ಮಣಿಪುರ ಕಿ ಬಾತ್‌ ಏಕಿ​ಲ್ಲ?: ಮೋದಿ ಮೌನದ ಬಗ್ಗೆ ಕಾಂಗ್ರೆಸ್‌ ಕಿಡಿ

Published : Jun 19, 2023, 07:12 AM IST
ಮಣಿಪುರ ಕಿ ಬಾತ್‌ ಏಕಿ​ಲ್ಲ?: ಮೋದಿ ಮೌನದ ಬಗ್ಗೆ ಕಾಂಗ್ರೆಸ್‌ ಕಿಡಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದು ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಆದರೆ ಆದರೆ ಮಣಿ​ಪು​ರದ ಬಗ್ಗೆ ಮೌನ ಏಕೆ ತಾಳಿ​ದ್ದಾ​ರೆ?’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೊಂದು ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಆದರೆ ಆದರೆ ಮಣಿ​ಪು​ರದ ಬಗ್ಗೆ ಮೌನ ಏಕೆ ತಾಳಿ​ದ್ದಾ​ರೆ?’ ಎಂದು ಕಾಂಗ್ರೆಸ್‌ ಕಿಡಿಕಾರಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌,‘ಪ್ರಧಾನಿ ಅವರು 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಮಣಿಪುರದ ಸಂಘರ್ಷದ ಬಗ್ಗೆ ಮೌನ ಮುರಿಯಬೇಕು. ನೈಸರ್ಗಿಕ ವಿಕೋಪಗಳನ್ನು ತಡೆಯಲು ಯಾರಿಂದಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ. ಆದರೆ ಜನ ಸಂಘರ್ಷ ತಡೆಯಲು ಅವರಿಗೆ ಆಗುತ್ತಿಲ್ಲವೆ ? ರಕ್ಷಣಾ ಪಡೆಗಳು ಅಷ್ಟು ಶಕ್ತಿ ಹೊಂದಿಲ್ಲವೇ? ಸಂಘರ್ಷ ಶುರುವಾಗಿ ಇಷ್ಟು ದಿನವಾದರೂ ಮೋದಿ ಇನ್ನೂ ಏಕೆ ಶಾಂತಿ ಸಂದೇಶ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.

ಈ ಮಧ್ಯೆ ಆರ್‌ಎಸ್‌ಎಸ್‌ ಕೂಡ ಸರ್ಕಾರಕ್ಕೆ ಶಾಂತಿ ಕಾಪಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌​) ಮಣಿಪುರದಲ್ಲಿ ಜನಾಂಗೀ​ಯ ಹಿಂಸಾಚಾರವನ್ನು ಖಂಡಿಸಿದ್ದು ಮತ್ತು ಸ್ಥಳೀಯ ಆಡಳಿತ, ಪೊಲೀ​ಸ​ರು, ಭದ್ರತಾ ಪಡೆಗಳು ಮತ್ತು ಕೇಂದ್ರೀಯ ಏಜೆನ್ಸಿಗಳು ಸೇರಿದಂತೆ ಸರ್ಕಾರವು ತಕ್ಷ​ಣವೇ ಶಾಂತಿಯ ಮರುಸ್ಥಾಪ​ನೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

ಮಣಿಪುರ ಹಿಂಸಾಚಾರ: ಕೇಂದ್ರ ಸಚಿವರ ಮನೆಗೆ ಬೆಂಕಿ; 1200 ಜನರ ಗುಂಪಿನಿಂದ ದುಷ್ಕೃತ್ಯ

ಆರ್‌ಎಸ್‌ಎಸ್‌ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಭಾನು​ವಾರ ಸಂಜೆ ಈ ಹೇಳಿಕೆ ನೀಡಿ, ‘ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯ ಕ್ರಮಗಳ ಜೊತೆಗೆ ಹಿಂಸೆಯಿಂದ ನಿರಾಶ್ರಿತರಾದವರಿಗೆ ಪರಿಹಾರ ಸಾಮಗ್ರಿಗಳ ತಡೆರಹಿತ ಪೂರೈಕೆ ಆಗು​ವಂತೆ ಸರ್ಕಾರ ನೋಡಿ​ಕೊ​ಳ್ಳ​ಬೇ​ಕು’ ಎಂದು ಆಗ್ರ​ಹಿ​ಸಿ​ದ್ದಾ​ರೆ. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದ್ವೇಷ ಮತ್ತು ಹಿಂಸೆಗೆ ಸ್ಥಳವಿಲ್ಲ. ಪ್ರಸ್ತುತ ಬಿಕ್ಕಟ್ಟಿಗೆ ಕಾರಣವಾದ ವಿಶ್ವಾಸ ಕೊರತೆಯನ್ನು ಎರಡೂ ಕಡೆಯವರು ನಿವಾರಿಸಬೇಕು ಮತ್ತು ಶಾಂತಿ (Peace) ಮರುಸ್ಥಾಪಿಸಲು ಮಾತು​ಕ​ತೆ ಪ್ರಾರಂಭಿಸಬೇಕು. ಹಿಂಸೆ​ಯಿಂದ ನಿರಾ​ಶ್ರಿ​ತ​ರಾದ 50 ಸಾವಿರ ಜನರ ನೆರ​ವಿಗೆ ಆರೆ​ಸ್ಸೆಸ್‌ ನಿಲ್ಲ​ಲಿ​ದೆ ಎಂದು ಒತ್ತಿ ಹೇಳಿ​ದ್ದಾ​ರೆ.

ಕಳೆದ 45 ದಿನಗಳ ನಿರಂತರ ಹಿಂಸೆ ಅತ್ಯಂತ ಕಳ​ವ​ಳ​ಕಾ​ರಿ. ವಿಷಾ​ದ​ನೀ​ಯ. ಸ್ಥಿತಿ ತಿಳಿ​ಗೊ​ಳಿ​ಸಲು ಮತ್ತು ಜನರ ಜೀವ ಉಳಿ​ಸ​ಲು ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದು ಮಣಿಪುರದ ನಾಗರಿಕ ಸಮಾಜ, ರಾಜಕೀಯ ಗುಂಪುಗಳು ಮತ್ತು ಸಾರ್ವಜನಿಕರಿಗೆ ಆರ್‌ಎಸ್‌ಎಸ್‌ ಮನವಿ ಮಾಡುತ್ತದೆ ಎಂದಿ​ದ್ದಾ​ರೆ.  ಮಣಿಪುರದಲ್ಲಿ ಒಂದೂವ​ರೆ ತಿಂಗಳ ಹಿಂದೆ ಭುಗಿಲೆದ್ದ ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸೆ​ಯ​ಲ್ಲಿ (Racial violence) 110ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 11 ಜಿಲ್ಲೆಗಳಲ್ಲಿ ಕರ್ಫ್ಯೂ (curfew) ವಿಧಿಸಲಾ​ಗಿ​ದೆ ಮತ್ತು ಇಂಟರ್ನೆಟ್‌ ಸೇವೆ (Internet Service)ಸ್ತಬ್ಧ​ಗೊಂಡಿ​ದೆ.

ಮಣಿಪುರ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!