ನೀರಿನಲ್ಲಿ ಕೊಚ್ಚಿಹೋದ ಇಸ್ಕಾನ್‌ ಸನ್ಯಾಸಿಗಳು

By Kannadaprabha NewsFirst Published Oct 17, 2020, 11:07 AM IST
Highlights

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇಸ್ಕಾನ್ ಸನ್ಯಾಸಿಗಳು ಕೊಚ್ಚಿ ಹೋಗಿದ್ದಾರೆ

 ಶ್ರೀರಂಗಪಟ್ಟಣ (ಅ.17):  ಕಾವೇರಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಮೈಸೂರು ಇಸ್ಕಾನ್‌ ದೇವಸ್ಥಾನದ ಇಬ್ಬರು ಸನ್ಯಾಸಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಮೃತ ದೇಹಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

ಬೆಂಗಳೂರಿನ ಆರ್‌.ಎಸ್‌.ದಾಸ್‌ (43) ಹಾಗೂ ಚಿತ್ರದುರ್ಗ ಟೌನ್‌ ನಿವಾಸಿ ಗುಣಾರನವದಾಸ್‌ (35) ಮೃತರು. ತಾಲೂಕಿನ ಮಹದೇವಪುರ ಗ್ರಾಮದ ಹೊರವಲಯದಲ್ಲಿರುವ ಇಸ್ಕಾನ್‌ ಸಂಸ್ಥೆಯ ಹರೇ ಕೃಷ್ಣ ಫಾರ್ಮ್ ಲ್ಲಿ ಮಧ್ಯಾಹ್ನ ಘಟನೆ ನಡೆದಿದೆ. ಪ್ರಸ್ತುತ ಮೈಸೂರಿನ ಇಸ್ಕಾನ್‌ ದೇವಾಲಯದಲ್ಲಿ ಹಲವು ವರ್ಷಗಳಿಂದ ಇವರು ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಘಟನೆ ವಿವರ:

ಆರ್‌.ಎಸ್‌.ದಾಸ್‌ ಹಾಗೂ ಗುಣಾರನವದಾಸ್‌ ಈ ಇಬ್ಬರು ತಮ್ಮ ಇತರ ಸಹೋದ್ಯೋಗಿಗಳೊಂದಿಗೆ ಶುಕ್ರವಾರ ತಾಲೂಕಿನ ಇಸ್ಕಾನ್‌ ಸಂಸ್ಥೆಗೆ ಸೇರಿದ ಹರೇ ಕೃಷ್ಣ ಫಾಮ್‌ರ್‍ನ ದೇವಾಲಯದಲ್ಲಿ ನಡೆಯುತ್ತದ್ದ ಭಜನೆಗಾಗಿ ಆಗಮಿಸಿದ್ದರು. ದೇವರ ದರ್ಶನಕ್ಕೆ ಮಡಿಗೊಳ್ಳಲು ಫಾರ್ಮ್ ಸಮೀಪದಲ್ಲಿರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ನದಿಗಿಳಿದಿದ್ದಾರೆ.

ಮನೆ ಒಳಗೆ ನುಗ್ಗಿದ ನೀರು, ಹೊರ ಬಂದರೆ ಹಾವಿನ ಕಾಟ: ಉತ್ತರ ಕರ್ನಾಟಕ ಜನರ ಪರಿಪಾಡಿದು! ...

ಈ ಸಮಯದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ದಡದಲ್ಲಿದ್ದ ಆರ್‌.ಎಸ್‌.ದಾಸ್‌ ಮೊದಲು ಕಾಲುಜಾರಿ ಬಿದ್ದು ಕೊಚ್ಚಿಹೋದರು. ಇವರನ್ನು ರಕ್ಷಿಸಲು ಗುಣಾರನವದಾಸ್‌ ಮುಂದಾದ ವೇಳೆ ಅವರೂ ಸಹ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ, ಅರಕೆರೆ ಠಾಣೆ ಪೊಲೀಸರು ಆಗಮಿಸಿ ಸ್ಥಳಿಯರ ನೆರವಿನೊಂದಿಗೆ ದೋಣಿಯಲ್ಲಿ ಕಾರ್ಯಚರಣೆ ಕೈಗೊಂಡಿದ್ದಾರೆ. ತಾಲೂಕು ಹರೇ ಕೃಷ್ಣ ಫಾರ್ಮ್ ಮುಖ್ಯಸ್ಥ ಕೃಷ್ಣದಾಸ್‌ ಸ್ಥಳದಲ್ಲೆ ಹಾಜರಿದ್ದು, ಇವರ ಜೊತೆಯಲ್ಲಿದ್ದ ಇತರರನ್ನು ಸಂತೈಸಿದ್ದಾರೆ. ಈ ಸಂಬಂಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!