ಬೆಂಗ್ಳೂರಲ್ಲಿ ಮತ್ತೆ ಇಳಿದ ಕೊರೋನಾ..!

Kannadaprabha News   | Asianet News
Published : Oct 28, 2021, 06:18 AM IST
ಬೆಂಗ್ಳೂರಲ್ಲಿ ಮತ್ತೆ ಇಳಿದ ಕೊರೋನಾ..!

ಸಾರಾಂಶ

*  ಹೊಸದಾಗಿ 142 ಮಂದಿಗೆ ಸೋಂಕು, 6 ಸಾವು *  174 ಮಂದಿ ಸೋಂಕಿನಿಂದ ಗುಣಮುಖ *  ಮತ್ತೆ ಹೆಚ್ಚಿದ ಮೈಕ್ರೋ ಕಂಟೈನ್ಮೆಂಟ್‌  

ಬೆಂಗಳೂರು(ಅ. 28): ನಗರದಲ್ಲಿ(Bengaluru) ಕೋವಿಡ್‌ ಸೋಂಕಿತ ಪ್ರಕರಣಗಳ ಏರಿಳಿತ ಮುಂದುವರೆದಿದ್ದು, ಬುಧವಾರ 142 ಜನರಲ್ಲಿ ಸೋಂಕು ದೃಢಪಟ್ಟಿದೆ(Death). ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,51,155ಕ್ಕೆ ಏರಿಕೆಯಾಗಿದೆ. ಇದೇ ವೇಳೆ 174 ಮಂದಿ ಸೋಂಕಿನಿಂದ(Infection) ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ(Discharge) ಸಂಖ್ಯೆ 12,28,469ಕ್ಕೆ ಏರಿಕೆಯಾಗಿದೆ. ಆರು ಮಂದಿಯ ಸಾವಿನಿಂದ ಇದುವರೆಗೆ ಮೃತಪಟ್ಟವರ ಸಂಖ್ಯೆ 16,260ಕ್ಕೆ ತಲುಪಿದೆ. ನಗರದಲ್ಲಿ ಸದ್ಯ 6426 ಸಕ್ರಿಯ ಸೋಂಕಿತ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ(Department of Health) ವರದಿ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಹೊಸದಾಗಿ 282 ಕೊರೊನಾ ಕೇಸ್,1 ಶಾಲೆ ಸೀಲ್‌ಡೌನ್

ಪಾಲಿಕೆ(BBMP) ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ ಕಳೆದ ಹತ್ತು ದಿನಗಳಿಂದ ದೊಡ್ಡನೆಕ್ಕುಂದಿ, ಬೆಳ್ಳಂದೂರು, ಬೇಗೂರು ವಾರ್ಡ್‌ಗಳಲ್ಲಿ ನಿತ್ಯ ಸರಾಸರಿ ತಲಾ 4 ಸೋಂಕಿತ ಪ್ರಕರಣ, ಹೂಡಿ, ವರ್ತೂರು, ರಾಜರಾಜೇಶ್ವರಿ ನಗರ, ಎಚ್‌ಎಸ್‌ಆರ್‌ ಲೇಔಟ್‌, ನ್ಯೂ ತಿಪ್ಪಸಂದ್ರ, ಗಿರಿನಗರ ವಾರ್ಡ್‌ಗಳಲ್ಲಿ ತಲಾ 3 ಮತ್ತು ಹೊರಮಾವು ವಾರ್ಡ್‌ನಲ್ಲಿ ನಿತ್ಯ 2 ಸೋಂಕಿತ ಪ್ರಕರಣ ಪತ್ತೆಯಾಗುತ್ತಿವೆ.

ಮತ್ತೆ ಹೆಚ್ಚಿದ ಮೈಕ್ರೋ ಕಂಟೈನ್ಮೆಂಟ್‌

ಪಾಲಿಕೆಯ ಎಂಟು ವಲಯಗಳಲ್ಲಿ ಕಳೆದ ಎರಡು ದಿನಗಳ ಹಿಂದೆ ಕೇವಲ 49 ಮೈಕ್ರೋ ಕಂಟೈನ್ಮೆಂಟ್‌(Micro Containment) ಇದ್ದವು. ಈಗ ಏಕಾಏಕಿ ಮೈಕ್ರೋ ಕಂಟೈನ್ಮೆಂಟ್‌ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 23, ದಕ್ಷಿಣ ವಲಯ 12, ಪಶ್ಚಿಮ 8, ಪೂರ್ವ 6, ಮಹದೇವಪುರ 6, ಯಲಹಂಕ 4, ರಾಜರಾಜೇಶ್ವರಿ ನಗರ 2 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ದಾಸರಹಳ್ಳಿ ವಲಯ ಮೈಕ್ರೋ ಕಂಟೈನ್ಮೆಂಟ್‌ ಮುಕ್ತವಾಗಿದೆ. ಬೊಮ್ಮನಹಳ್ಳಿ ಮತ್ತು ದಕ್ಷಿಣ ವಲಯದಲ್ಲಿ ಸೋಂಕು ಹೆಚ್ಚಳವಾಗಿದ್ದು ಮೈಕ್ರೋ ಕಂಟೈನ್ಮೆಂಟ್‌ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

PREV
Read more Articles on
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