ನಡು ರಸ್ತೆಯಲ್ಲೇ ಅಬಕಾರಿ ಅಧಿಕಾರಿಗಳ ಮಾರಾಮಾರಿ

By Kannadaprabha NewsFirst Published Apr 16, 2020, 8:29 AM IST
Highlights
ನಡುರಸ್ತೆಯಲ್ಲೇ ಅಬಕಾರಿ ಉಪ ಅಧೀಕ್ಷಕರೊಬ್ಬರ ಮೇಲೆ ಅಬಕಾರಿ ಇನ್ಸ್‌ಪೆಕ್ಟರ್‌ನಿಂದ ಏಕಾಏಕಿ ಹಲ್ಲೆಯಾದ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ಬಡಿದಾಡಿಕೊಂಡ ವೀಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಮಡಿಕೇರಿ(ಏ.16): ನಡುರಸ್ತೆಯಲ್ಲೇ ಅಬಕಾರಿ ಉಪ ಅಧೀಕ್ಷಕರೊಬ್ಬರ ಮೇಲೆ ಅಬಕಾರಿ ಇನ್ಸ್‌ಪೆಕ್ಟರ್‌ನಿಂದ ಏಕಾಏಕಿ ಹಲ್ಲೆಯಾದ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳು ಬಡಿದಾಡಿಕೊಂಡ ವೀಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಘಟನೆ ನಡೆದಿದ್ದು, ನಡು ರಸ್ತೆಯಲ್ಲಿಯೇ ಅಬಕಾರಿ ಇಲಾಖೆ ಅಧಿಕಾರಿಗಳು ಕಿತ್ತಾಡಿಕೊಂಡಿದ್ದಾರೆ. ಮದ್ಯ ಅಕ್ರ​ಮ ಮಾರಾಟ ಪರಿಶೀಲನೆಗೆ ಸ್ಥಳಕ್ಕೆ ಅಬಕಾರಿ ಉಪ ಅಧೀಕ್ಷಕರು ತೆರಳಿದ್ದರು.

ಸತತ 11ನೇ ದಿನವೂ ದಕ್ಷಿಣ ಕನ್ನಡ ಕೊರೋನಾ ಮುಕ್ತ

ಬಳಿಕ ಸ್ಥಳಕ್ಕೆ ಬಂದಿದ್ದ ಅಬಕಾರಿ ಇನ್ಸ್‌ಪೆಕ್ಟರ್‌ ಹಾಗೂ ಕಾರು ಚಾಲಕನಿಂದ ಉಪ ಅಧೀ​ಕ್ಷ​ಕರ ಮೇಲೆ ಹಲ್ಲೆಯಾಗಿದೆ. ಅವಾಚ್ಯ ಶಬ್ದ ಬಳಸಿ ಅಬಕಾರಿ ಉಪ ನಿರೀಕ್ಷಕ, ಇನ್ಸ್‌ಪೆಕ್ಟರ್‌ ಕಿತ್ತಾಡಿಕೊಂಡಿರುವುದು ವಿಡಿ​ಯೋ​ದಲ್ಲಿ ಕಂಡು ಬಂದಿ​ದೆ.
click me!