆ 

ಮಂಡ್ಯ (ಸೆ.12): ಮಕ್ಕಳು ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶ ಮೂರ್ತಿ ಕಳವಾಗಿರುವ ಘಟನೆ   ನಡೆದಿದೆ. 

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿ ಪ್ರತಿಷ್ಟಾಪಿಸಿದ್ದ ಗಣಪನ ಮೂರ್ತಿಯನ್ನು  ಇಂದು ಮುಂಜಾನೆ ಸಮಯದಲ್ಲಿ ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. 

ಕೊಪ್ಪಳ: ಇಲ್ಲಿ ಇಲಿಗೂ ಸಲ್ಲುತ್ತೆ ಪೂಜೆ..!

ಗಣಪನ ಮೂರ್ತಿ ಕಳವಿನಿಂದ ಮಕ್ಕಳು ಮಹಿಳೆಯರು ಹಾಗು ಇಲ್ಲಿನ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. ಗಣೇಶ ಹಬ್ಬದ ನಿಮಿತ್ತ ಪ್ರತಿಷ್ಠಾಪಿಸಿದ್ದ ಮೂರ್ತಿ ಕಳುವಾಗಿದ್ದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. 

ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

click me!