ಮದರಸಾಗಳನ್ನು ಬ್ಯಾನ್‌ ಮಾಡಿ: ಪ್ರಮೋದ ಮುತಾಲಿಕ್‌

By Kannadaprabha NewsFirst Published Sep 29, 2022, 8:04 PM IST
Highlights

ದೇಶ ಅಸ್ಥಿರಗೊಳಿಸುವ ವಿಚ್ಛಿದ್ರಕಾರಿ ಶಕ್ತಿಗಳ ಸಂಚು ಫಲಿಸದು: ಪ್ರಮೋದ ಮುತಾಲಿಕ್‌ ಗುಡುಗು

ರಬಕವಿ-ಬನಹಟ್ಟಿ(ಸೆ.29):  ದೇಶಾದ್ಯಂತ ಭಯೋತ್ಪಾದನೆ ಹಾಗೂ ಜಿಹಾದಿಗಳ ಉತ್ಪಾದನಾ ಕಂಪನಿಗಳಾಗಿ ಬೆಳೆಯುತ್ತಿರುವ ಮದರಸಾಗಳನ್ನು ನಿಷೇ​ಧಿಸಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಆಗ್ರಹಿಸಿದರು. ಬನಹಟ್ಟಿಯಲ್ಲಿ ಭಗತ್‌ ಸಿಂಗ್‌ರ 115ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಿಎಫ್‌ಐ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಕೇಂದ್ರ ಸರ್ಕಾರ 5 ವರ್ಷಗಳ ಕಾಲ ನಿಷೇಧ ವಿ​ಧಿಸುವ ಮೂಲಕ ಸಮಾಜದ ವಿಘಟನೆ ಹಾಗೂ ದೇಶ ಅಸ್ಥಿರಗೊಳಿಸಲು ಪ್ರಯತ್ನಿಸುವ ವಿಚ್ಛಿದ್ರಕಾರಿ ಶಕ್ತಿಗಳ ಸಂಚು ಫಲಿಸದು ಎಂಬ ಸ್ಪಷ್ಟಸಂದೇಶ ನೀಡಿದೆ ಎಂದರು.

2014 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 36 ಹಿಂದೂ ಕಾರ್ಯಕರ್ತರ ಕೊಲೆ ನಡೆದಿವೆ. ಅದರಲ್ಲಿ 13 ಪ್ರಕರಣಗಳ ಪ್ರಾಥಮಿಕ ವರದಿಯಲ್ಲಿ ಎಸ್‌ಪಿಡಿಐ ಹಾಗೂ ಪಿಎಫ್‌ಐ ಸಂಘಟನೆಗಳ ಮತಾಂಧರದ್ದೇ ಇದೆ. ದೇಶದ 23 ರಾಜ್ಯಗಳಲ್ಲಿ ಈ ಸಂಘಟನೆಗಳ ಅಕ್ರಮದ ಬೇರು ಬಿಟ್ಟಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಆಕ್ರಮಿಸಿಕೊಂಡಿತ್ತು. ಕೇಂದ್ರದ ನಿರ್ಧಾರದಿಂದ ಮುಸ್ಲಿಂ ದೇಶದ್ರೋಹಿಗಳಿಗೆ ತಲ್ಲಣವುಂಟಾಗಿದೆ. ಮುಸ್ಲಿಂ ಯುವಕರು ದಾರಿ ತಪ್ಪುವುದನ್ನು ಹಿರಿಯರು ಬೆಂಬಲಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ಅವರ ಮೇಲೂ ಕ್ರಮ ಕೈಗೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ತಿಳಿಸಿದರು.

PFI Ban ಸ್ವಾಗತಿಸಿದ ಮುತಾಲಿಕ್: ಮುಧೋಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮಹಾಂತಯ್ಯ ಹಿರೇಮಠ, ಬ್ರಿಜ್‌ಮೋಹನ ಡಾಗಾ, ಗುಂಜಗಾಂವಿ, ನಂದು ಗಾಯಕವಾಡ, ಶಂಕರ ಸೊರಗಾಂವಿ, ಶ್ರೀಶೈಲ ಬೀಳಗಿ, ರಾಚು ಶಿರೋಳ, ಬಸವರಾಜ ಗಾಯಕವಾಡ, ಸಿದ್ಧನಗೌಡ ಪಾಟೀಲ, ಆನಂದ ಜಗದಾಳ, ಪವಿತ್ರಾ ತುಕ್ಕಣ್ಣವರ ಸೇರಿದಂತೆ ಅನೇಕರಿದ್ದರು.

