ವಿವಾಹಿತನ ಜತೆ ಯುವತಿ ಪರಾರಿ, ಹುಡ್ಗಿ ಪೋಷಕರಿಗೆ ವಿಷ್ಯಾ ಮುಟ್ಟಿಸಿದ ಹೆಂಡ್ತಿ: ಬಳಿಕ ನಡೆದಿದ್ದು ಘನಘೋರ

Published : May 12, 2019, 06:13 PM IST
ವಿವಾಹಿತನ ಜತೆ ಯುವತಿ ಪರಾರಿ, ಹುಡ್ಗಿ ಪೋಷಕರಿಗೆ ವಿಷ್ಯಾ ಮುಟ್ಟಿಸಿದ ಹೆಂಡ್ತಿ: ಬಳಿಕ ನಡೆದಿದ್ದು ಘನಘೋರ

ಸಾರಾಂಶ

ಯುವತಿಯೊಬ್ಬಳು ವಿವಾಹಿತ ಪ್ರಿಯಕರನ ಜತೆ ಪರಾರಿಯಾಗಿದ್ದು, ಈ ವಿಷಯವನ್ನು ಆತನ  ಹೆಂಡತಿ, ಯುವತಿಯ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ನಡೆದ ಘಟನೆ ಘನಘೋರ ದುರಂತ. 

ಬೆಂಗಳೂರು, [ಮೇ.12]: ಪ್ರೀತಿಸಿದವನ ಜತೆ ಮಗಳು ಓಡಿಹೋದ ಎಂಬ ಕಾರಣಕ್ಕೆ ಮನನೊಂದ ತಂದೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ಸಂಜಯ್​​ಗಾಂಧಿ ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಉದಯ್ ಎಂಬವನ ಜತೆ ವೇದಾವತಿ ಎಂಬಾಕೆ ಓಡಿಹೋಗಿದ್ದಾಳೆ. ಮಗಳು ಓಡಿ ಹೋಗಿದ್ದಕ್ಕೆ ನೊಂದ ತಂದೆ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಗೆ ಬಂದು ಹೋಗುತ್ತಿದ್ದ ಉದಯ್, ವೇದಾವತಿಯ ಸ್ನೇಹ ಬೆಳಸಿಕೊಂಡಿದ್ದ. ಬಳಿಕ ಇಬ್ಬರು ಪರಾರಿಯಾಗಿದ್ದರು.ಈ ವಿಷಯವನ್ನು ಉದಯ್‌ ಪತ್ನಿ ವೇದಾವತಿ ಪಾಲಕರಿಗೆ ವಿಷಯ ತಿಳಿಸಿದ್ದಾರೆ.

ಇದ್ರಿಂದ ನೊಂದ ಯುವತಿಯ ತಂದೆ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಗಳು ವೇದಾವತಿ ವಿರುದ್ಧ ದೂರು ದಾಖಲಾಗಿದೆ.

PREV
click me!

Recommended Stories

Dharwad Love Jihad Case: ಲವ್ ಜಿಹಾದ್‌ಗೆ ಹೆದರಿ ಬಾಲಕಿ ಸಾವು; ಪ್ರತಿಭಟನೆ ಮಾಡಿದ ಬಜರಂಗದಳ ನಾಯಕನ ಮೇಲೆ ಕೇಸ್!
Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!