35 ಟಿಎಂಸಿ ನೀರಿದ್ದರೂ ವಿಜಯನಗರ 11ಎ ಕಾಲುವೆಗೆ ನೀರಿಲ್ಲ: ಸರ್ಕಾರದ ವಿರುದ್ಧ ರೆಡ್ಡಿ, ಶ್ರೀರಾಮುಲು ಆಕ್ರೋಶ

Published : Jul 31, 2026, 05:29 PM IST
Gangavathi News

ಸಾರಾಂಶ

Vijayanagar 11A Canal: ವಿಜಯನಗರ 11 ಎ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಅಂಜನಾದ್ರಿಯಿಂದ ಮುನಿರಾಬಾದ್ ನೀರಾವರಿ ಇಲಾಖೆಯವರಿಗೂ ಬೃಹತ್ ಪ್ರತಿಭಟನೆ ನಡೆಯಿತು.

ಗಂಗಾವತಿ (ಜು.31): ವಿಜಯನಗರ 11 ಎ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಅಂಜನಾದ್ರಿಯಿಂದ ಮುನಿರಾಬಾದ್ ನೀರಾವರಿ ಇಲಾಖೆಯವರಿಗೂ ಬೃಹತ್ ಪ್ರತಿಭಟನೆ ನಡೆಯಿತು. ಅಂಜನಾದ್ರಿ ಬೆಟ್ಟದ ಕೆಳಗೆ ಜಮಾಯಿಸಿದ್ದ ರೈತರು ಅಂಜನಾದ್ರಿ ಬೆಟ್ಟದ ಕೆಳಗೆ ಇರುವ ಪಾದುಕೆಗಳಿಗೆ ಪೂಜೆ ಸಲ್ಲಿಸಿದರು. ಸರಿಯಾದ ಸಮಯಕ್ಕೆ ಕಾಲುವೆಗೆ ನೀರು ಬಿಡದ ಕಾರಣ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಜೊತೆಗೆ ಬಿಜೆಪಿ ಪಕ್ಷಕ್ಕೆ ಜಯ ಘೋಷಿಸಿದರು. ವಿಜಯನಗರ ಕಾಲುವೆಯ ವ್ಯಾಪ್ತಿಗೆ ಬರುವ 15 ಗ್ರಾಮಗಳ ರೈತರು ಭಾಗವಹಿಸಿದ್ದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದ ಅವರು ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರೆಯನ್ನು ಮುಖ್ಯಮಂತ್ರಿಗಳು ಅಲಕ್ಷಿಸುತ್ತಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯಲ್ಲಿ ಕಾಲ ಕಳೆಯುತ್ತಿದ್ದಾರೆಂದು ದೂರಿದರು. ಈ ಹಿಂದೆ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ರೈತರಿಗೆ ನೀರಿನ ತೊಂದರೆಯಾಗದಂತೆ ರೈತರ ಹಿತ ಕಾಡುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸುತ್ತಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು. ಜಲಾಶಯದಲ್ಲಿ 35 ಟಿಎಂಸಿ ನೀರು ಇದೆ,15 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದರೂ ಸಹ ನೀರು ಬಿಡಲು ಮೀನಾಮೇಷ ಮಾಡುತ್ತಿದೆ ಎಂದು ಅರೋಪಿಸಿದರು. ರೈತರು ಕಣ್ಣೀರು ಹಾಕುತ್ತಿದ್ದಾರೆ. ರೈತರ ಶಾಪ ಸರ್ಕಾರಕ್ಕೆ ತಲುಪುತ್ತದೆ ಎಂದರು.

ಸಮಯ ವ್ಯರ್ಥ

ಮಾಜಿ ಸಂಸದ ಬಿ.ಶ್ರೀರಾಮುಲು ಮಾತನಾಡಿ ನಮ್ಮ ನೀರು, ನಮ್ಮ ಹಕ್ಕು ಎನ್ನುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸದೆ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇದರಿಂದ ನೀರಾವರಿ ಯೋಜನೆಗಳು ಅಧೋಗತಿಯತ್ತಸಾಗಿವೆ ಎಂದರು.

