11 ವರ್ಷ ಬಾಲಕಿ ಮೇಲಿನ ಗ್ಯಾ0ಗ್ ರೇP ಪ್ರಮುಖ ಆರೋಪಿ ಎನ್‌ಕೌಂಟರ್, ಸ್ಥಳ ಮಹಜರು ವೇಳೆ ಕತೆ ಕ್ಲೋಸ್

Published : Jul 08, 2026, 11:27 AM IST
 Baruipur case

ಸಾರಾಂಶ

ಪಶ್ಚಿಮ ಬಂಗಾಳ ಹಾಗೂ ದೇಶದ ಜನತೆಯನ್ನು ಬೆಚ್ಚಿ ಬೀಳಿಸಿದ ಸಾಮೂಹಿಕ ಅತ್ಯಾ** ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.ಮತ್ತಿಬ್ಬರು ಆರೋಪಿಗಳ ಆತಂಕ ಹೆಚ್ಚಾಗಿದೆ. 

ಕೋಲ್ಕತಾ (ಜು.08) ಪಶ್ಚಿಮ ಬಂಗಾಳದ ಬರೈಪುರದಲ್ಲಿ ನಡೆದ ಗ್ಯಾ0ಗ್ ರೇP ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಗಾಳ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಘಟನೆ ನಡೆದ ಬೆನ್ನಲ್ಲೇ ತಪ್ಪತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಎನ್‌ಕೌಂಟರ್ ನಡೆದಿದೆ. ಪ್ರಕರಣ ಪ್ರಮುಖ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋದ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ಗಿಫ್ಟ್ ತರಲು ಹೋದ ಬಾಲಕಿ ಮರಳಿ ಬರಲಿಲ್ಲ

ಬರೈಪುರದ 11 ವರ್ಷದ ಬಾಲಕಿ ತನ್ನ ಗೆಳತಿಗೆ ಹುಟ್ಟು ಹಬ್ಬದ ಗಿಫ್ಟ್ ಖರೀದಿಸಲು ಮನೆಯಿಂದ ಕೆಲವೇ ದೂರದಲ್ಲಿರುವ ಪಟ್ಟಣಕ್ಕೆ ತೆರಳಿದ್ದಾಳೆ. ಎಷ್ಟು ಹೊತ್ತಾದರು ಬಾಲಕಿ ಮರಳಿ ಬಂದಿಲ್ಲ. ಪರಿಣಾಮ ಪೋಷಕರು, ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ಪೋಷಕರು ಹುಡುಕಾಟ ತೀವ್ರಗೊಳಿಸಿದ್ದಾರೆ. ಜುಲೈ 4 ರಂದು ಬಾಲಕಿ ನಾಪತ್ತೆಯಾಗಿದ್ದಳು. ಪಟ್ಟಣಕ್ಕೆ ಹೋದ ಬಾಲಕಿಯನ್ನು ಮೂವರು ಆರೋಪಿಗಳಾದ ಪ್ರಭಾಸ್ ಮೊಂಡಾಲ್, ಆನಂದ್ ಸರ್ದಾರ್ ಹಾಗೂ ದೀಬಾಕರ್ ಸರ್ದಾರ್ ಅಪಹರಿಸಿ ಅತ್ಯಾ** ಎಸಗಿದ್ದರು. ಬಳಿಕ ಆಕೆಯನ್ನು ಜೀವಂತವಾಗಿ ಚೀಲದಲ್ಲಿ ಕಟ್ಟಿ ಕೆರೆಗೆ ಎಸೆದಿದ್ದರು.

ಕೆರೆಯಲ್ಲಿ ಬಾಲಕಿ ಶವ ಪತ್ತೆ

ಜುಲೈ 5 ರಂದು ತೀವ್ರ ಹುಡುಕಾಟದ ವೇಳೆ ಕೆರೆಯಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಹುಡುಕಾಟದಲ್ಲಿ ಬಾಲಕಿ ಮೃತದೇಹ ಸಿಕ್ಕ ಬಳಿಕ ಅನುಮಾನದಿಂದ ಆಕ್ರೋಶಿತರ ಗುಂಪು ಇಂದ್ರನಾಥ ತಂತಿ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ತಂತಿ ಮೃತಪಟ್ಟಿದ್ದ. ಆದರೆ ಇಂದ್ರನಾಥ್ ತಂತಿ ಅಮಾಯಕನಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪ್ರಮುಖ ಮೂವರು ಆರೋಪಿಗಳಾದ ಪ್ರಭಾಸ್ ಮೊಂಡಾಲ್, ಆನಂದ್ ಸರ್ದಾರ್ ಹಾಗೂ ದೀಬಾಕರ್ ಸರ್ದಾರ್ ಅರೆಸ್ಟ್ ಆಗಿದ್ದರು. ಈ ಪೈಕಿ ಪ್ರಭಾಸ್ ಮೊಂಡಾಲ್‌ನ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ಸ್ಥಳ ಮಹರು ವೇಳೆ ಪ್ರಭಾಸ್ ಮೊಂಡಾಲ್ ಪೊಲೀಸರ ರಿವಾಲ್ವರ್ ಕಿತ್ತು ಗುಂಡು ಹಾರಿಸುತ್ತಾ ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಪೊಲೀಸರ ಪ್ರತಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಭಾಸ್ ಮೊಂಡಾಲ್‌ನ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೊತ್ತಿಗೆ ಆರೋಪಿ ಪ್ರಭಾಸ್ ಮೊಂಡಾಲ್ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Amarnath Yatra: ಅಮರನಾಥ ಯಾತ್ರಿಗಳ ರಕ್ಷಣೆಗೆ CRPF ಭದ್ರಕೋಟೆ, ದಾರಿಯುದ್ಧಕ್ಕೂ ಯೋಧರು! ಭಕ್ತರಿಗಾಗಿ 24/7 ಆರೋಗ್ಯ ಸೇವೆ
ರಾಜಸ್ಥಾನ ಸುತ್ತಾಡಲು ಆಸೆ ಇರುವ ಕರ್ನಾಟಕದ ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ಬೆಂಗಳೂರಿನಿಂದ ಉದಯಪುರಕ್ಕೆ ನೇರ ವಿಮಾನ