ಭಜರಂಗದಳದ ಹೊಸ ತಗಾದೆ: ನ್ಯೂ ಇಯರ್ ಪಾರ್ಟಿಯಲ್ಲಿ ಮುಸ್ಲಿಮರಿಗೆ ನೋ ಎಂಟ್ರಿ!

Published : Dec 21, 2022, 03:21 PM ISTUpdated : Dec 21, 2022, 03:29 PM IST
ಭಜರಂಗದಳದ ಹೊಸ ತಗಾದೆ: ನ್ಯೂ ಇಯರ್ ಪಾರ್ಟಿಯಲ್ಲಿ ಮುಸ್ಲಿಮರಿಗೆ ನೋ ಎಂಟ್ರಿ!

ಸಾರಾಂಶ

 ಮಂಗಳೂರಿನಲ್ಲಿ ಹೊಸ ವರ್ಷಕ್ಕೂ 'ನೈತಿಕ ಪೊಲೀಸ್ ಗಿರಿ' ಟೆನ್ಶನ್ ಶುರುವಾಗಿದ್ದು, ನ್ಯೂ ಇಯರ್ ಪಾರ್ಟಿಗಳ ಮೇಲೂ ಭಜರಂಗದಳ ಕೆಂಗಣ್ಣು ಬೀರಿದೆ. ಅಲ್ಲದೇ ಮುಸ್ಲಿಂ ಯುವಕರಿಗೆ ಪಾರ್ಟಿಗಳಿಗೆ ಪ್ರವೇಶ ಕೊಡಬಾರದು ಅಂತ ಎಚ್ಚರಿಕೆ ನೀಡಿದೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಡಿ.21) : ಮಂಗಳೂರಿನಲ್ಲಿ ಹೊಸ ವರ್ಷಕ್ಕೂ 'ನೈತಿಕ ಪೊಲೀಸ್ ಗಿರಿ' ಟೆನ್ಶನ್ ಶುರುವಾಗಿದ್ದು, ನ್ಯೂ ಇಯರ್ ಪಾರ್ಟಿಗಳ ಮೇಲೂ ಭಜರಂಗದಳ ಕೆಂಗಣ್ಣು ಬೀರಿದೆ. ಅಲ್ಲದೇ ಮುಸ್ಲಿಂ ಯುವಕರಿಗೆ ಪಾರ್ಟಿಗಳಿಗೆ ಪ್ರವೇಶ ಕೊಡಬಾರದು ಅಂತ ಎಚ್ಚರಿಕೆ ನೀಡಿದೆ.

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಳ ಬೆನ್ನಲ್ಲೇ ನ್ಯೂ ಇಯರ್ ಪಾರ್ಟಿಗಳಿಗೆ ವಾರ್ನಿಂಗ್ ಮಾಡಲಾಗಿದ್ದು, ನ್ಯೂ ಇಯರ್ ಪಾರ್ಟಿ ನಿಲ್ಲಿಸಲು ಭಜರಂಗದಳದಿಂದ ಮಂಗಳೂರು ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.  ನ್ಯೂ ಇಯರ್ ಹೆಸರಲ್ಲಿ ಪಬ್, ಹೊಟೇಲ್, ಸಾರ್ವಜನಿಕ ಸ್ಥಳಗಳಲ್ಲಿ ಆಯೋಜಿಸುವ ಪಾರ್ಟಿಗಳಲ್ಲಿ ಲವ್ ಜಿಹಾದ್(Love Jihad) ಬಗ್ಗೆ ಭಜರಂಗದಳ ಕಿಡಿ ಕಾರಿದೆ‌. ಡ್ರಗ್ ಮತ್ತು ಸೆಕ್ಸ್ ಮಾಫಿಯಾಗಳಲ್ಲಿ ಕೇರಳದ ಅನ್ಯಕೋಮಿನ ಯುವಕರ ಭಾಗಿ ಆರೋಪ ಕೇಳಿ ಬಂದಿದ್ದು, ನ್ಯೂ ಇಯರ್ ಪಾರ್ಟಿ ತಡೆಯಲು ಪೊಲೀಸರಿಗೆ ಭಜರಂಗದಳ ಮನವಿ ಮಾಡಿದೆ. 

Mangaluru; ಮತ್ತೆ ನೈತಿಕ ಪೊಲೀಸ್ ಗಿರಿ, ಮರಕ್ಕೆ ಕಟ್ಟಿ ಕಾರ್ಮಿಕನಿಗೆ ಥಳಿತ

ಇದೀಗ ನ್ಯೂ ಇಯರ್ ಪಾರ್ಟಿಗಳ ಮೇಲೂ ನೈತಿಕ ಪೊಲೀಸ್ ಗಿರಿ ಸುಳಿವಿನ ಬೆನ್ನಲ್ಲೇ ಮಂಗಳೂರು ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್ ಪಿಸಿ 107 ಅಸ್ತ್ರ ಪ್ರಯೋಗಿಸಿದ್ದಾರೆ. ಭಜರಂಗದಳ ಸೇರಿ ಹಿಂದೂ ಸಂಘಟನೆಗಳ ಪ್ರಮುಖರಿಗೆ ನೋಟೀಸ್ ನೀಡಿದ್ದಾರೆ‌. ಪುನೀತ್ ಅತ್ತಾವರ ಸೇರಿ ಕೆಲ ನಾಯಕರು, ಕಾರ್ಯಕರ್ತರಿಗೆ ನೋಟೀಸ್ ನೀಡಿದ್ದು, 107 ಅಡಿಯಲ್ಲಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. 

ನ್ಯೂ ಇಯರ್ ಪಾರ್ಟಿಗೆ ಮುಸ್ಲಿಮ್ ಯುವಕರಿಗೆ ನೋ ಎಂಟ್ರಿ: ಪುನೀತ್ ಅತ್ತಾವರ

ಮಂಗಳೂರಿನಲ್ಲಿ ನ್ಯೂ ಇಯರ್ ಧರ್ಮದಂಗಲ್ ಸಂಬಂಧಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಭಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ್ ಹೇಳಿಕೆ ನೀಡಿದ್ದಾರೆ. ಡಿಸೆಂಬರ್ 31ರಂದು ಹೊಸ ವರ್ಷದ ಹೆಸರಲ್ಲಿ ಪಾರ್ಟಿಗಳ ಆಯೋಜನೆ ಇದೆ‌. ಇದನ್ನ ವಿರೋಧಿಸಿ ಮಂಗಳೂರು ಕಮಿಷನರ್ ಗೆ ಮನವಿ ಮಾಡಿದ್ದೇವೆ‌. ಪಾಶ್ಚಿಮಾತ್ಯ ಸಂಸ್ಕೃತಿಯ ಪಾರ್ಟಿಗಳಿಗೆ ಅವಕಾಶ ಕೊಡಬಾರದು ಹೇಳಿದ್ದೇವೆ.‌ ಮುಸ್ಲಿಂ ಯುವಕರು ಇಸ್ಲಾಂನ್ನು ಒಪ್ತಾರೆ, ಈ ದೇಶದ ಕಾನೂನಿಗೆ ಬೆಲೆ ಕೊಡಲ್ಲ. ಅವರ ಜಮಾತ್ ಮತ್ತು ಇಸ್ಲಾಂ ಪ್ರಕಾರ ಪಾರ್ಟಿಗಳಿಗೆ ಹೋಗುವಂತಿಲ್ಲ. ಮದ್ಯಪಾನ, ಪಾರ್ಟಿ ಮಾಡಬಾರದು. ಆದ್ರೂ ಮಂಗಳೂರಿನ ಪಬ್ ಗಳಿಗೆ ಮುಸ್ಲಿಂ ಯುವಕರು ಬರ್ತಾ ಇದಾರೆ. ಇದರ ಹಿಂದೆ ದುಷ್ಜೃತ್ಯದ ಸಂಚಿದೆ,  ಡ್ರಗ್ಸ್ ಜಿಹಾದ್ ಮತ್ತು ಸೆಕ್ಸ್ ಜಿಹಾದ್ ಇದೆ.  ಹೀಗಾಗಿ ನ್ಯೂ ಇಯರ್ ನ ಎಲ್ಲಾ ಪಾರ್ಟಿ ಬಂದ್ ಮಾಡಬೇಕು. ನಮ್ಮನ್ನ ಹತ್ತಿಕ್ಕಲು 107 ಕೇಸ್ ಹಾಕುವ ಕೆಲಸ ಪೊಲೀಸರು ಮಾಡಿದ್ದಾರೆ. ಆದರೆ ಲವ್ ಜಿಹಾದ್ ಮುಕ್ತ ಮಂಗಳೂರಿಗೆ ನಮ್ಮ ಹೋರಾಟ ಆಗುತ್ತೆ.‌ 107 ಅಲ್ಲ, 307 ಹಾಕಿದ್ರೂ ನಮ್ಮ ಹೋರಾಟ ನಿಲ್ಲಲ್ಲ.‌ ನಮ್ಮ ಕಾರ್ಯಕರ್ತರು ಲವ್ ಜಿಹಾದ್ ವಿರುದ್ದ ಯಾವುದೇ ಹೋರಾಟಕ್ಕೂ ಸಿದ್ದ ಎಂದಿದ್ದಾರೆ.

