2018ರಲ್ಲಿ ರಾಜಕೀಯ ಸನ್ಯಾಸ, 2021ರಲ್ಲಿ ಟಿಎಂಸಿ ಸೇರ್ಪಡೆ: ಯಶವಂತ್ ಸಿನ್ಹಾ ಅಂದು-ಇಂದು!

Published : Mar 13, 2021, 06:46 PM ISTUpdated : Mar 13, 2021, 06:53 PM IST
2018ರಲ್ಲಿ ರಾಜಕೀಯ ಸನ್ಯಾಸ, 2021ರಲ್ಲಿ ಟಿಎಂಸಿ ಸೇರ್ಪಡೆ: ಯಶವಂತ್ ಸಿನ್ಹಾ ಅಂದು-ಇಂದು!

ಸಾರಾಂಶ

ಇದು ನನ್ನ ಕೊನೆಯ ಚುನಾವಣೆ. ರಾಜಕೀಯ ನಾಯಕರ ಈ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಕಾರಣ ಈ ರೀತಿ ಹೇಳಿದವರೆಲ್ಲಾ ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಗೆದ್ದಿದ್ದಾರೆ, ಸೋತಿದ್ದಾರೆ. ಆದರೆ ರಾಜಕೀಯ ನಿವೃತ್ತಿ ಘೋಷಿಸಿ, ಮತ್ತೆ ಬೆರೋಂದು ಪಕ್ಷ ಸೇರಿದವರ ಊದಾಹರಣೆ ಕೊಂಚ ಕಡಿಮೆ. ಆದರೆ ಟಿಎಂಸಿ ಸೇರಿಕೊಂಡಿರುವ ಯಶವಂತ್ ಸಿನ್ಹಾ ಇದೇ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.

ಕೋಲ್ಕತಾ(ಮಾ.13): ಬಿಜೆಪಿ ಮಾಜಿ ನಾಯಕ ಯಶವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್ ಸೇರಿಕೊಂಡು ಬಾರಿ ಸಂಚಲನ ಸೃಷ್ಟಿಸಿದ್ದಾರೆ. ವಾಜಪೇಯಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಿನ್ಹಾ ಇದೀಗ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಸೇರಿಕೊಂಡಿದ್ದಾರೆ. ಸಿನ್ಹಾ ಟಿಎಂಸಿ ಸೇರ್ಪಡೆ ಕುರಿತು ಚರ್ಚಗಳು ನಡೆಯುತ್ತಿದೆ. ಇದರ ಜೊತೆಗೆ ಸಿನ್ಹಾ ಹಳೇ ವಿಡಿಯೋ ಒಂದು ವೈರಲ್ ಆಗಿದೆ.

ಬಿಜೆಪಿ ಮಾಜಿ ನಾಯಕ ಟಿಎಂಸಿಗೆ: ವಾಜಪೇಯಿ ಅಧಿಕಾರವಧಿಯಲ್ಲಿ ವಿತ್ತ ಸಚಿವರಾಗಿದ್ದ ಸಿನ್ಹಾ!

ಯಶವಂತ್ ಸಿನ್ಹಾ 2018ರಲ್ಲಿ ಬಿಜೆಪಿ ವೇದಿಕೆಯಲ್ಲಿ ಮಾಡಿದ್ದ ಭಾಷಣ ಇದೀಗ ವೈರಲ್ ಆಗಿದೆ. 4 ವರ್ಷಗಳ ಹಿಂದೆ ಚುನಾವಣಾ ಕಣದಿಂದ ನಾನು ನಿವೃತ್ತಿಯಾಗಿದ್ದೇನೆ. ಇದೀಗ ನಾಲ್ಕು ವರ್ಷಗಳ ಬಳಿಕ ರಾಜಕೀಯಿಂದ ನಿವೃತ್ತಿಯಾಗುತ್ತಿದ್ದೇನೆ. ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತಿದ್ದೇನೆ ಎಂದು ಈ ವೇದಿಕೆಯಲ್ಲಿ ಘೋಷಿಸುತ್ತಿದ್ದೇನೆ. ಪಕ್ಷದ ರಾಜನೀತಿಯಲ್ಲಿ ನಾನಿರುವುದಿಲ್ಲ. ಇತರ ಯಾವುದೇ ಪಕ್ಷ ಸೇರುವುದಿಲ್ಲ. ಸಂಪೂರ್ಣ ಸನ್ಯಾಸತ್ವ ಎಂದು 2018ರಲ್ಲಿ ಸಿನ್ಹಾ ಘೋಷಿಸಿದ್ದರು.

"

ಈ ಘೋಷಣೆ ಮಾಡಿದ ಮೂರೇ ವರ್ಷಕ್ಕೆ ಯಶವಂತ್ ಸಿನ್ಹಾ ಇದೀಗ ತೃಣಮೂಲ ಕಾಂಗ್ರೆಸ್ ಸೇರಿಕೊಂಡು ರಾಜಕೀಯ ಸನ್ಯಾಸತ್ವದಿಂದ ಹೊರಬಂದಿದ್ದಾರೆ. ರಾಜಕೀಯ ನಿವೃತ್ತಿ ಘೋಷಣೆ ಮಾಡಿದವರು ಹೀಗೆ ಮತ್ತೆ ರಾಜಕೀಯ ಪ್ರವೇಶಿಸುತ್ತಿರುವುದು ಇದು ಮೊದಲೇನಲ್ಲ. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ. ಇದಕ್ಕೆ ಯಶವಂತ್ ಸಿನ್ಹಾ ಸೇರಿದಂತೆ ಹಲವರು ಊದಾಹರಣೆಗಳಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ನೇಪಾಳ ಜೆನ್‌-ಝೀ ದಂಗೆ: ₹8.5 ಸಾವಿರ ಕೋಟಿ ನಷ್ಟ
ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು