ಶಿವಮೊಗ್ಗ ಜನಶತಾಬ್ದಿಗೆ ಮತ್ತೊಂದು ನಿಲ್ದಾಣ : ಒಂದೇ ನಿಮಿಷ ಸ್ಟಾಪ್

Suvarna News   | Asianet News
Published : Jan 15, 2020, 01:42 PM IST
ಶಿವಮೊಗ್ಗ ಜನಶತಾಬ್ದಿಗೆ ಮತ್ತೊಂದು ನಿಲ್ದಾಣ : ಒಂದೇ ನಿಮಿಷ ಸ್ಟಾಪ್

ಸಾರಾಂಶ

ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಸಂಚರಿಸುವ ಜನಶತಾಬ್ದಿ ರೈಲು ಮತ್ತೊಂದು ಕಡೆ ನಿಲ್ಲಲಿದೆ. ಇಂದಿನಿಂದಲೇ ತರಿಕೆರೆಯಲ್ಲಿ 1 ನಿಮಿಷ ನಿಂತು ತೆರಳಲಿದೆ. 

ತರೀಕೆರೆ (ಜ.15): ಸಂಕ್ರಾಂತಿಯ ಕೊಡುಗೆಯಾಗಿ ಶಿವಮೊಗ್ಗ ದಿಂದ ಬೆಂಗಳೂರಿಗೆ ಪ್ರತಿನಿತ್ಯ ತೆರಳುವ ಪ್ರಯಾಣಿಕರ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಇಂದಿನಿಂದ [ ಜ.15 ರಿಂದ]  ತರೀಕೆರೆ  ರೈಲು ನಿಲ್ದಾಣದಲ್ಲಿ ನಿಂತು ಹೊರಡಲಿದೆ .

ತರೀಕೆರೆ ರೈಲು ನಿಲ್ದಾಣದಲ್ಲಿ ಜನಶತಾಬ್ದಿ ರೈಲು ನಿಲುಗಡೆ ಆಗಬೇಕೆಂದು ಇಲ್ಲಿನ ರೈಲು ಪ್ರಯಾಣಿಕರ ಬಹುದಿನದ ಬೇಡಿಕೆಯಾಗಿತ್ತು. ಅದರಂತೆ ಇಲ್ಲಿ ಇನ್ಮುಂದೆ ರೈಲು ನಿಲ್ಲಲಿದೆ. ಆದರೆ ಒಂದು ನಿಮಿಷ ಮಾತ್ರ ಇಲ್ಲಿ ರೈಲು ನಿಂತು ತೆರಳಲಿದೆ.

ಶಿವಮೊಗ್ಗ - ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲು...

ಶಾಸಕ ಕೃತಜ್ಞತೆ: ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ಪ್ರಯಾಣಿಕರ ಜನ್ಮಶತಾಬ್ದಿ ರೈಲು ನಿಲುಗಡೆಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ರೈಲ್ವೆ ಸಚಿವರಿಗೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಶಾಸಕ ಡಿ.ಎಸ್.ಸುರೇಶ್ ಅವರು ಕೃತಜ್ಞತೆ ಅರ್ಪಿಸಿ, ರೈಲು ನಿಲುಗಡೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್..

ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರ ಜನಶತಾಬ್ದಿ ರೈಲು ನಿಲ್ದಾಣಕ್ಕೆ ಬೆಳಗ್ಗೆ 6 ಗಂಟೆ ವೇಳೆಗೆ ಬರುತ್ತದೆ.

ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು 9.50ಕ್ಕೆ ಯಶವಂತಪುರ ತಲುಪುತ್ತದೆ.

PREV
click me!

Recommended Stories

ವಧು-ವರ ಇಲ್ಲದೆ ಹುಬ್ಬಳ್ಳೀಲಿ ಆರತಕ್ಷತೆ!
ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!