ಕೂಡಲೆ ವಿಜಯನಗರ ಕಾಲುವೆ 11 ಎ ನೀರು ಬಿಡ ಬೇಕೆಂದು ಒತ್ತಾಯಿಸಿದ ಅವರು ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿಗಳು ಕಾಂಗ್ರೆಸ್ ಸರ್ಕಾರ ಇದ್ದ ಕಡೆ ನೀರಾವರಿ ಯೋಜನೆ ಬಗ್ಗೆ ಎಚ್ಚೆತ್ತುಕೊಳ್ಳುತ್ತದೆ. ತಮಿಳುನಾಡಿಗೆ 4.56 ಟಿಎಂಸಿ ನೀರನ್ನು ಕಾವೇರಿಯಿಂದ ಬಿಡುಗಡೆ ಮಾಡಿದ್ದಾರೆ ಎಂದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕುಡಿಯುವ ನೀರಿಗೆ ಕಾಲುವೆಗೆ ಬಿಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ರೈತರ ಕೃಷಿಗಳ ಬಗ್ಗೆ ಕಾಳಜಿ ಇಲ್ಲ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ವಿಜಯನಗರ ಕಾಲುವೆ 11 ಎ .ಹಳೆಯದಾದ ಕಾಲುವೆಯಾಗಿದೆ. ಈ ಭಾಗದಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ನೀರು ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಡಲೆ ಸರ್ಕಾರ ಗಮನಹರಿಸಬೇಕೆಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದ ಅವರು ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರೆಯನ್ನು ಮುಖ್ಯಮಂತ್ರಿಗಳು ಅಲಕ್ಷಿಸುತ್ತಿದ್ದಾರೆ. ಸಚಿವ ಸಂಪುಟದ ವಿಸ್ತರಣೆಯಲ್ಲಿ ಕಾಲ ಕಳೆಯುತ್ತಿದ್ದಾರೆಂದು ದೂರಿದರು.
-ಜನಾರ್ದನ ರೆಡ್ಡಿ, ಶಾಸಕರು ಗಂಗಾವತಿ

ನಮ್ಮ ನೀರು, ನಮ್ಮ ಹಕ್ಕು ಎನ್ನುವ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸದೆ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಸಮಯ ವ್ಯರ್ಥ ಮಾಡುತ್ತಿದ್ದರೆ. ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಇದರಿಂದ ನೀರಾವರಿ ಯೋಜನೆಗಳು ಅಧೋಗತಿಯತ್ತಸಾಗಿವೆ ಎಂದರು.
-ಬಿ.ಶ್ರೀರಾಮುಲು, ಮಾಜಿ ಸಂಸದ ಬಳ್ಳಾರಿ

ವಿಜಯನಗರ ಕಾಲುವೆ 11 ಎ .ಹಳೆಯದಾದ ಕಾಲುವೆಯಾಗಿದೆ. ಈ ಭಾಗದಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ನೀರು ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೂಡಲೆ ಸರ್ಕಾರ ಗಮನಹರಿಸ ಬೇಕು.
-ಪರಣ್ಣ ಮುನವಳ್ಳಿ, ಮಾಜಿ ಶಾಸಕರು

PREV
Read more Articles on
click me!

Recommended Stories

ಪ್ರತಾಪ್ ಸಿಂಹಗೆ ಸಕಲೇಶಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಓಪನ್ ಚಾಲೆಂಜ್ ಹಾಕಿದ ಚಾಮರಾಜ ಕ್ಷೇತ್ರದ ಶಾಸಕ!
164 ಎಕರೆ ಭೂಸ್ವಾಧೀನ ಕೈಬಿಟ್ಟ ಕರ್ನಾಟಕ ಗೃಹ ಮಂಡಳಿ, ರೈತರು ನಿರಾಳ