ಬೆಳಗಾವಿಯ ಯೋಧ ದೆಹಲಿಯಲ್ಲಿ ವಿಧಿವಶ

Published : Feb 25, 2019, 05:39 PM ISTUpdated : Feb 25, 2019, 05:42 PM IST
ಬೆಳಗಾವಿಯ ಯೋಧ ದೆಹಲಿಯಲ್ಲಿ ವಿಧಿವಶ

ಸಾರಾಂಶ

ಅನಾರೋಗ್ಯಕ್ಕೆ ತುತ್ತಾಗಿ ಬೆಳಗಾವಿಯ ಯೋಧ ವಿಧಿವಶ! ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಸಾವು!,ಉತ್ತರ ಪ್ರದೇಶದ ಮೀರತ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ.

ಬೆಳಗಾವಿ, (ಫೆ.25): ಅನಾರೋಗ್ಯಕ್ಕೆ ತುತ್ತಾಗಿ ಬೆಳಗಾವಿಯ ಯೋಧ ವಿಧಿವಶರಾಗಿದ್ದಾರೆ.

ಮಂಜುನಾಥ ಮುಸಲ್ಮಾರಿ(24) ವಿಧಿವಶರಾದ ಯೋಧ. ಮಂಜುನಾಥ ಮುಸಲ್ಮಾರಿ ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರು ಗ್ರಾಮದವರಾಗಿದ್ದು, ದೆಹಲಿಯ ಆರ್‍ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೋಲೊಪ್ಪದ ಪತ್ನಿ: ಹುತಾತ್ಮ ಗಂಡನ ಸಮವಸ್ತ್ರ ಧರಿಸಿ ಸೇನೆಗೆ ಸೇರ್ತಾರೆ ಗೌರಿ!

ಮಂಜುನಾಥ್ ಅವರು ಉತ್ತರ ಪ್ರದೇಶದ ಮೀರತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು (ಸೋಮವಾರ) ಸ್ವಗ್ರಾಮ ಮಾವನೂರಿಗೆ ಮಂಜುನಾಥ್ ಅವರ ಪಾರ್ಥಿವ ಶರೀರ ಆಗಮಿಸಲಿದೆ.  ಬಳಿಕ ಅಂತ್ಯ ಸಂಸ್ಕಾರ ನಡೆಯಲಿದೆ.

ಹುತಾತ್ಮ ಯೋಧನ ಮನೆಯಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿದೆ.

PREV
click me!

Recommended Stories

ಬೆಂಗಳೂರು to ಹುಬ್ಬಳ್ಳಿ ವಂದೇ ಭಾರತ್, ಜನಶತಾಬ್ದಿ ಸೇರಿ ಒಟ್ಟು 7 ರೈಲು ರದ್ದು! ಯಾವ ಜಿಲ್ಲೆಗಳಿಗೆ ಎಫೆಕ್ಟ್?
ಹಿಂದೂ ಮದುವೆ, ಮುಸ್ಲಿಮರ ಸಾರಥ್ಯ: ಅನ್ಯಧರ್ಮದ ಮಕ್ಕಳಿಗೆ ಆಸರೆಯಾದ ಮುಲ್ಲಾ ದಂಪತಿ