ಕುಷ್ಟಗಿ: ರಜೆಗೆ ಗ್ರಾಮಕ್ಕೆ ಬಂದ ಯೋಧನಿಗೂ ವಕ್ಕರಿಸಿತು ಕೊರೋನಾ...!

Kannadaprabha News   | Asianet News
Published : Jun 29, 2020, 07:33 AM IST
ಕುಷ್ಟಗಿ: ರಜೆಗೆ ಗ್ರಾಮಕ್ಕೆ ಬಂದ ಯೋಧನಿಗೂ ವಕ್ಕರಿಸಿತು ಕೊರೋನಾ...!

ಸಾರಾಂಶ

ಸಿಆರ್‌ಪಿಎಫ್‌ ಯೋಧನಿಗೆ ಕೊರೋನಾ ಸೋಂಕು ದೃಢ| ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಯರಿಗೋನಾಳ ಗ್ರಾಮದಲ್ಲಿ ನಡೆದ ಘಟನೆ| ಹೈದರಾಬಾದ್‌ನಿಂದ ತನ್ನ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದ ಯೋಧ|

ಕುಷ್ಟಗಿ(ಜೂ.29): ಹೈದರಾಬಾದ್‌ನಿಂದ ಕುಷ್ಟಗಿ ತಾಲೂಕಿನ ಯರಿಗೋನಾಳದಲ್ಲಿರುವ ತನ್ನ ಸ್ವಗ್ರಾಮಕ್ಕೆ ರಜೆ ಮೇಲೆ ಬಂದಿದ್ದ ಸಿಆರ್‌ಪಿಎಫ್‌ ಯೋಧನಿಗೆ ಕೊರೋನಾ ಸೋಂಕು ದೃಢವಾದ ಹಿನ್ನೆಲೆ, ಅಕ್ಕ-ಪಕ್ಕದ 11 ಮನೆಗಳ ನಿವಾಸಿಗಳನ್ನು ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ.

ಸಿಆರ್‌ಪಿಎಫ್‌ ಯೋಧ ಕಳೆದ 15 ದಿನಗಳ ಹಿಂದೆ ಬಂದಿರುವ ಹಿನ್ನೆಲೆಯಲ್ಲಿ 7 ದಿನಗಳ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿತ್ತು. ಕ್ವಾರಂಟೈನ್‌ ಮುಗಿಯುತ್ತಿದ್ದಂತೆ ಸ್ಥಳೀಯ ಹೂಲಗೇರಾ ಆಸ್ಪತ್ರೆಯಲ್ಲಿ ಗಂಟಲು ದ್ರವ ಸಂಗ್ರಹಿಸಲಾಗಿತ್ತು. 

ಕೊಪ್ಪಳ: ಸಚಿವ ಸುರೇಶ್‌ ಕುಮಾರ್‌ಗೆ SSLC ವಿದ್ಯಾರ್ಥಿಗಳಿಂದ ಅಭಿನಂದನಾ ಪತ್ರ

ಸೋಂಕು ದೃಢಪಟ್ಟಿದ್ದು, ಪಿಡಿಒ ವೆಂಕಟೇಶ ವಂದಾಲ್‌ ನೇತೃತ್ವದಲ್ಲಿ ಯೋಧನ ಮನೆಯ ಅಕ್ಕಪಕ್ಕದ 11 ಮನೆಗಳ ನಿವಾಸಿಗಳಿಗೆ ಹೋಂ ಕೋರಂಟೈನ್‌ ಕಡ್ಡಾಯಗೊಳಿಸಲಾಯಿತು.
 

PREV
click me!

Recommended Stories

ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!
ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