ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ

Published : Nov 07, 2019, 12:28 PM ISTUpdated : Nov 07, 2019, 12:31 PM IST
ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ

ಸಾರಾಂಶ

ಮಹಿಳಾ ಉದ್ಯಮಿ ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದ ಮಾಜಿ ಸಚಿವ ಬಾಬುರಾವ ಚಿಂಚನಸೂರ| ಅಂಜನ ಯಾರು ಎನ್ನುವುದೇ ನನಗೆ ಗೊತ್ತಿಲ್ಲ| ಆಕೆಯ ಮುಖ ನಾ ಜೀವನದಲ್ಲಿಯೇ ನೋಡಿಲ್ಲ| ಆ ಮಹಿಳೆಯಿಂದ ನಾ ನಯಾ ಪೈಸೆ ಸಾಲ ಪಡೆದಿಲ್ಲ| ನಾನು ಆಕೆಗೆ ಚೆಕ್ ಕೊಟ್ಟಿದ್ದೆ ಎನ್ನುವುದೇ ಶುದ್ದ ಸುಳ್ಳು| 

ಕಲಬುರಗಿ[ನ.7]: ಮಹಿಳಾ ಉದ್ಯಮಿ ಅಂಜನಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಅಂಜನ ಯಾರು ಎನ್ನುವುದೇ ನನಗೆ ಗೊತ್ತಿಲ್ಲ ಎಂದು  ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರು ಹೇಳಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕೆಯ ಮುಖ ನಾ ಜೀವನದಲ್ಲಿಯೇ ನೋಡಿಲ್ಲ. ಆ ಮಹಿಳೆಯಿಂದ ನಾ ನಯಾ ಪೈಸೆ ಸಾಲ ಪಡೆದಿಲ್ಲ. ನಾನು ಆಕೆಗೆ ಚೆಕ್ ಕೊಟ್ಟಿದ್ದೆ ಎನ್ನುವುದೇ ಶುದ್ದ ಸುಳ್ಳು. ನನ್ನ ಚೆಕ್ ಕಳ್ಳತನ ಆಗಿತ್ತು. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಏಳ್ಗೆ ಸಹಿಸದೆ ಈ ಷಡ್ಯಂತ್ರ ರೂಪಿಸಿವೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗುತ್ತದೆ ಎಂಬ ವಿಶ್ವಾಸ ಇದೆ. ನ್ಯಾಯಾಲಯದಲ್ಲಿ ಗೆದ್ದು ಮತ್ತಷ್ಟು ಬಲಿಷ್ಠ ನಾಯಕನಾಗಿ ಹೊರಹೊಮ್ಮುವೆ ಎಂದು ಹೇಳಿದ್ದಾರೆ. ಚಿಂಚನಸೂರ್‌ಗೆ 11 ಕೋಟಿ ಸಾಲ ಕೊಟ್ಟಿದ್ದ ಮಹಿಳೆ ಆತ್ಮಹತ್ಯೆ

PREV
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಸಮಯ ಬದಲಾವಣೆ!