ಕೇರಳ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳು ಸಂಪೂರ್ಣ ಬಂದ್‌

Published : May 12, 2020, 09:19 AM IST
ಕೇರಳ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳು ಸಂಪೂರ್ಣ ಬಂದ್‌

ಸಾರಾಂಶ

ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಇಲ್ಲಿನ ಕರಿಕೆ, ಕುಟ್ಟ, ಮಾಕುಟ್ಟಅಂತರ್‌ ರಾಜ್ಯ ಗಡಿಯಲ್ಲಿ ರಸ್ತೆ ಬಂದ್‌ ಮಾಡಿ ಚೆಕ್‌ ಪೋಸ್ಟ್‌ ಅಳವಡಿಸಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಯಿತು.  

ಮಡಿಕೇರಿ(ಮೇ 12): ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಇಲ್ಲಿನ ಕರಿಕೆ, ಕುಟ್ಟ, ಮಾಕುಟ್ಟಅಂತರ್‌ ರಾಜ್ಯ ಗಡಿಯಲ್ಲಿ ರಸ್ತೆ ಬಂದ್‌ ಮಾಡಿ ಚೆಕ್‌ ಪೋಸ್ಟ್‌ ಅಳವಡಿಸಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಯಿತು.

ಆದರೆ ಕೊಡಗು ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗಡಿ ಕೇರಳ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗೇರು ಪ್ಲಾಂಟೇಷÜನ್‌ಗಾಗಿ ಹಾದುಹೋಗಿರುವ ಪಾಣತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇರಳದಲ್ಲಿ ಗೇಟ್‌ ಇದೆ.

ಊರಿಗೆ ಕಳಿಸ್ತೀವಂತ ಹಣ ಕೀಳ್ತಿದ್ದಾರೆ ಮಧ್ಯವರ್ತಿಗಳು: ಮೋಸದ ಜಾಲ

ಆದರೂ ರಸ್ತೆ ಮೂಲಕ ಕದ್ದು ಮುಚ್ಚಿ ನಿರಂತರವಾಗಿ ವಾಹನ ಓಡಾಡುವುದನ್ನು ಅಧಿ​ಕಾರಿ​ಗಳು ಪತ್ತೆಹಚ್ಚಿದ್ದಾರೆ. ಭಾಗಮಂಡಲ ಠಾಣಾ​ಧಿಕಾರಿ ಮಹದೇವ ಹಾಗೂ ಸಿಬ್ಬಂದಿ ಜೆಸಿಬಿ ಯಂತ್ರ ಮೂಲಕ ರಸ್ತೆಗೆ ಮಣ್ಣು ಸುರಿದು ಸಂಪೂರ್ಣವಾಗಿ ಬಂದ್‌ ಮಾಡಿದರು.

PREV
click me!

Recommended Stories

Big Impact:ಜಮಖಂಡಿಯ ಇಬ್ಬರಿಗೆ ಒಂದೇ ಆಧಾರ್ ಸಂಖ್ಯೆ: ಎಚ್ಚೆತ್ತ ಅಧಿಕಾರಿಗಳಿಂದ ಸ್ಪಂದನೆ
ಡ್ರೈವ್‌ ಮಾಡುವಾಗ ಆನ್‌ಲೈನ್‌ ಮೀಟಿಂಗ್‌ನಲ್ಲಿರಬೇಡಿ: ಟೆಕ್ಕಿಗಳಿಗೆ ಬೆಂಗಳೂರು ಪೊಲೀಸ್‌ ವಾರ್ನಿಂಗ್‌