ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಬಿಡುಗಡೆಗಾಗಿ ತಿರುಪತಿ ಹುಂಡಿಗೆ 10 ರು. ಕಾಣಿಕೆ..!

Published : Jul 03, 2024, 12:48 PM ISTUpdated : Jul 03, 2024, 01:06 PM IST
ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಬಿಡುಗಡೆಗಾಗಿ ತಿರುಪತಿ ಹುಂಡಿಗೆ 10 ರು. ಕಾಣಿಕೆ..!

ಸಾರಾಂಶ

ಬಸವರಾಜ ದಾಸರ ದರ್ಶನ ಅಭಿಮಾನಿಯಾಗಿದ್ದು, ಡಿ ಬಾಸ್ ಆದಷ್ಟು ಬೇಗ ಹೊರಗಡೆ ಬರಲಿ ಎಂದು 10 ಮುಖಬೆಲೆ ನೋಟಿನಲ್ಲಿ ಬರೆದು ತಿರುಪತಿ ಹುಂಡಿಗೆ ಹಾಕಿದ್ದಾರೆ. ಈ ನೋಟಿನ ಫೋಟೋ ವೈರಲ್ ಆಗಿದೆ.

ಕನಕಗಿರಿ(ಜು.03):  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ಬಿಡುಗಡೆಯಾಗಲೆಂದು ಪ್ರಾರ್ಥಿಸಿ ಅಭಿಮಾನಿಯೊಬ್ಬ ತಿರುಪತಿ ತಿಮ್ಮಪ್ಪನಿಗೆ ಬೇಡಿಕೊಂಡಿದ್ದಾನೆ. 

ಸ್ಥಳೀಯ ನಿವಾಸಿ ಬಸವರಾಜ ದಾಸರ ದರ್ಶನ ಅಭಿಮಾನಿಯಾಗಿದ್ದು, ಡಿ ಬಾಸ್ ಆದಷ್ಟು ಬೇಗ ಹೊರಗಡೆ ಬರಲಿ ಎಂದು 10 ಮುಖಬೆಲೆ ನೋಟಿನಲ್ಲಿ ಬರೆದು ತಿರುಪತಿ ಹುಂಡಿಗೆ ಹಾಕಿದ್ದಾರೆ. ಈ ನೋಟಿನ ಫೋಟೋ ವೈರಲ್ ಆಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್ ನೋಡಲು ಜೈಲಿಗೆ ಎಂಟ್ರಿ ಕೊಟ್ಟ ಆ ಮಹಿಳೆ ಯಾರು..?

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಬಸವರಾಜ ದಾಸರ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ ಆರೋಪಿಯಾಗಿದ್ದಾರೆ, ಅಪರಾಧಿಯಲ್ಲ. ಒಂದು ವೇಳೆ ಅಪರಾಧಿಯಾಗಿದ್ದರೆ ಶಿಕ್ಷೆಗೊಳಪಡಿಸಲಿ. ಜೈಲಿನಲ್ಲಿ ದರ್ಶನ್‌ ಭೇಟಿಗೆ ನ್ಯಾಯಾಲಯ ಅವಕಾಶ ನೀಡಬೇಕು. "ಯಾವುದೇ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ" ಎಂದು 10 ರು. ನೋಟಿನ ಮೇಲೆ ಬರೆದು ತಿರುಪತಿ ತಿಮ್ಮಪ್ಪನ ಹುಂಡಿಗೆ ಅರ್ಪಣೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC