ಸಿಎಂ ಸಿದ್ದರಾಮಯ್ಯ ಕನ್ನಡಕವೇ ನಾಪತ್ತೆ

First Published May 3, 2018, 12:53 PM IST
Highlights

ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಭಾಷಣ ಮುಗಿಸಿ ಆಸೀನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡಕ ಕಳೆದುಹೋಗಿತ್ತು. ಬಳಿಕ ಅದನ್ನು ತಕ್ಷಣವೇ ಹುಡುಕಿ ಪತ್ತೆ ಮಾಡಲಾಯಿತು.

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಭಾಷಣ ಮುಗಿಸಿ ಆಸೀನರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡಕ ಕಳೆದುಹೋಗಿತ್ತು.

ಭಾಷಣ ಮಾಡುವಾಗ ಅವರು ಧರಿಸಿದ್ದ ಕನ್ನಡಕ ಭಾಷಣ ಮುಗಿದು ಸ್ಥಳಕ್ಕೆ ಬಂದು ಕೂತ ಮೇಲೆ ಕಾಣೆಯಾಗಿತ್ತು. ತಮ್ಮ ಕನ್ನಡಕ ಇಲ್ಲದೇ ಇರುವುದನ್ನು ಸಿಎಂ ಕಾರ್ಯಕ್ರಮದ ಆಯೋಜಕರ ಗಮನಕ್ಕೆ ತಂದರು.

ವೇದಿಕೆಯಲ್ಲಿದ್ದವರು ಎರಡು ಮೂರು ನಿಮಿಷಗಳಲ್ಲೇ ಹುಡುಕಾಡಿ ವೇದಿಕೆಯಲ್ಲೇ ಬಿದ್ದಿದ್ದ ಸಿಎಂ ಅವರ ಕನ್ನಡಕ ತಂದುಕೊಟ್ಟರು. ಸಿಎಂ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಕಾಣೆಯಾಗಿದ್ದ ಕನ್ನಡವು ತಕ್ಷಣವೇ ಪತ್ತೆಯಾಯ್ತು.

click me!