ಬೆದರಿಕೆ ಹಾಕೋ ಭಜರಂಗದಳವರನ್ನು ಬಂಧಿಸಿ: ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ನ್ಯೂ ಇಯರ್ ಪಾರ್ಟಿ ವಿರುದ್ದ ಭಜರಂಗದಳ ಕಿಡಿ ವಿಚಾರಕ್ಕೆ ಸಂಬಂಧಿಸಿ ಭಜರಂಗದಳದವರ ಬಂಧನಕ್ಕೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ. ಮಂಗಳೂರಿನಲ್ಲಿ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ ನೀಡಿದ್ದಾರೆ. ಪಾರ್ಟಿಗಳಿಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂದು ಹೇಳಲಿಕ್ಕೆ ಇವರ್ಯಾರು? ಭಜರಂಗದಳದ ನೈತಿಕ ಪೊಲೀಸ್‌ಗಿರಿ ನೋಡಿದರೆ ದ.ಕ ಜಿಲ್ಲೆಯಲ್ಲಿ ಸರ್ಕಾರ ಇಲ್ಲ,  ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಜಿಲ್ಲೆಯಲ್ಲಿ ಪೊಲೀಸ್ ಇಲ್ಲ, ಬಹಿರಂಗವಾಗಿ ಇಲಾಖೆಯ ಅಸ್ತಿತ್ವವನ್ನೇ ಪ್ರಶ್ನೆ ಮಾಡಲಾಗ್ತಿದೆ.‌ ಸರ್ಕಾರದ ಅಸ್ತಿತ್ವ ಪ್ರಶ್ನೆ ಮಾಡುವುದು ಏನನ್ನ ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ.

Mangaluru Moral Policing: ಮಂಗಳೂರಲ್ಲಿ ಮತ್ತೆ ಭಜರಂಗದಳದ ನೈತಿಕ ಪೊಲೀಸ್ ಗಿರಿ; ಮಧ್ಯರಾತ್ರಿ ಭಿನ್ನ ಕೋಮಿನ ಜೋಡಿಗೆ ಹಲ್ಲೆ!

ನ್ಯೂ ಇಯರ್ ಪಾರ್ಟಿಗಳಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ದೇಶದ ಸಂವಿಧಾನ ಎಲ್ಲರಿಗೂ ಸ್ವಾತಂತ್ರ್ಯ ಕೊಟ್ಟಿದೆ.‌ ಸಂವಿಧಾನ ಕೊಟ್ಟ ಸ್ವಾತಂತ್ರ್ಯ ಕಾಪಾಡುವ ಜವಾಬ್ದಾರಿ ಪೊಲೀಸರದ್ದು‌. ಕಾನೂನು ಸುವ್ಯವಸ್ಥೆ ಹದಗೆಡಿಸೋರ ವಿರುದ್ದ ಕೇಸ್ ದಾಖಲಿಸಿ. ಈ ರೀತಿ ಬಹಿರಂಗವಾಗಿ ಥ್ರೆಡ್ ಕೊಟ್ಟವರನ್ನ ಬಂಧಿಸಿ. ಎಲ್ಲಾ ಪಬ್, ಕ್ಲಬ್ ಗಳಿಗೆ ಹೋಗಿ ಬೆದರಿಕೆ ಹಾಕಿದವರ ಬಗ್ಗೆ ಮಾಹಿತಿ ಪಡೆಯಲಿ. ಕಾನೂನು ಸುವ್ಯವಸ್ಥೆ ವ್ಯಾಪ್ತಿಯಲ್ಲಿ ಎಲ್ಲಾ ಕಾರ್ಯಕ್ರಮಕ್ಕೂ ಅವಕಾಶ ಕೊಡಿ ಎಂದಿದ್ದಾರೆ. ‌

PREV
Read more Articles on
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್