ಒಂದು ತಪ್ಪು ಇಡೀ ಟೂರ್ನಿಯನ್ನೇ ಹಾಳು ಮಾಡಬಹುದು ಎಚ್ಚರ ಎಂದ ನಾಯಕ ಕೊಹ್ಲಿ

By Suvarna NewsFirst Published Aug 25, 2020, 11:19 AM IST
Highlights

ಯಾರೋ ಒಬ್ಬರು ಬಯೋ ಸೆಕ್ಯೂರ್ ಝೋನ್ ಉಲ್ಲಂಘಿಸಿ ತಪ್ಪು ಮಾಡಿದರೆ, ಅಕ್ಷರಶಃ ಐಪಿಎಲ್ ಟೂರ್ನಿಯನ್ನೇ ಹಾಳು ಮಾಡಲಿದೆ. ಹೀಗಾಗುವುದು ಯಾರಿಗೂ ಇಷ್ಟವಿಲ್ಲ ಎನ್ನುವುದು ನೆನಪಿರಲಿ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಆ.25): ‘ಒಂದೇ ಒಂದು ತಪ್ಪು ಇಡೀ ಐಪಿ​ಎಲ್‌ ಟೂರ್ನಿಯನ್ನೇ ಹಾಳು​ಮಾ​ಡ​ಲಿದೆ. ಪ್ರತಿ​ಯೊ​ಬ್ಬರೂ ಕೊರೋನಾ ಸೋಂಕು ತಡೆಗ​ಟ್ಟಲು ಆಯೋ​ಜ​ಕರ ಸೂಚನೆಯಂತೆ ಬಯೋ ಬಬಲ್‌ನ ನಿಯಮವನ್ನು ಕಡ್ಡಾ​ಯವಾಗಿ ಪಾಲಿ​ಸ​ಬೇಕು’ ಎಂದು ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ, ಸಹ ಆಟ​ಗಾ​ರ​ರಿಗೆ ಸೂಚ​ಸಿ​ದ್ದಾರೆ. 

ದುಬೈ ತಲು​ಪಿದ ಬಳಿಕ 6 ದಿನ​ಗಳ ಕ್ವಾರಂಟೈನ್‌ಗೆ ಒಳ​ಪಟ್ಟಿರುವ ತಂಡ, ಸೋಮ​ವಾರ ವಿಡಿಯೋ ಕಾನ್ಫ​ರೆನ್ಸ್‌ ನಡೆ​ಸಿತು. ಯಾರೋ ಒಬ್ಬರು ಬಯೋ ಸೆಕ್ಯೂರ್ ಝೋನ್ ಉಲ್ಲಂಘಿಸಿ ತಪ್ಪು ಮಾಡಿದರೆ, ಅಕ್ಷರಶಃ ಐಪಿಎಲ್ ಟೂರ್ನಿಯನ್ನೇ ಹಾಳು ಮಾಡಲಿದೆ. ಹೀಗಾಗುವುದು ಯಾರಿಗೂ ಇಷ್ಟವಿಲ್ಲ ಎನ್ನುವುದು ನೆನಪಿರಲಿ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಉಸೇನ್ ಬೋಲ್ಟ್‌ಗೂ ವಕ್ಕರಿಸಿದ ಕೊರೋನಾ; ಕ್ರಿಸ್ ಗೇಲ್‌ಗೂ ಶುರುವಾಯ್ತು ಭೀತಿ..!

‘ನಮ್ಮ ಮೊದಲ ಅಭ್ಯಾಸದ ಅವ​ಧಿಗೆ ಕಾಯುತ್ತಿದ್ದೇನೆ. ಎಲ್ಲರೂ ಉತ್ಸು​ಕ​ರಾ​ಗಿದ್ದೀರಿ ಎಂದು ತಿಳಿ​ದಿದೆ. ಮೊದಲ ದಿನ​ದಿಂದಲೇ ತಂಡ​ದೊ​ಳಗೆ ಉತ್ತಮ ವಾತಾ​ವ​ರಣ ಸೃಷ್ಟಿ​ಸಲು ಇದು ಉತ್ತಮ ಅವ​ಕಾಶ’ ಎಂದು ಕೊಹ್ಲಿ ಹೇಳಿ​ದರು.

Sneak peek into RCB’s first virtual team meeting of after landing in the UAE, with , and Simon Katich welcoming the team and addressing them on an exciting season that’s right around the corner! 💻🤩 pic.twitter.com/VA4jY7HylN

— Royal Challengers Bangalore (@RCBTweets)

ಕಳೆದ 12 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೊಸ ಉತ್ಸಾಹದೊಂದಿಗೆ ದುಬೈಗೆ ಬಂದಿಳಿದಿದೆ. 2020ನೇ ಸಾಲಿನ ಐಪಿಎಲ್ ಟೂರ್ನಿ ನಿಗದಿಯಂತೆ ಭಾರತದಲ್ಲೇ ನಡೆಯಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ.

click me!