ಬಿರಿಯಾನಿ ಆರ್ಡರ್ ಮಾಡಿದ ಗ್ರಾಹಕ ಕಕ್ಕಾಬಿಕ್ಕಿ, ಆಹಾರ ಜೊತೆ ಪಾರ್ಸೆಲ್ ಆಗಿ ಬಂತು ಬೈಗುಳ!

Published : Oct 31, 2024, 10:23 AM ISTUpdated : Oct 31, 2024, 04:07 PM IST
ಬಿರಿಯಾನಿ ಆರ್ಡರ್ ಮಾಡಿದ ಗ್ರಾಹಕ ಕಕ್ಕಾಬಿಕ್ಕಿ, ಆಹಾರ ಜೊತೆ ಪಾರ್ಸೆಲ್ ಆಗಿ ಬಂತು ಬೈಗುಳ!

ಸಾರಾಂಶ

ಡೆಲಿವರಿ ಬಾಯ್ ಆಹಾರ ವಿತರಣೆ ಮಾಡುವಾಗ ಹಲವು ರೋಚಕ ಘಟನೆಗಳು ನಡೆದಿದೆ. ಆಧರೆ ದೀಪಾವಳಿ ಹಬ್ಬದ ನಡುವೆ ಬಿರಿಯಾನಿ ಆರ್ಡರ್ ಮಾಡಿದ ಗ್ರಾಹಕನಿಗೆ ಡೆಲಿವರಿ ಬಾಯ್ ಉಗಿದು ಉಪ್ಪಿನಕಾಯಿ ಹಾಕಿದ ಘಟನೆ ನಡೆದಿದೆ.

ದೆಹಲಿ(ಅ.31) ಸರ್ ನೀವು ತಪ್ಪು ಮಾಡುತ್ತಿದ್ದೀರಿ. ಮಾಂಸಾಹಾರ ದೀಪಾವಳಿ ಬಳಿಕ ಸೇವಿಸಿ, ಇದು ಒಳ್ಳೆಯದಲ್ಲ. ಇದು ಡೆಲಿವರಿ ಬಾಯ್, ಬಿರಿಯಾನಿ ಆರ್ಡರ್ ಮಾಡಿದ ಗ್ರಾಹಕನಿಗೆ ನೀಡಿದ ವಾರ್ನಿಂಗ್.  ಆಹಾರ ಆರ್ಡರ್ ಮಾಡಿದ ಗ್ರಾಹಕರು ಡೆಲಿವರಿ ಬಾಯ್‌ಗೆ ತಡವಾದ ಕಾರಣಕ್ಕೆ, ಅಥವಾ ಇನ್ಯಾವುದೋ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸುವುದು, ರಿಪೋರ್ಟ್ ಮಾಡುವ ಘಟನೆಗಳು ನಡೆದಿದೆ. ಆದರೆ ಫುಡ್ ಆರ್ಡರ್ ಮಾಡಿದ ಗ್ರಾಹಕನಿಗೆ ಈ ಆಹಾರ ಆರ್ಡರ್ ಮಾಡಿದ್ದು ಯಾಕೆ ಎಂದು ಡೆಲಿವರಿ ಬಾಯ್ ಆಕ್ರೋಶ ಹೊರಹಾಕಿದ ಘಟನೆ ಇದೇ ಮೊದಲು. ದೆಹಲಿಯಲ್ಲಿ ಬಿರಿಯಾನಿ ಆರ್ಡರ್ ಮಾಡಿ ಇನ್ನೇನು ಖುಷಿಯಿಂದ ತಿನ್ನಲು ಕಾಯುತ್ತಿದ್ದ ಗ್ರಾಹಕನಿಗೆ ಬಿರಿಯಾನಿ ತಿನ್ನಬೇಕೋ ಅಥವಾ ಎಸೆಯಬೇಕು ಅನ್ನೋ ಪರಿಸ್ಥಿತಿ ಎದುರಾಗಿದೆ.

ದೆಹಲಿಯ ಗ್ರಾಹಕನೊಬ್ಬ ಆನ್‌ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಿದ್ದಾನೆ. ಕೆಲ ಹೊತ್ತಲ್ಲೇ ಡೆಲಿವರಿ ಬಾಯ್ ಮನೆಯ ಡೋಲ್ ಬೆಲ್ ರಿಂಗಣಿಸಿದ್ದಾನೆ. ಬಾಗಿಲು ತೆರೆದ ಗ್ರಾಹಕನಿಗೆ ಬಿರಿಯಾನಿ ಪಾರ್ಸೆಲ್ ಹೇಳಿದ್ದೀರಿ. ಒಟಿಪಿ ಹೇಳಿ ಎಂದಿದ್ದಾನೆ. ಮೊಬೈಲ್ ತೆಗೆದು ಒಟಿಪಿ ಹೇಳಿದ ಬೆನ್ನಲ್ಲೇ ಡೆಲಿವರಿ ಬಾಯ್ ಕೋಡ್ ದಾಖಲಿಸಿದ್ದಾನೆ. ಬಳಿಕ ಬಿರಿಯಾನಿ ಪಾರ್ಸೆಲ್‌ನ್ನು ಗ್ರಾಹಕನ ಕೈಗಿಟ್ಟಿದ್ದಾನೆ. ಸಾಮಾನ್ಯವಾಗಿ ಇಷ್ಟು ಮಾಡಿದ ಬಳಿಕ ಡೆಲಿವರಿ ಬಾಯ್ ಕೆಲಸ ಮುಗೀತು. 

ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಅಚ್ಚರಿ, ಡೆಲಿವರಿಗೆ ಬಂದ ಜೊಮ್ಯಾಟೋ ಸಿಇಒ & ಪತ್ನಿ!

