ಲಾಕ್‌ಡೌನ್‌ನಿಂದ ಉಡುಪಿ ಆರ್‌ಟಿಒಗೆ 13 ಕೋಟಿ ರು. ನಷ್ಟ!

Kannadaprabha News   | Asianet News
Published : Jun 27, 2020, 08:39 AM IST
ಲಾಕ್‌ಡೌನ್‌ನಿಂದ ಉಡುಪಿ ಆರ್‌ಟಿಒಗೆ 13 ಕೋಟಿ ರು. ನಷ್ಟ!

ಸಾರಾಂಶ

ರಾಜ್ಯದಲ್ಲಿಯೇ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ (ರಾಜಸ್ವ)ವನ್ನು ಸಂಗ್ರಹಿಸಿ ನೀಡುತಿದ್ದ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌.ಟಿ.ಒ.)ಗೆ ಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದ ಸುಮಾರು 13 ಕೋಟಿ ರು. ನಷ್ಟವಾಗಿದೆ.

ಉಡುಪಿ(ಜೂ.27): ರಾಜ್ಯದಲ್ಲಿಯೇ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ (ರಾಜಸ್ವ)ವನ್ನು ಸಂಗ್ರಹಿಸಿ ನೀಡುತಿದ್ದ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌.ಟಿ.ಒ.)ಗೆ ಈ ಬಾರಿ ಕೊರೋನಾ ಲಾಕ್‌ಡೌನ್‌ನಿಂದ ಸುಮಾರು 13 ಕೋಟಿ ರು. ನಷ್ಟವಾಗಿದೆ.

ಅಲ್ಲದೆ ಉಡುಪಿ ಆರ್‌​ಟಿಒ ಪ್ರತಿವರ್ಷ ಅತ್ಯುತ್ತಮವಾಗಿ ಗುರಿ ಸಾಧಿಸುವ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಈ ಬಾರಿ ಲಾಕ್‌ಡೌನ್‌ನ 2 ತಿಂಗಳು ಜಿಲ್ಲೆಯಲ್ಲಿ ವಾಹನಗಳ ನೋಂದಣಿ ಭಾರಿ ಕಡಿಮೆಯಾಗಿದ್ದು, ಈ ಬಾರಿ ಉಡುಪಿ ಆರ್‌​ಟಿಒ ಗುರಿ ಸಾಧಿಸುವಲ್ಲಿಯೂ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ. 2018 - 19ರ ಏಪ್ರಿಲ್‌ ತಿಂಗಳಲ್ಲಿ 11.2 ಕೋಟಿ ರು. (ಗುರಿಯ ಶೇ.95) ಮತ್ತು 2019 - 20ರ ಏಪ್ರಿಲ್‌ ತಿಂಗಳಲ್ಲಿ 10.82 ಕೋಟಿ ರು. (ಶೇ 94) ರಾಜತ್ವ ಸಂಗ್ರಹಿಸಿತ್ತು.

'ಪ್ರಧಾನಿ ಮೋದಿ ಬಿಜೆಪಿ ಸರ್ಕಾರದಿಂದ ದೇಶದಲ್ಲಿ ಐತಿಹಾಸಿಕ ಬದಲಾವಣೆ'

ಆದರೆ ಈ ಬಾರಿ 2020 - 21ರ ಏಪ್ರಿಲ್‌ ತಿಂಗಳಲ್ಲಿ ಕೇವಲ 19.06 ಲಕ್ಷ ರು. (ಶೇ 1.64) ಮಾತ್ರವೇ ಸಂಗ್ರಹವಾಗಿದ್ದರೆ, ಮೇ ತಿಂಗಳಲ್ಲಿ 5.12 ಕೋಟಿ ರು. (ಶೇ 5.12) ಗಳಷ್ಟುರಾಜಸ್ವ ಸಂಗ್ರಹವಾಗಿದೆ. ಇದು ಉಡುಪಿ ಜಿಲ್ಲೆಯ ಆರ್‌​ಟಿಒ ಇತಿಹಾಸದಲ್ಲಿಯೇ ಅತಿ ಕಡಿಮೆ ರಾಜಸ್ವ ಸಂಗ್ರಹವಾಗಿದೆ.

ಶೇ.80 ನೋಂದಣಿ ಕುಸಿ​ತ: 2019ರ ಏಪ್ರಿಲ್‌ನಲ್ಲಿ 1122 ಮತ್ತು ಮೇ ತಿಂಗಳಲ್ಲಿ 2288 ವಾಹನಗಳು ನೋಂದಣಿಯಾಗಿದ್ದರೆ, ಈ ವರ್ಷ ಏಪ್ರಿಲ್‌ ತಿಂಗಳಲ್ಲಿ ಕೇವಲ 155 ವಾಹನಗಳಷ್ಟೇ ನೋಂದಣಿಯಾಗಿವೆ, ಮೇ ತಿಂಗ​ಳಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು 1233 ವಾಹನಗಳು ನೋಂದಣಿಯಾಗಿವೆ. ಒಟ್ಟಾರೆ ಈ ವರ್ಷ ಜಿಲ್ಲೆಯಲ್ಲಿ ಕೋರೋನಾದ 2 ತಿಂಗಳು ಶೇ.80ರಷ್ಟುವಾಹನ ನೋಂದಣಿಯಲ್ಲಿ ಕೊರತೆಯಾಗಿದೆ. ಸಹಜವಾಗಿಯೇ ರಾಜಸ್ವ ಸಂಗ್ರಹದಲ್ಲಿಯೂ ಕೊರತೆಯಾಗಿದೆ.

