ಕಾಂಗ್ರೆಸ್’ನತ್ತ ಕೊಪ್ಪಳ ಬಿಜೆಪಿ ಮುಖಂಡರು

First Published Apr 25, 2018, 12:01 PM IST
Highlights

ಕೊಪ್ಪಳ ಜಿಲ್ಲೆಯ ಹಿರಿಯ ಮುಖಂಡ ಹಾಗೂ ಬಿಜೆಪಿಯ ಮಾಜಿ ಸಂಸದರಾದ ವಿರೂಪಾಕ್ಷಪ್ಪ ಹಾಗೂ ಶಿವರಾಮೇಗೌಡ ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ.

ಕೊಪ್ಪಳ : ಕೊಪ್ಪಳ ಜಿಲ್ಲೆಯ ಹಿರಿಯ ಮುಖಂಡ ಹಾಗೂ ಬಿಜೆಪಿಯ ಮಾಜಿ ಸಂಸದರಾದ ವಿರೂಪಾಕ್ಷಪ್ಪ ಹಾಗೂ ಶಿವರಾಮೇಗೌಡ ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ.

ಉಭಯ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ.

ಈ ಸಂಬಂಧ ಮಾತನಾಡಿದ ಶಿವರಾಮೇಗೌಡ ಬಿಜೆಪಿಯಲ್ಲಿ ಪ್ರಮಾಣಿಕರಿಗೆ ಬೆಲೆಯಿಲ್ಲ. ನಾನು ಜನತಾ ಪರಿವಾರದಿಂದ ಬಂದವನು. ಕರಡಿಗೆ,ಅವರ ಮಗನಿಗೆ ಕೊಪ್ಪಳದಲ್ಲಿ ಟಿಕೆಟ್ ಕೊಡುತ್ತಾರೆ.

ನಮಗೆ ಯಾವ ಬೆಲೆಯನ್ನೂ ಕೊಡುವುದಿಲ್ಲ. ನಮಗೆ ಬೆಲೆ ಇಲ್ಲದ ಕಡೆ ನಾವೇಕೆ ಕೆಲಸ ಮಾಡಬೇಕು. ಆದ್ದರಿಂದ ಇಂದು ಮಧ್ಯಾಹ್ನ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪೇಯಾಗುತ್ತೇವೆ  ಎಂದು ಹೇಳಿದ್ದಾರೆ.

ಮತದಾನ ನಿಮ್ಮ ಹಕ್ಕು, ನಿಮ್ಮ ಜವಾಬ್ದಾರಿ ಕೂಡಾ | ತಪ್ಪದೇ ಮತ ಹಾಕಿ – ಮೇ 12, 2018

click me!