ಆದರೆ ಇಲ್ಲಿ ಹಾಗಾಗಲಿಲ್ಲ. ಪಾರ್ಸೆಲ್ ಕೈಗೆ ನೀಡಿದ ಡೆಲಿವರಿ ಬಾಯ್, ಭಯ್ಯಾ ಇಲ್ಲಿ ಕೇಳಿ ಎಂದು ಡೆಲಿವರಿ ಆಡಿದ ಮಾತುಗಳು ಬಿರಿಯಾನಿ ಆರ್ಡರ್ ಮಾಡಿದ ಗ್ರಾಹನಿಗೆ ಕಪಾಳ ಮೋಕ್ಷ ಮಾಡಿದಂತಿತ್ತು. ಅಣ್ಣಾ ಕೇಳು, ನೀವು ಅತೀ ದೊಡ್ಡ ತಪ್ಪು ಮಾಡುತ್ತೀದ್ದೀರಿ. ನಿಮ್ಮ ಧರ್ಮದಲ್ಲಿ ಇದು ಸರಿಯಲ್ಲ ಎಂದು ಆಕ್ರೋಶ ಭರಿತನಾಗಿ ಹೇಳಿದ್ದಾನೆ. ಅಚ್ಚರಿಗೊಂಡ ಗ್ರಾಹಕ, ಎನಾಯ್ತು ಅಣ್ಣಾ ಎಂದು ಮರು ಪ್ರಶ್ನಿಸಿದ್ದಾನೆ.

ಇದಕ್ಕೆ ಉತ್ತರಿಸಿದ ಡೆಲಿವರಿ ಬಾಯ್, ಈ ಚಿಕನ್, ಮಟನ್ ಎಲ್ಲಾ ದೀಪಾವಳಿ ಹಬ್ಬದ ಬಳಿಕ ಸೇವಿಸಿ. ಅಲ್ಲೀವರೆಗೆ ಪಾವಿತ್ರ್ಯತೆ ಕಾಪಾಡಿಕೊಳ್ಳಿ ಎಂದಿದ್ದಾನೆ. ಇಷ್ಟೇ ಅಲ್ಲ ಸಿಟ್ಟಿನಿಂದ ಡೆಲಿವರಿ ಬಾಯ್ ಒಂದೆರಡು ಕ್ಷಣ ಗ್ರಾಹಕನ ದಿಟ್ಟಿಸಿ ನೋಡಿದ್ದಾನೆ. ಈ ಘಟನೆಯನ್ನು ಗ್ರಾಹಕ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಆತನ ಮಾತುಗಳನ್ನು ಕೇಳಿದ ಬಳಿಕ ನಾನು ತಪ್ಪಿತಸ್ಥನ ಭಾವದಲ್ಲಿ ಆತನ ಎದರು ನಿಂತಿದ್ದೆ. ಅವನಿಗೆ ಏನು ಹೇಳಲಿ ಎಂದು ತೋಚದಾಯಿತು. ಆತ ಇಷ್ಟೊಂದು ಕಾಳಜಿ ವಹಿಸುತ್ತಿರುವುದೇಕೆ? ಆತನ ನಂಬರ್ ನನ್ನ ಬಳಿ ಇದೆ,  ಆತನ ವಿರುದ್ದ ದೂರು ನೀಡಲೇ? ದೂರು ನೀಡಿ ದೊಡ್ಡ ಘಟನೆಯನ್ನಾಗಿ ಮಾಡಬೇಕಾ? ಆದರೆ ದಿನ ಮೂಡ್ ಹಾಳಾಯಿತು. ದಿನವೂ ಹಾಳಾಯಿತು ಎಂದು ಗ್ರಾಹಕ ಬರೆದುಕೊಂಡಿದ್ದಾರೆ.

ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಟೆಕ್ಕಿ, ಬೀದಿಗೆ ಬಿದ್ದು ಬೀದಿಯಿಂದ ಕಟ್ಟಿದ ಜೀವನ ನೆನೆದು ಭಾವುಕ!

ಈ ಪೋಸ್ಟ್‌ಗೆ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನಾವು ಯಾವ ಆಹಾರ ಸೇವಿಸಬೇಕು ಅನ್ನೋದು ನಮ್ಮ ಹಕ್ಕು. ಆತನ ವಿರುದ್ದ ದೂರು ನೀಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ಹಲವರು ಇದೇ ರೀತಿ ನಡೆದ ಘಟನೆಗಳನ್ನು ವಿವರಿಸಿದ್ದಾರೆ. ಇತ್ತ ಡೆಲಿವರಿ ಬಾಯ್ ಪರವಾಗಿಯೂ ಕೆಲವರು ಕಮೆಂಟ್ ಮಾಡಿದ್ದಾರೆ. ಹಿಂದೂವಾಗಿ ಒಂದೆರೆಡು ದಿನ ಮಾಂಸಾಹಾರ ಸೇವಿಸುವುದು ಕಷ್ಟವಲ್ಲ. ದೀಪಾವಳಿ ಅಥವಾ ಇನ್ಯಾವುದೇ ಪವಿತ್ರ ಹಬ್ಬಗಳಿಗೆ ಪಾವಿತ್ರ್ಯ ಕಾಪಾಡಿಕೊಂಡರೆ ಮುಂದಿನ ಪೀಳಿಗೆಗೆ ನಮ್ಮ ಹಬ್ಬಗಳ ಮಹತ್ವ ಅರಿವಾಗಲಿದೆ. ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಹೀಗಾಗಿ ದೂರುವುದಕ್ಕಿಂತ ಉತ್ತಮ ಹವ್ಯಾಸ ಬೆಳೆಸಿಕೊಳ್ಳುವುದು ಸರಿಯಾದ ಕ್ರಮ ಎಂದು ಹಲವರು ಸೂಚಿಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು