ಸೀಡಿ ಕೇಸ್ : ಕೈ ಮುಖಂಡ ಗೋಪಾಲಕೃಷ್ಣ ಗಂಭೀರ ಆರೋಪ

By Kannadaprabha NewsFirst Published Mar 22, 2021, 3:16 PM IST
Highlights

ರಾಜ್ಯದಲ್ಲಿ  ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ಸಾಕಷ್ಟು ಸದ್ದಾಗುತ್ತಲೇ ಇದ್ದು, ಇದೀಗ ಕೈ ಮುಖಂಡರೋರ್ವರು ಗಂಭೀಋ ಆರೋಪ ಮಾಡಿದ್ದಾರೆ. 

ಶಿವಮೊಗ್ಗ (ಮಾ.22):  ಮಾಜಿ ಸಚಿವ ರಮೇಶ್‌ ಜಾರಕಿಹೋಳಿಯವದು ಎನ್ನಲಾದ ಅಶ್ಲೀಲ ಸಿ.ಡಿ.ಯಿಂದ ದೇಶದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಸಿ.ಡಿ.ಯದ್ದೇ ದೃಶ್ಯಾವಳಿಗಳ ಜೊತೆಗೆ ವಿವರಣೆ ಬರುತ್ತಿದೆ. ಇದರಿಂದ ಮನೆ ಮಂದಿಯೆಲ್ಲ ಮುಜುಗರಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟುಮನೆಗಳಲ್ಲಿ ರಾಜ್ಯ ಸರ್ಕಾರದ ಸಿ.ಡಿ.ಯಿಂದ ಟಿವಿ ನೋಡುವುದನ್ನೇ ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುವ ಮೂಲಕ ರಾಜ್ಯದ ಮರ್ಯಾದೆ ರಾಷ್ಟ್ರ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗಿದೆ. ತನಿಖೆ ಪೂರ್ಣಗೊಳಿಸಿ ನಿಯಂತ್ರಿಸಬೇಕಾಗಿದ್ದ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬನೀತಿ ಅನುಸರಿಸಿ ಸರ್ಕಾರದ ವಿಫಲತೆಯನ್ನು ಮುಚ್ಚಲು ಈ ಪ್ರಕರಣ ದಾಳವಾಗಿಸಿಕೊಂಡಿದೆ ಎಂದರು.

ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ...

ರಾಜ್ಯ ಸರ್ಕಾರದಲ್ಲಿ ಮಂತ್ರಿಯ ಆಕಾಂಕ್ಷೆ ಹೊಂದಿದವರು ಬಹಳಷ್ಟುಜನರಿದ್ದು, ಅವರಲ್ಲಿಯೇ ಯಾರೋ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಒಂದೆಡೆ ರಮೇಶ್‌ ಜಾರಕಿಹೋಳಿ ಅವರನ್ನು ಹದ್ದುಬಸ್ತಿನಲ್ಲಿಟ್ಟು, ಇನ್ನೊಂದೆಡೆ ತಾವು ಸಚಿವರಾಗುವ ಹುನ್ನಾರ ಇದರಲ್ಲಡಗಿದೆ. ಮುಂಜಾಗ್ರತಾ ಕ್ರಮವಿಲ್ಲದ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣದಲ್ಲಿ ವಿಫಲವಾಗಿದೆ. ಸೋಂಕು ಹರಡದಂತೆ ವಯೋಮಾನದ ಮಿತಿಯನ್ನು ಹೇರದೇ ಎಲ್ಲ ಜನರಿಗೂ ಸುಲಭವಾಗಿ ಶೀಘ್ರ ಲಸಿಕೆ ಹಾಕುವ ಯೋಜನೆ ಮಾಡಬೇಕಿದೆ. ಮುಂಜಾಗ್ರತಾ ಕ್ರಮದೊಂದಿಗೆ ಸೋಂಕು ನಿಯಂತ್ರಿಸಬೇಕು ಎಂದರು.

ವಿದ್ಯುತ್‌ ಕಣ್ಣುಮುಚ್ಚಾಲೆಯಲ್ಲಿ ಶಾಸಕರ ನಾಟಕ:

ಹೊಸನಗರ ತಾಲೂಕಿನಾದ್ಯಂತ ಕಳೆದ ಕೆಲವು ತಿಂಗಳುಗಳಿಂದ ಗುಣಮಟ್ಟವಿಲ್ಲದ ವಿದ್ಯುತ್‌ನಿಂದ ರೈತರು ತಮ್ಮ ಹೊಲ-ಗದ್ದೆಗಳಿಗೆ ನೀರುಣಿಸಲಾಗದೇ ಹೈರಾಣಾಗಿದ್ದಾರೆ. ಆದರೆ, ಇಲ್ಲಿನ ಶಾಸಕರು ಮಾತ್ರ ಕಾಗೋಡು ತಿಮ್ಮಪ್ಪ ಅವರು ಮಂಜೂರು ಮಾಡಿದ್ದ ವಿದ್ಯುತ್‌ ಪರಿವರ್ತಕಗಳನ್ನು ಉದ್ಘಾಟಿಸಿ, ಗುಣಮಟ್ಟದ ವಿದ್ಯುತ್‌ ನೀಡಿದ್ದೇನೆ ಎಂದು ನಾಟಕವಾಡುತ್ತಿದ್ದಾರೆ. ವಾಸ್ತವದ ಅರಿವೇ ಇಲ್ಲದ ಶಾಸಕರಿಂದ ಅಭಿವೃದ್ಧಿ ನಿರೀಕ್ಷಿಸುವುದಾದರೂ ಹೇಗೆ? ಶರಾವತಿ ಮುಳುಗಡೆ ಭಾಗದಲ್ಲಿ ನಾಡಿಗೆ ಬೆಳಕು ನೀಡಿದರೂ ನಮ್ಮ ಬುಡ ಕತ್ತಲೆಯಾಗಿದೆ ಎಂದು ಆರೋಪಿಸಿ, ಸಾರ್ವಜನಿಕರು ಪಾದಯಾತ್ರೆ ಮೂಲಕ ಕಳಪೆ ಗುಣಮಟ್ಟದ ವಿದ್ಯುತ್‌ ನೀಡಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಒಂದೇ ಒಂದು ವಿದ್ಯುತ್‌ ಸರಬರಾಜು ಘಟಕವಾಗಲೀ, ಉಪವಿದ್ಯುತ್‌ ವಿತರಣಾ ಘಟಕವಾಗಲೀ ಮಂಜೂರು ಮಾಡಿಸದ ಶಾಸಕರು, ಜನರ ಮುಂದೆ ಹಗಲು ನಾಟಕ ಮಾಡುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯ- ಕೇಂದ್ರ ಸರ್ಕಾರಗಳ ಜನರ ವಿರೋಧಿ ನೀತಿ, ಕ್ಷೇತ್ರ ಅಭಿವೃದ್ಧಿಯಲ್ಲಿ ಶಾಸಕರ ನಿರ್ಲಕ್ಷ್ಯದ ವಿರುದ್ಧ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

click me!