ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ

Published : Nov 07, 2019, 12:28 PM ISTUpdated : Nov 07, 2019, 12:31 PM IST
ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ

ಸಾರಾಂಶ

ಮಹಿಳಾ ಉದ್ಯಮಿ ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ ಬಾಬುರಾವ ಚಿಂಚನಸೂರ| ಅಂಜನ ಯಾರು ಎನ್ನುವುದೇ ನನಗೆ ಗೊತ್ತಿಲ್ಲ| ಆಕೆಯ ಮುಖ ನಾ ಜೀವನದಲ್ಲಿಯೇ ನೋಡಿಲ್ಲ| ಆ ಮಹಿಳೆಯಿಂದ ನಾ ನಯಾ ಪೈಸೆ ಸಾಲ ಪಡೆದಿಲ್ಲ| ನಾನು ಆಕೆಗೆ ಚೆಕ್ ಕೊಟ್ಟಿದ್ದೆ ಎನ್ನುವುದೇ ಶುದ್ದ ಸುಳ್ಳು| 

ಕಲಬುರಗಿ[ನ.7]: ಮಹಿಳಾ ಉದ್ಯಮಿ ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಅಂಜನ ಯಾರು ಎನ್ನುವುದೇ ನನಗೆ ಗೊತ್ತಿಲ್ಲ ಎಂದು  ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರು ಹೇಳಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕೆಯ ಮುಖ ನಾ ಜೀವನದಲ್ಲಿಯೇ ನೋಡಿಲ್ಲ. ಆ ಮಹಿಳೆಯಿಂದ ನಾ ನಯಾ ಪೈಸೆ ಸಾಲ ಪಡೆದಿಲ್ಲ. ನಾನು ಆಕೆಗೆ ಚೆಕ್ ಕೊಟ್ಟಿದ್ದೆ ಎನ್ನುವುದೇ ಶುದ್ದ ಸುಳ್ಳು. ನನ್ನ ಚೆಕ್ ಕಳ್ಳತನ ಆಗಿತ್ತು. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಏಳ್ಗೆ ಸಹಿಸದೆ ಈ ಷಡ್ಯಂತ್ರ ರೂಪಿಸಿವೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗುತ್ತದೆ ಎಂಬ ವಿಶ್ವಾಸ ಇದೆ. ನ್ಯಾಯಾಲಯದಲ್ಲಿ ಗೆದ್ದು ಮತ್ತಷ್ಟು ಬಲಿಷ್ಠ ನಾಯಕನಾಗಿ ಹೊರಹೊಮ್ಮುವೆ ಎಂದು ಹೇಳಿದ್ದಾರೆ. ಚಿಂಚನಸೂರ್‌ಗೆ 11 ಕೋಟಿ ಸಾಲ ಕೊಟ್ಟಿದ್ದ ಮಹಿಳೆ ಆತ್ಮಹತ್ಯೆ

PREV
click me!

Recommended Stories

kalaburagi: ಚಿಮ್ಮನಚೋಡ - ನರನಾಳ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿತ
ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!