ಪಾಕ್‌ನಲ್ಲಿಯೇ ಮದರಸಾಗಳು ನಿಷೇಧಗೊಂಡಿವೆ. ಇಂತಹ ಅಪಾಯಕಾರಿ ವ್ಯವಸ್ಥೆಯು ದೇಶದಲ್ಲಿ 3 ಲಕ್ಷ ಮದರಸಾಗಳು ಕಾರ್ಯನಿರ್ವಹಿಸುತ್ತಿವೆ. ಉತ್ತರ ಪ್ರದೇಶ, ಆಸ್ಸಾಂ ರಾಜ್ಯಗಳಂತೆ ಜಿಹಾದಿ ಮಾನಸಿಕತೆ ತುಂಬುತ್ತಿರುವ ಮದರಸಾಗಳನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧ ಹೇರಬೇಕು ಅಂತ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ತಿಳಿಸಿದ್ದಾರೆ. ಬನಹಟ್ಟಿಯಲ್ಲಿ ಭಗತ್‌ ಸಿಂಗ್‌ರ 115ನೇ ಜನ್ಮ ದಿನಾಚರಣೆಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಮಾತನಾಡಿದರು.

ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಬಿಜೆಪಿ ಪಣ: ನಳಿನ್‌ ಕುಮಾರ್‌ ಕಟೀಲ್‌

ಬಿಜೆಪಿಯಲ್ಲಿ ಹಿಂದೂ ಕಾರ್ಯಕರ್ತರ ಸ್ಪರ್ಧೆಗೆ ಹಕ್ಕಿದೆ

ರಬಕವಿ-ಬನಹಟ್ಟಿ: ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕನಿಷ್ಠ 25 ಕ್ಷೇತ್ರಗಳಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸಲೇಬೇಕು. ನಾವೇನು ಭಿಕ್ಷೆ ಬೇಡುತ್ತಿಲ್ಲ. ಬಿಜೆಪಿಯನ್ನು ಬೇರುಮಟ್ಟದಿಂದ ಎತ್ತಿ ಹಿಡಿದಿದ್ದೀವಿ. ನಮ್ಮದು ಪ್ರಬಲ ಹಕ್ಕಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಭಾವಿತಗೊಂಡು ಆಡಳಿತ ನಡೆಸುವಲ್ಲಿ ಹಿಂದು ಕಾರ್ಯಕರ್ತರೇ ಮೂಲ ಕಾರಣ. ಇದನ್ನು ಮರೆತು ಆಡಳಿತ ನಡೆಸಿದ್ದಲ್ಲಿ ಉಳಿಗಾಲವಿಲ್ಲ ಎಂದರು.
ಬಿಜೆಪಿಯಿಂದಲೇ ಸ್ಪರ್ಧೆ ಹಾಗೂ ಆಂತರಿಕ ಹೋರಾಟವೇ ಹೊರತು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸೇರಿದಂತೆ ಅನ್ಯ ಪಕ್ಷಗಳಿಗೆ ಸಂಬಂಧವಿಲ್ಲ. ದೇಶ ಅಧೋಗತಿಯತ್ತ ಸಾಗುವಲ್ಲಿ ಕಾಂಗ್ರೆಸ್‌ನ ಲೂಟಿ ಹಾಗೂ ಭಯೋತ್ಪಾದನೆಯ ಅಭಿವೃದ್ಧಿಯೇ ಕಾರಣವಾಗಿದ್ದು, 2014 ರಿಂದ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಸಂದೇಶ, ನಿರ್ಧಾರಗಳನ್ನು ಕೈಗೊಂಡು ಭಯೋತ್ಪಾದನೆ ದೇಶದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ತರುವ ಕ್ರಮ ಜರುಗಿಸುತ್ತಿರುವುದು ಅವಿಸ್ಮರಣಿಯ ಎಂದು ಶ್ಲಾಘಿಸಿದರು. ಬ್ರಿಜ್‌ಮೋಹನ ಡಾಗಾ, ಬಸವರಾಜ ಗಾಯಕವಾಡ, ಗುಜಗಾಂವಿ, ಚಿದಾನಂದ ಹೊರಟ್ಟಿ, ಸುನೀಲ ಬೆಂಗುಡಗಿ, ಸುಣದೋಳಿಮಠ ಸೇರಿದಂತೆ ಅನೇಕರಿದ್ದರು.
 

click me!