ಲವ್ ಫೈಲೂರ್ ಅಂತ ವ್ಯಕ್ತಿ ಆತ್ಮಹತ್ಯೆ ಮಾಡ್ಕೊಂಡ್ರೆ ಹೆಣ್ಣಲ್ಲ ಹೊಣೆ: ಹೈ ಕೋರ್ಟ್

By Suvarna NewsFirst Published Apr 18, 2024, 2:52 PM IST
Highlights

ಪ್ರೇಮ ವೈಫಲ್ಯದಿಂದ ಪುರುಷ ತನ್ನ ಜೀವನವನ್ನು ಕೊನೆಗೊಳಿಸಿದರೆ ಪುರುಷನ ಆತ್ಮಹತ್ಯೆಯ ಪ್ರಚೋದನೆಗೆ ಮಹಿಳೆಯನ್ನು ಹೊಣೆಗಾರ್ತಿ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. 

ಪ್ರೇಮ ವೈಫಲ್ಯದಿಂದ ಪುರುಷ ತನ್ನ ಜೀವನವನ್ನು ಕೊನೆಗೊಳಿಸಿದರೆ ಪುರುಷನ ಆತ್ಮಹತ್ಯೆಯ ಪ್ರಚೋದನೆಗೆ ಮಹಿಳೆಯನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ದುರ್ಬಲ ಮನಸ್ಥಿತಿಯ ವ್ಯಕ್ತಿ ತೆಗೆದುಕೊಂಡ ನಿರ್ಧಾರಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ದೂಷಿಸಲು ಸಾಧ್ಯವಿಲ್ಲ ಎಂದು ದೆಲ್ಲಿ ಹೈ ಕೋರ್ಟ್ ಹೇಳಿದೆ.
ಪ್ರಕರಣವೊಂದರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಎಂಬ ಆರೋಪ ಹೊತ್ತಿದ್ದ ಇಬ್ಬರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

'ಪ್ರೇಮ ವೈಫಲ್ಯದಿಂದ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡರೆ, ಪರೀಕ್ಷೆಯಲ್ಲಿ ಕಳಪೆ ಸಾಧನೆಯಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಕಕ್ಷಿದಾರನು ತನ್ನ ಪ್ರಕರಣವನ್ನು ವಜಾಗೊಳಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡರೆ, ಕ್ರಮವಾಗಿ ಮಹಿಳೆ, ಪರೀಕ್ಷಕ, ವಕೀಲರು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಹೇಳಲಾಗುವುದಿಲ್ಲ' ಎಂದು ನ್ಯಾಯಮೂರ್ತಿ ಅಮಿತ್ ಮಹಾಜನ್ ಹೇಳಿದ್ದಾರೆ.

ವರದಿಯೊಂದರ ಪ್ರಕಾರ, ನ್ಯಾಯಾಲಯದ ಆದೇಶವು 2023ರಲ್ಲಿ ಪುರುಷನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಾನೂನು ಕ್ರಮವನ್ನು ಎದುರಿಸಿದ ಇಬ್ಬರು ವ್ಯಕ್ತಿಗಳು- ಮಹಿಳೆ ಮತ್ತು ಆಕೆಯ ಸ್ನೇಹಿತನಿಗೆ ಜಾಮೀನು ಮಂಜೂರು ಮಾಡಿದೆ.


 

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ತಂದೆ ನೀಡಿದ ದೂರಿನಲ್ಲಿ, ಮಹಿಳೆ ತನ್ನ ಮಗನೊಂದಿಗೆ ಪ್ರಣಯ ಸಂಬಂಧ ಹೊಂದಿದ್ದಳು. ಆರೋಪಿಯ ಇನ್ನೊಬ್ಬ ವ್ಯಕ್ತಿ ಅವರಿಬ್ಬರಿಗೂ ಸಾಮಾನ್ಯ ಸ್ನೇಹಿತನಾಗಿದ್ದ. ನಂತರ ಮಹಿಳೆ ಮತ್ತು ಗೆಳೆಯನಾಗಿದ್ದವನು ತಾವಿಬ್ಬರೂ ದೈಹಿಕ ಸಂಬಂಧ ಹೊಂದಿದ್ದು, ಶೀಘ್ರದಲ್ಲೇ ಮದುವೆಯಾಗುವುದಾಗಿ ಹೇಳಿ ವ್ಯಕ್ತಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಿದ್ದರು. 

ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಪ್ರಕರಣದಲ್ಲಿ ಪ್ರತಿನಿಧಿಸಿದರು. ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿದ್ದು, ಅದರಲ್ಲಿ ಮೃತರು ಇಬ್ಬರು ಆರೋಪಿಗಳನ್ನು ತಮ್ಮ ಆತ್ಮಹತ್ಯೆಗೆ ಕಾರಣ ಎಂದು ಹೆಸರಿಸಿದ್ದಾರೆ.

ಮೃತರು ತಮ್ಮ ಆತ್ಮಹತ್ಯಾ ಪತ್ರದಲ್ಲಿ ಇಬ್ಬರು ವ್ಯಕ್ತಿಗಳನ್ನು ಹೆಸರಿಸಿದ್ದರೂ, ಅವರು ಮಾಡಿದ ಬೆದರಿಕೆಗಳಲ್ಲಿ ಸಾಮಾನ್ಯ ವ್ಯಕ್ತಿಯನ್ನು ಆತ್ಮಹತ್ಯೆಗೆ ದೂಡುವಷ್ಟು ಆತಂಕಕಾರಿ ಎಂದು ಪರಿಗಣಿಸಬಹುದಾದ ಏನೂ ಇಲ್ಲ ಎಂದು ಹೈಕೋರ್ಟ್ ಗಮನಿಸಿದೆ.

ಇದೆಂಥಾ ಅನುಮಾನ! ತನಿಷಾ ಕುಪ್ಪಂಡ ಫಸ್ಟ್ ಲವ್ ಸ್ಟೋರಿ ಕೇಳಿದ್ರೆ 'ಲಕ್ಷ್ಮೀ ನಿವಾಸ'ದ ಜಯಂತ್ ನೆನಪಾಗುತ್ತೆ!
 

ಪ್ರಾಥಮಿಕವಾಗಿ, ಆಪಾದಿತ ಆತ್ಮಹತ್ಯೆ ಪತ್ರವು ಅರ್ಜಿದಾರರ ಕಡೆಗೆ ಸತ್ತವರ ದುಃಖದ ಸ್ಥಿತಿಯನ್ನು ಮಾತ್ರ ವ್ಯಕ್ತಪಡಿಸಿದೆ ಎಂದು ಕೋರ್ಟ್ ಹೇಳಿದೆ. 

ವಾಟ್ಸಾಪ್ ಚಾಟ್‌ಗಳ ಸಾಕ್ಷ್ಯದ ಆಧಾರದ ಮೇಲೆ, ಮೃತರು ಸೂಕ್ಷ್ಮ ಸ್ವಭಾವದವರಾಗಿದ್ದರು ಎಂದು ನ್ಯಾಯಾಲಯವು ಪ್ರಾಥಮಿಕವಾಗಿ ಗಮನಿಸಿದೆ ಮತ್ತು ಮಹಿಳೆ ತನ್ನೊಂದಿಗೆ ಮಾತನಾಡಲು ನಿರಾಕರಿಸಿದ ನಂತರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರಂತರವಾಗಿ ಬೆದರಿಕೆ ಹಾಕಿದ್ದನ್ನು ಕೂಡಾ ಮನಗಂಡಿದೆ. 

click me!