ತಂಗಿಗೆ ಬಿಸಿನೀರು ಎರಚಿದ ಅಣ್ಣ: ಮುಖ, ಕೈ ಕಾಲಿನ ತುಂಬ ಸುಟ್ಟ ಗಾಯ

Kannadaprabha News   | Asianet News
Published : Aug 08, 2020, 11:34 AM IST
ತಂಗಿಗೆ ಬಿಸಿನೀರು ಎರಚಿದ ಅಣ್ಣ: ಮುಖ, ಕೈ ಕಾಲಿನ ತುಂಬ ಸುಟ್ಟ ಗಾಯ

ಸಾರಾಂಶ

ಅಣ್ಣನೋರ್ವ ತನ್ನ ತಂಗಿಗೆ ಬಿಸಿನೀರು ಎರಚಿ ಗಾಯಗೊಳಿಸಿದ ಘಟನೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಶೇವಿರೆ ಎಂಬಲ್ಲಿ ನಡೆದಿದ್ದು, ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರು(ಆ.01): ಅಣ್ಣನೋರ್ವ ತನ್ನ ತಂಗಿಗೆ ಬಿಸಿನೀರು ಎರಚಿ ಗಾಯಗೊಳಿಸಿದ ಘಟನೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಶೇವಿರೆ ಎಂಬಲ್ಲಿ ನಡೆದಿದ್ದು, ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಶೇವಿರೆ ನಿವಾಸಿ ನಾರಾಯಣ ನಾಯ್ಕ ಎಂಬವರ ಪುತ್ರಿ ಪವಿತ್ರಾ(22) ಗಾಯಗೊಂಡವರು. ಆಕೆಯ ಅಣ್ಣ ರಮೇಶ ಎಂಬಾತ ಬಿಸಿ ನೀರು ಎರಚಿ ಗಾಯಗೊಳಿಸಿದ ಆರೋಪಿ. ರಮೇಶ್‌ ತನ್ನ ತಂದೆ ತಾಯಿಯ ಜೊತೆಗೆ ಪ್ರತಿದಿನ ಜಗಳ ನಡೆಸುತ್ತಿದ್ದ.

ಕೇರಳದ ಆತ್ಯಾಚಾರಿ ಆರೋಪಿ ಶವ ಕೋಟ ಬೀಚಲ್ಲಿ ಪತ್ತೆ

ಬುಧವಾರ ಈ ಬಗ್ಗೆ ಪ್ರಶ್ನಿಸಿದ ತಂಗಿ ಪವಿತ್ರಾ ಅವರ ಮೇಲೆ ಬಚ್ಚಲು ಮನೆಯಲ್ಲಿ ಸ್ನಾನಕ್ಕೆಂದು ಇರಿಸಿದ್ದ ಬಿಸಿ ನೀರನ್ನು ಎರಚಿದ್ದ. ಇದರಿಂದ ಪವಿತ್ರಾ ಅವರ ಮುಖ, ಕೈ, ಕಾಲುಗಳಲ್ಲಿ ಸುಟ್ಟಗಾಯವಾಗಿದೆ. ಗಾಯಾಳು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪವಿತ್ರಾ ಅವರು ನೀಡಿದ ದೂರಿನಂತೆ ಆರೋಪಿ ರಮೇಶ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!