Karnataka Assembly Election- 2018
ಮುಖ್ಯಮಂತ್ರಿ ಸಿದ್ದರಾಮಯ್ಯ 5ನೇ ಸುತ್ತಿನಲ್ಲೂ ಹಿನ್ನಡೆ ಸಾಧಿಸಿದ್ದು, 11 ಸಾವಿರಕ್ಕೂ ಹೆಚ್ಚು ಮತಗಳಿಂದ ಹಿಂದಿದ್ದಾರೆ. 5ನೇ ಸುತ್ತಿನಲ್ಲಿ ಹಿನ್ನಡೆಯಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸೋಲಿನ ಸುಳಿವು ದೊರತಂದೆ ಕಾಣಿಸುತ್ತಿದೆ.
ಬೆಂಗಳೂರು(ಮೇ.15) :ಮೂಡಬಿದರೆಯಲ್ಲಿ ಬಿಜೆಪಿ ಅಭ್ಯರ್ಥಿ ಉಪನಾಥ್ ಕೋಟ್ಯನ್ 10 ಸಾವಿರಕಕ್ಕೂ ಅಧಿಕ ಅಂತರದಲ್ಲಿ ಗೆಲುವು ಸಾದಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 5ನೇ ಸುತ್ತಿನಲ್ಲೂ ಹಿನ್ನಡೆ ಸಾಧಿಸಿದ್ದು, 11 ಸಾವಿರಕ್ಕೂ ಹೆಚ್ಚು ಮತಗಳಿಂದ ಹಿಂದಿದ್ದಾರೆ. 5ನೇ ಸುತ್ತಿನಲ್ಲಿ ಹಿನ್ನಡೆಯಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸೋಲಿನ ಸುಳಿವು ದೊರತಂದೆ ಕಾಣಿಸುತ್ತಿದೆ. ಉತ್ತರ, ಮುಂಬೈ ಹಾಗೂ ಕರಾವಳಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಹೈದ್ರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ
40ರ ಆಸುಪಾಸಿನಲ್ಲಿ ಜೆಡಿಎಸ್ ಮುಂದೆ
ನಿರೀಕ್ಷಿಸದ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಳ್ಳದ ಕಾಂಗ್ರೆಸ್
ಯಲಹಂಕದಲ್ಲಿ ಬಿಜೆಪಿ, ಬ್ಯಾಟರಾಯಪುರದಲ್ಲಿ ಕಾಂಗ್ರೆಸ್ ಮುನ್ನಡೆ
ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಮುನ್ನಡೆ
ಹೆಚ್.ಸಿ. ಮಹದೇವಪ್ಪಾಗೆ ಭಾರಿ ಹಿನ್ನಡೆ
ಸೊರಬಾದಲ್ಲಿ ಮಧು ಹಿನ್ನಡೆ
ಶಾಂತಿನಗರದಲ್ಲಿ ಹ್ಯಾರಿಸ್ ಹಿನ್ನಡೆ