ಸಿಮೆಂಟ್ ಲಾರಿಯಲ್ಲಿ 70 ಲಕ್ಷ ಹಣ ಪತ್ತೆ

First Published May 11, 2018, 7:33 AM IST
Highlights

ರಾಜ್ಯ ಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ನರ್ತನ ಭಾರೀ ಸದ್ದು ಮಾಡುತ್ತಿದೆ. ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಹಣದ ಹೊಳೆಯೇ ಹರಿಯುತ್ತಿದೆ. 

ಕೋಲಾರ :  ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವಾಗಲೇ ಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ನರ್ತನ ಭಾರೀ ಸದ್ದು ಮಾಡುತ್ತಿದೆ. 

ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಹಣದ ಹೊಳೆಯೇ ಹರಿಯುತ್ತಿದೆ. ಸಿಮೆಂಟ್ ಲಾರಿಯಲ್ಲಿ ಮೂಟೆಗಳ ಮಧ್ಯೆ ಚೀಲದಲ್ಲಿ 500 ಮತ್ತು 2 ಸಾವಿರ ರೂಪಾಯಿ ಮುಖಬೆಲಯ ಒಟ್ಟು 70 ಲಕ್ಷ ಹಣ ಪತ್ತೆಯಾಗಿದೆ. 

ಮುಳಬಾಗಲಿನಿಂದ ಬೆಂಗಳೂರಿನತ್ತ ಹೊರಟಿದ್ದ ಸಿಮೆಂಟ್ ಲಾರಿಯಲ್ಲಿ, ಅಕ್ರಮ ಹಣ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಜಿಲ್ಲಾಧಿಕಾರಿ ಸತ್ಯವತಿ ಕೋಲಾರದ ಕೊಂಡರಾಜಹಳ್ಳಿಯಲ್ಲಿ ಲಾರಿಯನ್ನು ವಶಕ್ಕೆ ಪಡೆದು ಹಣವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!