ಮುಂಚೂಣಿ ನಾಯಕರಲ್ಲಿ ಧ್ರುವನಾರಾಯಣ್‌ ಒಬ್ಬರು

By Kannadaprabha NewsFirst Published Mar 18, 2023, 5:20 AM IST
Highlights

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನ ಆಶಯದಂತೆ ನಡೆಯುತ್ತಿದ್ದ ಮುಂಚೂಣಿ ನಾಯಕರಲ್ಲಿ ಆರ್‌. ಧ್ರುವನಾರಾಯಣ… ಅವರು ಒಬ್ಬರು ಎಂದು ಶಾಸಕ ಎಂ. ಅಶ್ವಿನ್‌ಕುಮಾರ್‌ ಅಭಿಪ್ರಾಯಪಟ್ಟರು.

 ಟಿ. ನರಸೀಪುರ :  ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಸಂವಿಧಾನ ಆಶಯದಂತೆ ನಡೆಯುತ್ತಿದ್ದ ಮುಂಚೂಣಿ ನಾಯಕರಲ್ಲಿ ಆರ್‌. ಧ್ರುವನಾರಾಯಣ… ಅವರು ಒಬ್ಬರು ಎಂದು ಶಾಸಕ ಎಂ. ಅಶ್ವಿನ್‌ಕುಮಾರ್‌ ಅಭಿಪ್ರಾಯಪಟ್ಟರು.

ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಭಾರತ ದೇಶಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ಒಟ್ಟು ಅಪ್ರತಿಮ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ, ಧ್ರುವನಾರಾಯಣ್‌ ಅವರ ಸುದೀರ್ಘ 25 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ಲೂ ಕೂಡ ಒಂದು ಕಪ್ಪು ಚುಕ್ಕಿ ಇಲ್ಲದಂತೆ ಪಕ್ಷತೀತ, ಧರ್ಮತೀತ ಹಾಗೂ ಜಾತ್ಯತೀತವಾಗಿ ರಾಜಕಾರಣ ಮಾಡಿರುವಂತಹ ಏಕೈಕ ರಾಜಕಾರಣಿ ಎಂದರೆ ಆದು ದಿವಂಗತ ಧ್ರುವನಾರಾಯಣ ಅವರು ಎಂದರು.

ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಶಿಕಾಂತ್‌ ಮಾತನಾಡಿ, ಪಟ್ಟಣದ ಅಂಬೇಡ್ಕರ್‌ ಭವನ ಆವರಣದ ನೂತನ ವಾಣಿಜ್ಯ ಮಳಿಗೆಗೆ ಆರ್‌. ಧ್ರುವನಾರಾಯಣ್‌ ಅವರ ಹೆಸರು ನಾಮಕರಣ ಮಾಡಿ ಅವರಿಗೆ ಗೌರವ ಸಲ್ಲಿಸೋಣ ಎಂದು ಕರೆ ನೀಡಿದರು.

ಜಿಪಂ ಮಾಜಿ ಅಧ್ಯಕ್ಷ ಸಿದ್ದಾರ್ಥ, ಮಾಜಿ ಸದಸ್ಯ ಮಂಜುನಾಥ್‌, ವೀರಶೈವ ಮಹಾಸಭಾ ಅಧ್ಯಕ್ಷ ಮಹಾದೇವಸ್ವಾಮಿ, ಖಾಸಗಿ ಬಸ್‌ ಏಜೆಂಟ್‌ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಪುಟ್ಟರಾಜು, ನಾಯಕ ಸಂಘದ ಅಧ್ಯಕ್ಷ ಚಿಕ್ಕಣ್ಣ, ಬಾಬು ಜಗಜೀವನ್‌ ರಾಮ… ಸಂಘದ ಅಧ್ಯಕ್ಷ ಪುಟ್ಟಯ್ಯ, ಜಿಲ್ಲಾ ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಬಿ.ಆರ್‌. ಪುಟ್ಟಸ್ವಾಮಿ, ಪುರಸಭೆ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ ಇದ್ದರು.

ದರ್ಶನ್‌ಗೆ ಟಿಕೆಟ್

ಮೈಸೂರು (ಮಾ.16): ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಂಸದ ಆರ್‌. ಧ್ರುವನಾರಾಯಣ ಅವರ ಪುತ್ರ ದರ್ಶನ್‌ ಅವರಿಗೆ ಟಿಕೆಟ್‌ ನೀಡುವಂತೆ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮನವಿ ಮಾಡಿದ್ದಾರೆ. ಬುಧವಾರ ಸಂಜೆ ಮೈಸೂರಿನ ವಿಜಯನಗರದಲ್ಲಿರುವ ಧ್ರುವನಾರಾಯಣ ಅವರ ನಿವಾಸಕ್ಕೆ ಭೇಟಿ ನೀಡಿ, ಪುತ್ರ ದರ್ಶನ್‌ಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಕೂಡ ಇದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮಹದೇವಪ್ಪ, ನನ್ನ ಸಂಪೂರ್ಣ ಬೆಂಬಲ ದರ್ಶನ್‌ಗೆ ಇದೆ. ನನ್ನ ಆತ್ಮಸಾಕ್ಷಿ ಪ್ರಕಾರ ಈ ನಿರ್ಧಾರ ಮಾಡಿದ್ದೇನೆ. 

ಸಿದ್ದರಾಮಯ್ಯ ಅಥವಾ ಇನ್ಯಾವ ರಾಜಕೀಯ ನಾಯಕರ ಜೊತೆಯೂ ನಾನು ಈ ಬಗ್ಗೆ ಚರ್ಚೆ ಮಾಡಿಲ್ಲ. ಇವತ್ತಿನಿಂದ ನಂಜನಗೂಡು ಚುನಾವಣಾ ವಿಚಾರದಲ್ಲಿ ನಾನು ದರ್ಶನ್‌ನನ್ನು ಬೆಂಬಲಿಸುತ್ತೇನೆ ಎಂದರು. ಧ್ರುವನಾರಾಯಣ ಜೊತೆ ನನಗೆ ಯಾವತ್ತೂ ರಾಜಕೀಯ ಭಿನ್ನಾಭಿಪ್ರಾಯ ಇರಲಿಲ್ಲ. ನಂಜನಗೂಡು ಉಪ ಚುನಾವಣೆಯಲ್ಲಿ ನನ್ನ ಮಗ ಸುನಿಲ್‌ ಬೋಸ್‌ ಗೆ ಟಿಕೆಚ್‌ ಕೊಡಿ ಎಂದು ಹಲವರು ಒತ್ತಾಯಿಸಿದ್ದರು. ಆದರೆ ಕಳಲೆ ಕೇಶವಮೂರ್ತಿ ಗೆ ಹೈಕಮಾಂಡ್ ಟಿಕೆಚ್‌ ಕೊಟ್ಟಿತ್ತು. ನಾನು ನಂಜನಗೂಡು ಅಭಿವೃದ್ಧಿ ಮಾಡಿದ್ದು ನೋಡಿ ನನಗೆ ಅಲ್ಲಿಯೆ ಸ್ಪರ್ಧಿಸುವಂತೆ ಜನ ಕರೆದ ಕಾರಣ ನಂಜನಗೂಡು ಸ್ಪರ್ಧೆಗೆ ನಿರ್ಧರಿಸಿದ್ದೆ. ನಾನು ಧ್ರುವನಾರಾಯಣ್‌ ಇಬ್ಬರು ಅರ್ಜಿ ಹಾಕಿದ್ದು ಸತ್ಯ. ಧ್ರುವನಾರಾಯಣ ಅಗಲಿಕೆಯಿಂದ

ಅನಾಥ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ಶಿಫಾರಸ್ಸು

ದಲಿತ ಸಮುದಾಯಕ್ಕೆ ಬಹು ದೊಡ್ಡ ನಷ್ಟವಾಗಿದೆ. ಸಮಾಧಿಯ ಮೇಲೆ ರಾಜಕೀಯ ಮಾಡುವ ವ್ಯಕ್ತಿ ನಾನಲ್ಲ. ಸಮಾಧಿ ಮೇಲೆ ರಾಜಕೀಯ ಬೆಳೆ ತೆಗೆಯುವ ವ್ಯಕ್ಯಿತ್ವ ನನ್ನದ್ದಲ್ಲ. ಅಧಿಕಾರದ ರಾಜಕಾರಣಕ್ಕೆ ಯಾವತ್ತೂ ಅಂಟಿ ಕೂತಿಲ್ಲ. ವ್ಯಕ್ತಿಗಿಂತ ಅಧಿಕಾರ, ಅಂತಸ್ತು ಮುಖ್ಯವಲ್ಲ. ನನ್ನ ಮಗ ಸುನಿಲ್‌ ಬೋಸ್‌ ಬೇರೆ ಅಲ್ಲ. ದರ್ಶನ್‌ ಬೇರೆಯಲ್ಲ.ದರ್ಶನ್‌ ಜೊತೆ ನಿಲ್ಲುವುದು ನನ್ನ ಕರ್ತವ್ಯ. ಧ್ರುವನಾರಾಯಣ್‌ ಸಾವಿನಲ್ಲೂ ಗಳ ಇರಿಯುವ ಕೆಲಸ ಮಾಡಬಾರದು. ಕೆಲವರು ಈ ಕೆಲಸ ಮಾಡಿದ್ದಕ್ಕೆ ನನಗೆ ಬೇಸರವಿದೆ ಎಂದರು.

ಮಹದೇವಪ್ಪ ನಿರ್ಧಾರಕ್ಕೆ ಕಾರಣ ಏನು?: ಮಹದೇವಪ್ಪ ಅವರು ಪಕ್ಕದ ಟಿ. ನರಸೀಪುರ ಕ್ಷೇತ್ರದಿಂದ ಐದು ಬಾರಿ ಗೆದ್ದು, ಮೂರು ಬಾರಿ ಸೋತವರು. ಈ ಬಾರಿ ಟಿ. ನರಸೀಪುರದಲ್ಲಿ ಪುತ್ರ ಸುನಿಲ್‌ ಬೋಸ್‌ಗೆ ಟಿಕೆಟ್‌ ಕೊಡಿಸಿ ತಾವು ನಂಜನಗೂಡಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಲು ಬಯಸಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ಆರ್‌. ಧ್ರುವನಾರಾಯಣ ಅವರು ಕೂಡ ನಂಜನಗೂಡು ಕ್ಷೇತ್ರದಿಂದಲೇ ಸ್ಪರ್ಧಿಸಿ ಬಯಸಿ ತಯಾರಿ ನಡೆಸಿದ್ದರು. ಹೀಗಾಗಿ ಇಬ್ಬರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸ್‌ ಮಾಡಲಾಗಿತ್ತು. ಇಬ್ಬರ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೆಟ್‌ ಕೊಡಬೇಕು ಎಂದು ವೀಕ್ಷಕರ ಎದುರು ಆಗ್ರಹಿಸಿದ್ದರು. ಇದರಿಂದ ಇಬ್ಬರಲ್ಲಿ ಯಾರಿಗೆ ಟಿಕೆಟ್‌ ಎಂಬುದು ಕಗ್ಗಂಟಾಗಿತ್ತು.

ಒಕ್ಕಲಿಗ ಯುವಕನ ಮದುವೆಯಾದ ಐದೇ ದಿನಕ್ಕೆ ಮಸಣ ಸೇರಿದ ದಲಿತ ಯುವತಿ: ಕೊಡಗಿನಲ್ಲಿ ನಡೆಯಿತಾ ಮರ್ಯಾದ ಹತ್ಯೆ?

ಏತನ್ಮಧ್ಯೆ ಧ್ರುವನಾರಾಯಣ ಅವರು ಕಳೆದ ವಾರ ತೀವ್ರ ಹೃದಯಾಘಾತದಿಂದ ನಿಧನರಾದರು. ಅಂದಿನಿಂದಲೂ ಧ್ರುವನಾರಾಯಣ ಅವರ ಪುತ್ರ ದರ್ಶನ್‌ಗೆ ಟಿಕೆಟ್‌ ನೀಡುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದರು. ಪಾರ್ಥಿವ ಶರೀರ ದರ್ಶನಕ್ಕೆ ಬಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಶವ ಸಂಸ್ಕಾರ ಕಾಲಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಎದುರು ಘೋಷಣೆ ಕೂಗಿದ್ದರು. ಇದರಿಂದಾಗಿ ನಂಜನಗೂಡು ಕ್ಷೇತ್ರದ ಟಿಕೆಟ್‌ ವಿಚಾರ ವರಿಷ್ಠರಿಗೆ ತಲೆಬಿಸಿಯಾಗಿತ್ತು. ಇದೆಲ್ಲದರ ನಡುವೆ ಡಾ. ಮಹದೇವಪ್ಪ ಅವರು ಟಿಕೆಟ್‌ ಪಡೆದರೂ ಕಷ್ಟ. ಪಡೆಯದಿದ್ದರೂ ಕಷ್ಟಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಅಂತ್ಯವಾಡಲು ಮಹದೇವಪ್ಪ ಈ ನಿರ್ಧಾರಕ್ಕೆ ಬಂದಿದ್ದಾರೆ.

click me!