Ilakal: ಅಂಧ ಅನಾಥ ಯುವತಿ ಹುಲಿಗೆಮ್ಮಾಳ ಬಾಳಿಗೆ ಬೆಳಕಾದ ನಾಗರಾಜ್; ಅಪರೂಪದ ಮದುವೆ

Published : Jul 05, 2026, 07:44 AM IST
Marriage

ಸಾರಾಂಶ

ಹುಟ್ಟು ಕುರುಡಿಯಾದ ಅನಾಥ ಯುವತಿ ಹುಲಿಗೆಮ್ಮಳನ್ನು, ತಾನೂ ಅನಾಥನಾದ ನಾಗರಾಜ ಎಂಬ ಯುವಕ ಮದುವೆಯಾಗಿದ್ದಾನೆ. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಈ ಮದುವೆಯ ಸಂಪೂರ್ಣ ಖರ್ಚು ವಹಿಸಿ, ನವ ದಂಪತಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಬಾಗಲಕೋಟೆ: ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಹುಟ್ಟು ಕುರುಡಿಯಾಗಿದ್ದ ಯುವತಿಯ ಬಾಳಿಗೆ ಬೆಳಕಾದ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು!! ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ಇಲಕಲ್ಲ ನಗರದ ಅಂಬಾಭವಾನಿ ದೇವಸ್ಥಾನ. ಇಳಕಲ್ಲ ನಗರದ ಅಂಧ ಯುವತಿ ಹುಲಿಗೆಮ್ಮ ತಿಪ್ಪಣಸಾ ರಾಯಬಾಗಿ ಎಂಬ ಯುವತಿ ಕೈಹಿಡಿದು ಆಕೆಯೆ ಬಾಳಿಗೆ ಬೆಳಕಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್‌ ಮೂಲದ ನಾಗರಾಜ ಪರಶುರಾಮಸಾ ಖೋಡೆ. ಇತನಿಗೂ ತಂದೆ -ತಾಯಿ ಇಲ್ಲದ ಅನಾಥನಾಗಿದ್ದ. ಅಲ್ಲಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಾಗೇ ಆತನ ಸ್ನೇಹಿತರಿಂದ ಹುಲಿಗೆಮ್ಮಳ ಬಗ್ಗೆ ಹೇಳಿದ್ದ ಆಕೆ ಕುರುಡಿಯಾಗಿದ್ದರೂ ಆಕೆಗೆ ಬಾಳು ಕೊಡಯವುದಾಗಿ ಹೇಳಿ ಶುಕ್ರವಾರ ಸಾರ್ವಜನಿಕರ ಸಮ್ಮುಖದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.

ಮದುವೆಗೆ ಹಣಕಾಸಿನ ತೊಂದರೆ

ಮದುವೆ ಏನೋ ನಿಶ್ಚಿಯವಾಯಿತು. ಆದರೆ, ಅದರ ಖರ್ಚು ವೆಚ್ಚಕ್ಕೆ ಮುಂದೆ ಬಂದವರು ಇಲಕಲ್ಲ ನಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಬಾಂಧವರು. ಎಲ್ಲ ಬಾಂಧವರು ಸೇರಿಕೊಂಡು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಸಿಕೊಟ್ಟರು. ವಧು-ವರರ ಲಗ್ನಕ್ಕೆ ಅಗತ್ಯವಿರುವ ಒಡುವೆ-ವಸ್ತ್ರದ ಸಂಪೂರ್ಣ ಖರ್ಚು ಭರಿಸಿ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಹಿಂದೂ ಮದುವೆ, ಮುಸ್ಲಿಮರ ಸಾರಥ್ಯ: ಅನ್ಯಧರ್ಮದ ಮಕ್ಕಳಿಗೆ ಆಸರೆಯಾದ ಮುಲ್ಲಾ ದಂಪತಿ

ಮುಂದಿನ ಜೀವನೋಪಾಯಕ್ಕೆ ಅನುಕೂಲವಾಗಲೆಂದು ₹ 15,000 ಗಳನ್ನು ನೀಡಿ ಸಹಾಯಹಸ್ತ ಚಾಚಿದ್ದಾರೆ. ನಗರದ ಸಾರ್ವಜನಿಕರು ಮದುವೆ ಬಂದು ನೂತನ ವಧು-ವರನಿಗೆ ಶುಭ ಹಾರೈಸಿದರು. ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇದನ್ನೂ ಓದಿ: Special Marriage: ಭಾವನೆಗಳ ಮೂಲಕವೇ ನಡೆದ ಅಪರೂಪದ ಮದುವೆ: ಹೃದಯದ ಭಾಷೆ, ಮೌನವೇ ಸಂಭಾಷಣೆ

PREV
Read more Articles on
click me!

Recommended Stories

11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ; ಚಿಕ್ಕರೂಗಿ ರೈತನ ಬೆರಗುಗೊಳಿಸಿದ ಸಾಧನೆ!
Bengaluru: 4 ದಿನದಲ್ಲಿ ಫುಟ್‌ಪಾತ್ ತೆರವುಗೊಳಿಸಿದ್ದೆಷ್ಟು? ಇಲ್ಲಿದೆ ನೋಡಿ ಮಾಹಿತಿ