ಬಿಜೆಪಿ ಭದ್ರಕೋಟೆ ಕರಾವಳಿಯಲ್ಲಿ ಅರಳಿದ ಕಮಲ; ಗೆದ್ದ ಅಭ್ಯರ್ಥಿಗಳ ವಿವರ

First Published May 15, 2018, 4:39 PM IST
Highlights

ಬಿಜೆಪಿ ಭದ್ರ ಕೋಟೆಯಾಗಿರುವ ದಕ್ಷಿಣ ಕನ್ನಡ ಭಾಗದಲ್ಲಿ ಈ ಬಾರಿ ಒಟ್ಟು 8 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ. ಇಲ್ಲಿ ನಡೆದ ಕೋಮು ಸಂಘರ್ಷಗಳಲ್ಲಿ  ಕಾಂಗ್ರೆಸ್ ಸರ್ಕಾರದ ಧೋರಣೆ, ನಡೆದುಕೊಂಡ ರೀತಿ ಜನರು ಬಿಜೆಪಿಯತ್ತ ವಾಲಲು ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.

ಮಂಗಳೂರು (ಮೇ. 15): ಬಿಜೆಪಿ ಭದ್ರ ಕೋಟೆಯಾಗಿರುವ ದಕ್ಷಿಣ ಕನ್ನಡ ಭಾಗದಲ್ಲಿ ಈ ಬಾರಿ ಒಟ್ಟು 8 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಂಡಿದೆ. ಇಲ್ಲಿ ನಡೆದ ಕೋಮು ಸಂಘರ್ಷಗಳಲ್ಲಿ  ಕಾಂಗ್ರೆಸ್ ಸರ್ಕಾರದ ಧೋರಣೆ, ನಡೆದುಕೊಂಡ ರೀತಿ ಜನರು ಬಿಜೆಪಿಯತ್ತ ವಾಲಲು ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ದಕ್ಷಿಣ ಕನ್ನಡ ಬಿಜೆಪಿ ಪ್ರಾಬಲ್ಯವಿರುವ ಭಾಗವಾಗಿರುವುದರಿಂದ ಗೆಲ್ಲಲು ಸುಲಭವಾಯಿತು ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.

ಇಂಟರೆಸ್ಟಿಂಗ್ ವಿಚಾರ ಎಂದರೆ 2013 ರ ಚುನಾವಣೆಯಲ್ಲಿ ಕಾಂಗ್ರೆಸ್ 7 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ಈ ಬಾರಿ ಚುನಾವಣೆಯಲ್ಲಿ ಲೆಕ್ಕಾಚಾರ ತಲೆಕೆಳಗಾಗಿದೆ. 

ದಕ್ಷಿಣ ಕನ್ನಡ ಒಟ್ಟು ಕ್ಷೇತ್ರಗಳು 08 

ಕ್ಷೇತ್ರ                               ಅಭ್ಯರ್ಥಿಗಳು                       ಗೆದ್ದವರು           ಮತಗಳ ಅಂತರ 

ಮಂಗಳೂರು ನಗರ             ಯು ಟಿ ಖಾದರ್                      ಕಾಂಗ್ರೆಸ್       19,739

ಮಂಗಳೂರು ಉತ್ತರ           ಡಾ. ಭರತ್ ಶೆಟ್ಟಿ                     ಬಿಜೆಪಿ            26,648 

ಮಂಗಳೂರು ದಕ್ಷಿಣ            ವೇದವ್ಯಾಸ                           ಬಿಜೆಪಿ            16, 075 

ಮೂಡಬಿದ್ರೆ                       ಉಮಾನಾಥ್ ಕೋಟ್ಯಾನ್         ಬಿಜೆಪಿ           29,799

ಪುತ್ತೂರು                          ಸಂಜೀವ್ ಮಟ್ಟಂದೂರು            ಬಿಜೆಪಿ         19,477

ಸುಳ್ಯ                              ಎಸ್ ಅಂಗಾರ                        ಬಿಜೆಪಿ          12,512 

ಬಂಟ್ವಾಳ                         ರಾಜೇಶ್ ನಾಯ್ಕ್                    ಬಿಜೆಪಿ         15,971

ಬೆಳ್ತಂಗಡಿ                           ಹರೀಶ್ ಪೂಂಜಾ                   ಬಿಜೆಪಿ          22, 974 

 

click me!