ಒಂದು ತಪ್ಪು ಇಡೀ ಟೂರ್ನಿಯನ್ನೇ ಹಾಳು ಮಾಡಬಹುದು ಎಚ್ಚರ ಎಂದ ನಾಯಕ ಕೊಹ್ಲಿ

Suvarna News   | Asianet News
Published : Aug 25, 2020, 11:19 AM IST
ಒಂದು ತಪ್ಪು ಇಡೀ ಟೂರ್ನಿಯನ್ನೇ ಹಾಳು ಮಾಡಬಹುದು ಎಚ್ಚರ ಎಂದ ನಾಯಕ ಕೊಹ್ಲಿ

ಸಾರಾಂಶ

ಯಾರೋ ಒಬ್ಬರು ಬಯೋ ಸೆಕ್ಯೂರ್ ಝೋನ್ ಉಲ್ಲಂಘಿಸಿ ತಪ್ಪು ಮಾಡಿದರೆ, ಅಕ್ಷರಶಃ ಐಪಿಎಲ್ ಟೂರ್ನಿಯನ್ನೇ ಹಾಳು ಮಾಡಲಿದೆ. ಹೀಗಾಗುವುದು ಯಾರಿಗೂ ಇಷ್ಟವಿಲ್ಲ ಎನ್ನುವುದು ನೆನಪಿರಲಿ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಆ.25): ‘ಒಂದೇ ಒಂದು ತಪ್ಪು ಇಡೀ ಐಪಿ​ಎಲ್‌ ಟೂರ್ನಿಯನ್ನೇ ಹಾಳು​ಮಾ​ಡ​ಲಿದೆ. ಪ್ರತಿ​ಯೊ​ಬ್ಬರೂ ಕೊರೋನಾ ಸೋಂಕು ತಡೆಗ​ಟ್ಟಲು ಆಯೋ​ಜ​ಕರ ಸೂಚನೆಯಂತೆ ಬಯೋ ಬಬಲ್‌ನ ನಿಯಮವನ್ನು ಕಡ್ಡಾ​ಯವಾಗಿ ಪಾಲಿ​ಸ​ಬೇಕು’ ಎಂದು ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ, ಸಹ ಆಟ​ಗಾ​ರ​ರಿಗೆ ಸೂಚ​ಸಿ​ದ್ದಾರೆ. 

ದುಬೈ ತಲು​ಪಿದ ಬಳಿಕ 6 ದಿನ​ಗಳ ಕ್ವಾರಂಟೈನ್‌ಗೆ ಒಳ​ಪಟ್ಟಿರುವ ತಂಡ, ಸೋಮ​ವಾರ ವಿಡಿಯೋ ಕಾನ್ಫ​ರೆನ್ಸ್‌ ನಡೆ​ಸಿತು. ಯಾರೋ ಒಬ್ಬರು ಬಯೋ ಸೆಕ್ಯೂರ್ ಝೋನ್ ಉಲ್ಲಂಘಿಸಿ ತಪ್ಪು ಮಾಡಿದರೆ, ಅಕ್ಷರಶಃ ಐಪಿಎಲ್ ಟೂರ್ನಿಯನ್ನೇ ಹಾಳು ಮಾಡಲಿದೆ. ಹೀಗಾಗುವುದು ಯಾರಿಗೂ ಇಷ್ಟವಿಲ್ಲ ಎನ್ನುವುದು ನೆನಪಿರಲಿ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಉಸೇನ್ ಬೋಲ್ಟ್‌ಗೂ ವಕ್ಕರಿಸಿದ ಕೊರೋನಾ; ಕ್ರಿಸ್ ಗೇಲ್‌ಗೂ ಶುರುವಾಯ್ತು ಭೀತಿ..!

‘ನಮ್ಮ ಮೊದಲ ಅಭ್ಯಾಸದ ಅವ​ಧಿಗೆ ಕಾಯುತ್ತಿದ್ದೇನೆ. ಎಲ್ಲರೂ ಉತ್ಸು​ಕ​ರಾ​ಗಿದ್ದೀರಿ ಎಂದು ತಿಳಿ​ದಿದೆ. ಮೊದಲ ದಿನ​ದಿಂದಲೇ ತಂಡ​ದೊ​ಳಗೆ ಉತ್ತಮ ವಾತಾ​ವ​ರಣ ಸೃಷ್ಟಿ​ಸಲು ಇದು ಉತ್ತಮ ಅವ​ಕಾಶ’ ಎಂದು ಕೊಹ್ಲಿ ಹೇಳಿ​ದರು.

ಕಳೆದ 12 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಹೊಸ ಉತ್ಸಾಹದೊಂದಿಗೆ ದುಬೈಗೆ ಬಂದಿಳಿದಿದೆ. 2020ನೇ ಸಾಲಿನ ಐಪಿಎಲ್ ಟೂರ್ನಿ ನಿಗದಿಯಂತೆ ಭಾರತದಲ್ಲೇ ನಡೆಯಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ. ಸೆಪ್ಟೆಂಬರ್ 19ರಿಂದ ಟೂರ್ನಿ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ
IPL 2026: ರಾಜಸ್ಥಾನ ರಾಯಲ್ಸ್‌ಗೆ ಅಚ್ಚರಿ ನಾಯಕನ ನೇಮಕ; ರವೀಂದ್ರ ಜಡೇಜಾಗೆ ಭಾರೀ ನಿರಾಸೆ