ಮನೆ​ಯ​ವ​ರನ್ನು ಕಟ್ಟಿ​ಹಾಕಿ 13 ಲಕ್ಷ ಮೌಲ್ಯದ ನಗ- ನಗದು ದರೋ​ಡೆ

13 ಕೋಟಿ ರು. ಗುರಿ ನಷ್ಟ: ಉಡುಪಿ ಆರ್‌​ಟಿಒ 2018 - 19ರಲ್ಲಿ 135.11 ಕೋಟಿ ರು. (ಶೇ 96.50) ಕೋಟಿ ರುಪಾ​ಯಿ​ಗಳ ರಾಜಸ್ವದ ಗುರಿಯನ್ನು ಸಾಧಿಸಿತ್ತು. 2019 - 20ರಲ್ಲಿ 123 ಕೋಟಿ ರು. (ಶೇ. 87.86) ಗುರಿಯನ್ನು ಸಾಧಿಸಿತ್ತು.

ಆದರೆ 2020- 21ನೇ ಸಾಲಿಗೆ 140.40 ಕೋಟಿ ರು.ಗಳ ಗುರಿಯನ್ನು ಈಗಗಾಲೇ ನಿಗದಿಪಡಿಸಲಾಗಿದೆ. ಅದರಂತೆ ಏಪ್ರಿಲ…, ಮೇ ತಿಂಗಳಲ್ಲಿ 18.00 ಕೋಟಿ ರು. ಸಂಗ್ರಹವಾಗಬೇಕಿತ್ತು. ಆದರೆ ಲಾಕ್‌ಡೌ​ನ್‌​ನಿಂದಾಗಿ ಕೇವಲ 5.31ಕೋಟಿ ರು. (ಶೇ 29.5) ರಾಜಸ್ವ ಮಾತ್ರ ಸಂಗ್ರಹಕ್ಕೆ ಸಾಧ್ಯವಾಗಿದೆ.

ಮುಂದಿನ ತಿಂಗಳಲ್ಲೂ ಗುರಿ ಸಾಧನೆ ಕಷ್ಟ

ಕೊರೋನಾದ ಪರಿಸ್ಥಿತಿ, ಪರಿಣಾಮ ಇನ್ನೂ ಕೊನೆಗೊಂಡಿಲ್ಲದಿರುವುದರಿಂದ ಇನ್ನೂ ಮುಂದಿನ ತಿಂಗಳಲ್ಲಿಯೂ ಗುರಿ ಸಾಧಿಸುವುದು ಕಷ್ಟ, ಆದ್ದರಿಂದ ಒಟ್ಟಾರೆ ಈ ಬಾರಿಯ ಗುರಿ ಸಾಧನೆಯಲ್ಲಿ ಭಾರಿ ಹಿನ್ನಡೆಯಾಗುತ್ತದೆ. ಜೊತೆಗೆ ಸರ್ಕಾರದ ಆದೇಶದಂತೆ ಬಿಎಸ್‌ 4 ವಾಹನಗಳ ನೋಂದಣಿಯನ್ನು ನಿಲ್ಲಿಸಲಾಗಿದೆ. ಇದರಿಂದಲೂ ಸ್ವಲ್ಪಮಟ್ಟಿನ ನಷ್ಟವಾಗುತ್ತಿದೆ ಎಂದು ಉಡುಪಿ ಆರ್‌ಟಿಒ ಅಧಿಕಾರಿ ರಾಮಕೃಷ್ಣ ಹೇಳಿದ್ದಾರೆ.

PREV
click me!

Recommended Stories

ಕೊಡಗಿನಲ್ಲಿ ಮೃತಪಟ್ಟ ತಾಯಿ ಆನೆ ಎಬ್ಬಿಸಲು ಮರಿ ಆನೆ ಪರದಾಟ, ಮೂಕರೋಧನೆಗೆ ಭಾವುಕರಾದ ಜನ
ಕಲ್ಲುಗಳ ಪ್ರಪಾತವಾದ ಪ್ರಸಿದ್ಧ ಜಲಪಾತ: ಧುಮ್ಮಿಕ್ಕುತ್ತಿದ್ದ ಭರಚುಕ್ಕಿಯಲ್ಲಿ ಈ ಬಾರಿ ಒಂದು ನೀರಿನ ಗೆರೆಯೂ ಇಲ್ಲ!