ಬಿಎಸ್‌ವೈ ಅತ್ತಿಗೆ ಶಾರದಮ್ಮ ನಿಧನ : ಅಂತಿಮ ದರ್ಶನ ಪಡೆದ BSY

By Kannadaprabha NewsFirst Published Oct 5, 2021, 9:19 AM IST
Highlights
  • ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಹೋದರ ದಿ.ಮಹದೇವಪ್ಪ ಅವರ ಪತ್ನಿ ಶಾರದಮ್ಮ ನಿಧನ
  • ಅತ್ತಿಗೆಯ ನಿಧನದ ಸುದ್ದಿ ತಿಳಿದ ಯಡಿಯೂರಪ್ಪ ಹುಟ್ಟೂರು ಬೂಕನಕೆರೆಗೆ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು

ಕೆ.ಆರ್‌.ಪೇಟೆ (a.05): ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರ ಸಹೋದರ ದಿ.ಮಹದೇವಪ್ಪ ಅವರ ಪತ್ನಿ ಶಾರದಮ್ಮ (82) ವಯೋ ಸಹಜ ಕಾಯಿಲೆಯಿಂದ ಸೋಮವಾರ ನಿಧನರಾದರು. ಅತ್ತಿಗೆಯ ನಿಧನದ ಸುದ್ದಿ ತಿಳಿದ ಯಡಿಯೂರಪ್ಪ ಹುಟ್ಟೂರು ಬೂಕನಕೆರೆಗೆ (Bhukanakere) ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.

ಪಾರ್ಥೀವ ಶರೀರಕ್ಕೆ ಮಾಲಾರ್ಪಣೆ ಮಾಡಿದರು. ತಾಯಿಯಂತಿದ್ದ ಶಾರದಮ್ಮ ನಿಧನ ನನಗೆ ದುಃಖ ತರಿಸಿದೆ. ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದರು. ಪುತ್ರಿ ಪದ್ಮ, ಸಹೋದರಿ ಪ್ರೇಮಮ್ಮ ಜೊತೆಗೂಡಿ ಮೃತರ ಅಂತಿಮ ದರ್ಶನ ಪಡೆದರು. ಬೂಕನಕೆರೆ ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ವಿಧಿವಿಧಾನಗಳ ಮೂಲಕ ಮೃತರ ಅಂತ್ಯಕ್ರಿಯೆ ನಡೆಯಿತು.

Latest Videos

ರಾಜಕೀಯ ಬದುಕನ್ನೇ ಪಣಕ್ಕಿಟ್ಟು ಆನಂದ್ ಸಿಂಗ್‌ ಹೋರಾ​ಟ : BSY ಗುಣಗಾನ

ತೆಂಡೇಕೆರೆ ಬಾಳೇಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಶ್ರೀಗಳು, ಗವೀಮಠದ ಸ್ವತಂತ್ರ ಸಿದ್ದಲಿಂಗ ಚನ್ನವೀರ ಶ್ರೀಗಳು, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌ ಯಡಿಯೂರಪ್ಪ ಸಹೋದರಿಯ ಪುತ್ರರಾದ ಕೆಎಂಎಫ್‌ ನಿರ್ದೇಶಕ ಎಸ್‌.ಸಿ.ಅಶೋಕ್‌, ಮುಖ್ಯಮಂತ್ರಿಗಳ ಮಾಜಿ ವಿಶೇಷಾಧಿಕಾರಿ ಎಸ್‌.ಸಿ.ಅರವಿಂದ್‌ ಇದ್ದರು.

ಹದಗೆಟ್ಟಹುಟ್ಟೂರ ರಸ್ತೆ ಬಗ್ಗೆ ಬಿಎಸ್‌ವೈ ಅಸಮಧಾನ

ಅತ್ತಿಗೆ ನಿಧನದ ಹಿನ್ನೆಲೆಯಲ್ಲಿ ಬೂಕನಕೆರೆಗೆ ಆಗಮಿಸಿದ್ದ ಬಿ.ಎಸ್‌. ಯಡಿಯೂರಪ್ಪ ಹದಗೆಟ್ಟರಸ್ತೆಗಳ ಬಗ್ಗೆ ಅಸಮಾಧಾನ ಹೊರಹಾಕಿದರು. ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರ ಹಾಗೂ ಈ ಮಾರ್ಗದ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಿದ್ದರೂ ಇದುವರೆಗೂ ರಸ್ತೆಯಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಬಂದ ರಸ್ತೆ ಚೆನ್ನಾಗಿಲ್ಲದ ಕಾರಣ ಬಿಎಸ್‌ ವೈ ಕೆ.ಆರ್‌.ಪೇಟೆ-ನಾWಮÜಂಗಲ-ಬೆಳ್ಳೂರು ಕ್ರಾಸ… ಮೂಲಕ ಬೆಂಗಳೂರಿಗೆ ತೆರಳಿದರು.

ಉತ್ತಮ ಶಾಸಕ

 

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ (BS Yediyurappa) ಅತ್ಯುತ್ತಮ ಶಾಸಕ ಪ್ರಶಸ್ತಿ ಸಿಕ್ಕಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು (ಸೆ.24) ಬಿಎಸ್‌ವೈ ಅವರನ್ನು ಅತ್ಯುತ್ತಮ ಶಾಸಕ  ಎಂದು ಘೋಷಿಸಿದರು.

ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ (Award) ಘೋಷಿಸಲಾಗಿದ್ದು, ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಶಸ್ತಿ ನೀಡಲಾಗಿದೆ.  ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರು ಯಡಿಯೂರಪ್ಪನವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕವನ್ನ ಕೊಂಡಾಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ

ಈ ಕುರಿತು ಮಾತನಾಡಿದ ಸ್ಪೀಕರ್ ಕಾಗೇರಿ, ಹಲವು ರಾಜ್ಯಗಳಲ್ಲಿ ಉತ್ತಮ ಶಾಸಕ (Legislator) ಪ್ರಶಸ್ತಿ ಕೊಡುವ ಸಂಪ್ರದಾಯವಿದೆ.  ಶಾಸಕರಲ್ಲಿ ಅತ್ಯುತ್ತಮ ಸಂಸದೀಯ ಪಟುವನ್ನು ಗುರುತಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ ಎಂದರು.

ಅತ್ಯುತ್ತಮ ಶಾಸಕ ಪ್ರಶಸ್ತಿ ಆಯ್ಕೆಗೆ ಸಮಿತಿಯನ್ನು ರಚನೆ ಮಾಡಲಾಗಿದ್ದು, ಸ್ಪೀಕರ್ ನೇತೃತ್ವದ ಸಮಿತಿಯಲ್ಲಿ ಸಿಎಂ ಬೊಮ್ಮಾಯಿ‌, ಸಿದ್ದರಾಮಯ್ಯ, ಮಾಧುಸ್ವಾಮಿ, ದೇಶಪಾಂಡೆ ಸಮಿತಿ ರಚನೆ ಮಾಡಲಾಗಿತ್ತು ಎಂದು ತಿಳಿಸಿದರು

click me!