
ರಾಷ್ಟ್ರೀಯ ನಾಯಕರ ಪ್ರವೇಶದೊಂದಿಗೆ ರಾಜ್ಯದ ವಿಧಾನಸಭಾ ಚುನಾವಣಾ ಅಖಾಡ ಅಗ್ನಿಕುಂಡದಂತಾಗಿದೆ. ನಾಯಕರ ಭಾಷಣದಲ್ಲಿ ಆರೋಪ-ಪ್ರತ್ಯಾರೋಪಗಳಾದರೆ, ಸೋಶಿಯಲ್ ಮೀಡಿಯಾದದಲ್ಲಿ ಸವಾಲುಗಳದ್ದೇ ಆಟ. ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
‘ಯಾವಾಗ’ ಎಂಬ ಒಕ್ಕಣೆಯೊಂದಿಗೆ ಆರಂಭಿಸಿರುವ ಸಿಎಂ ಸಿದ್ದರಾಮಯ್ಯ, ಕನ್ನಡ ಧ್ವಜಕ್ಕೆ ಅಂಗೀಕಾರ ಯಾವಾಗ ನೀಡುತ್ತೀರಿ? ಕನ್ನಡಿಗ-ಪರ ಬ್ಯಾಂಕಿಂಗ್ ಪರೀಕ್ಷೆಗಳಿಗೆ ನಿಯಮಗಳನ್ನು ಯಾವಾಗ ರೂಪಿಸುತ್ತೀರಿ? ಮಹಾದಾಯಿ ವಿಚಾರದಲ್ಲಿ ಮಧ್ಯಸ್ಥಿಕೆ ಯಾವಾಗ ವಹಿಸುತ್ತೀರಿ? ಎಸ್ಡಿಆರ್ಎಫ್ ಪರಿಷ್ಕರಣೆ ಯಾವಾಗ ಮಾಡುತ್ತೀರಿ, ರಾಜ್ಯದ ರತ್ನವಾಗಿರುವ ಬಿಇಎಂಎಲ್ನ ಬಂಡವಾಳ ಹಿಂತೆಗೆತವನ್ನು ಯಾವಗಾ ನಿಲ್ಲಿಸುತ್ತೀರಿ, ರಫೇಲ್ ಡೀಲ್ನಿಂದ ಎಚ್ಎಎಲ್ಗೆ ಆಗಿರುವ ಅನ್ಯಾಯವನ್ನು ಯಾವಾಗ ಸರಿಪಡಿಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.