ಕೂಡ್ಲಿಗಿ: ಹೆತ್ತವರ ಮಡಿಲಿಗೆ ಬಾಲಕಿ ಸೇರಿಸಿದ ವಾಟ್ಸಾಪ್‌

Kannadaprabha News   | Asianet News
Published : Sep 12, 2021, 10:46 AM ISTUpdated : Sep 12, 2021, 11:02 AM IST
ಕೂಡ್ಲಿಗಿ: ಹೆತ್ತವರ ಮಡಿಲಿಗೆ ಬಾಲಕಿ ಸೇರಿಸಿದ ವಾಟ್ಸಾಪ್‌

ಸಾರಾಂಶ

*   ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಘಟನೆ *   ವಾಟ್ಸಪ್‌ ಮೂಲಕ ಬಾಲಕಿಯ ಫೋಟೋ ಶೇರ್‌  *   ಮನೆಯ ದಾರಿ ಕಾಣದೇ ಅಳುತ್ತಾ ಹಳೇ ಆಸ್ಪತ್ರೆ ಬಳಿ ನಿಂತಿ​ದ್ದ ಬಾಲಕಿ  

ಕೂಡ್ಲಿಗಿ(ಸೆ.12): ಗಣೇಶ ಮೂರ್ತಿ ತರುವವರ ಹಿಂದೆ ಖುಷಿಯಲ್ಲಿ ಹೋದ 3 ವರ್ಷದ ಪುಟ್ಟ ಬಾಲಕಿಯೊಬ್ಬಳು ಕೂಡ್ಲಿಗಿಯಲ್ಲಿ ಅನಾಥವಾಗಿ ಅಳುತ್ತಿರುವುದನ್ನು ಕಂಡು ಸ್ಥಳೀಯರು ವಾಟ್ಸಪ್‌ ಮೂಲಕ ಬಾಲಕಿಯ ಫೋಟೋ ಶೇರ್‌ ಮಾಡಿ ಪೋಷಕರ ಮಡಿಲು ಸೇರಿಸಿದ್ದಾರೆ.

ಗಣೇಶ ಚತುರ್ಥಿ ದಿನವಾದ ಶುಕ್ರವಾರ ಬೆಳಗ್ಗೆ ಗಣೇಶ ಮೂರ್ತಿ ತರಲು ಕೂಡ್ಲಿಗಿ ಪಟ್ಟಣದ ಸಂಘಟಕರು ಹೋಗುತ್ತಿದ್ದಾಗ ಆ ಗುಂಪಿನ ಜೊತೆಯಲ್ಲಿ ಹೋದ ಬಾಲಕಿ ತನುಜಾ (3) ಮನೆಯ ದಾರಿ ಕಾಣದೇ ಅಳುತ್ತಾ ಹಳೇ ಆಸ್ಪತ್ರೆ ಬಳಿ ನಿಂತಿ​ದ್ದಳು.

ಇನ್ನು ಮುಂದೆ ವಾಟ್ಸಪ್‌ನಲ್ಲೇ ಕೋವಿಡ್‌ ಲಸಿಕೆ ಪ್ರಮಾಣ ಪತ್ರ!

ಇದನ್ನು ಗಮನಿಸಿದ ಪಟ್ಟಣದ ಮೈದಾನ ಗೆಳೆಯರ ಬಳಗದ ಸದಸ್ಯ ಎಲೆಕ್ಟ್ರಿಷನ್‌ ಮಂಜುನಾಥ ಆ ಬಾಲಕಿಯನ್ನು ಕೂಡ್ಲಿಗಿ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ. ತಕ್ಷಣ ಕೂಡ್ಲಿಗಿ ಪೊಲೀಸರು ಮತ್ತು ಮೈದಾನ ಗೆಳೆಯರ ಬಳಗದ ಸದಸ್ಯರು ವಾಟ್ಸಾಪ್‌ ಸಂದೇಶದಲ್ಲಿ ಬೆಳಗ್ಗೆ 7 ಗಂಟೆಗೆ ಬಾಲಕಿ ಸಿಕ್ಕಿರುವ ಬಗ್ಗೆ ಬಾಲಕಿ ಫೋಟೋ ಹಾಕಿದ್ದರು. ವಾಟ್ಸಪ್‌ಗೆ ಈ ಬಾಲಕಿಯ ಪೋಟೋ ಹರಿದಾಡುತ್ತಿದ್ದಾಗ ಬೆಳಗ್ಗೆ 11ಗಂಟೆ ಸುಮಾರಿಗೆ ಮಗಳನ್ನು ಕಳಕೊಂಡ ಹೆತ್ತವರು ಕೂಡ್ಲಿಗಿ ಠಾಣೆಗೆ ಬಂದು ನಮ್ಮ ಮಗಳು ಎಂದು ತಿಳಿಸಿದ್ದಾರೆ. ಪೊಲೀಸರು ವಿಚಾರಿಸಿ ಹೆತ್ತವರ ಮಾಹಿತಿ ಪಡೆದು ಪೋಷಕರಿಗೆ ನೀಡಿದ್ದಾರೆ. ಈ ಬಾಲಕಿ ಮೊಳಕಾಲ್ಮೂರು ತಾಲೂಕಿನ ಚಿಕ್ಕೇರಹಳ್ಳಿಯವರಾಗಿದ್ದು ಸುಮಾ ಅಂಜಿನಪ್ಪ ದಂಪತಿ ಮಗಳು. ಕೂಡ್ಲಿಗಿಯ ಸಂಬಂಧಿಕರ ಮನೆಗೆ ಬಂದಾಗ ಈ ಘಟನೆ ನಡೆದಿದೆ.

ಕೂಡ್ಲಿಗಿ ಪೊಲೀಸರ ಕಾರ್ಯ ಹಾಗೂ ಜನತೆ ವ್ಯಾಟ್ಸಪ್‌ ಮೂಲಕ ಬಾಲಕಿ ಬಗ್ಗೆ ಫೋಟೋ ಮಾಹಿತಿ ಹಾಕಿ ಸಹಾಯ ಮಾಡಿದ್ದಕ್ಕೆ ಬಾಲಕಿಯರ ಪಾಲಕ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
 

PREV
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