ಉತ್ತರ ಪ್ರದೇಶದಲ್ಲಿ ಹಗಲು ಲಾಕ್‌ಡೌನ್‌ ರದ್ದು!

Published : May 31, 2021, 09:43 AM ISTUpdated : May 31, 2021, 10:23 AM IST
ಉತ್ತರ ಪ್ರದೇಶದಲ್ಲಿ ಹಗಲು ಲಾಕ್‌ಡೌನ್‌ ರದ್ದು!

ಸಾರಾಂಶ

* ಸೋಂಕು ನಿಯಂತ್ರ​ಣ​ಕ್ಕಾಗಿ ರಾಜ್ಯಾ​ದ್ಯಂತ ಹೇರ​ಲಾ​ಗಿ​ರುವ ಹಗಲು ಲಾಕ್‌​ಡೌನ್‌ ನಿರ್ಬಂಧ​ ಸಡಿಲ * 600ಕ್ಕಿಂತ ಕಡಿಮೆ ಸಕ್ರಿಯ ಕೊರೋನಾ ಪ್ರಕರಣಗಳು ಇರುವ ಜಿಲ್ಲೆಗಳಿಗೆ ಈ ನಿರ್ಬಂಧ ಸಡಿಲಿಕೆ * ಈ ಪಟ್ಟಿಯಲ್ಲಿ ಲಖನೌ, ನೋಯ್ಡಾ, ಗಾಜಿಯಾಬಾದ್‌ ಸೇರಿದಂತೆ 20 ಜಿಲ್ಲೆಗಳು

ಲಖ​ನೌ(ಮೇ.31): ಸೋಂಕು ನಿಯಂತ್ರ​ಣ​ಕ್ಕಾಗಿ ರಾಜ್ಯಾ​ದ್ಯಂತ ಹೇರ​ಲಾ​ಗಿ​ರುವ ಹಗಲು ಲಾಕ್‌​ಡೌನ್‌ ನಿರ್ಬಂಧ​ವನ್ನು ಜೂ.1ರಿಂದಲೇ ಸಡಿ​ಲ​ಗೊ​ಳಿ​ಸ​ಲಾ​ಗು​ತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿ​ಸಿದೆ. 600ಕ್ಕಿಂತ ಕಡಿಮೆ ಸಕ್ರಿಯ ಕೊರೋನಾ ಪ್ರಕರಣಗಳು ಇರುವ ಜಿಲ್ಲೆಗಳಿಗೆ ಈ ನಿರ್ಬಂಧ ಸಡಲಿಕೆ ಅನ್ವಯವಾಗಲಿದೆ.

ಈ ಪಟ್ಟಿಯಲ್ಲಿ ಲಖನೌ, ನೋಯ್ಡಾ, ಗಾಜಿಯಾಬಾದ್‌ ಸೇರಿದಂತೆ 20 ಜಿಲ್ಲೆಗಳಿದ್ದು, ಇಲ್ಲಿ ಸೋಮ​ವಾ​ರ​ದಿಂದ ಶುಕ್ರ​ವಾ​ರ​ದ​ವ​ರೆಗೆ ಬೆಳಗ್ಗೆ 7 ಗಂಟೆ​ಯಿಂದ ರಾತ್ರಿ 7 ಗಂಟೆ​ವ​ರೆಗೆ ಮಾರು​ಕಟ್ಟೆಮತ್ತು ಅಂಗ​ಡಿ-ಮುಂಗ​ಟ್ಟು​ಗ​ಳನ್ನು ತೆರೆ​ಯಲು ಅವ​ಕಾಶ ಕಲ್ಪಿ​ಸ​ಲಾ​ಗು​ತ್ತದೆ ಎಂದು ರಾಜ್ಯದ ಮುಖ್ಯ ಕಾರ್ಯ​ದರ್ಶಿ ತಿಳಿ​ಸಿ​ದ್ದಾರೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಆದರೆ, ರಾಜ್ಯಾ​ದ್ಯಂತ ಜೂ.1ರ ಬಳಿ​ಕವೂ ರಾತ್ರಿ ಕರ್ಪ್ಯೂ ಮತ್ತು ವಾರಾಂತ್ಯದ (ಶನಿವಾರ-ಭಾನುವಾರ) ಕರ್ಫ್ಯೂ ಮುಂದು​ವ​ರಿ​ಯ​ಲಿದೆ.

ಮಹಾರಾಷ್ಟ್ರ: 15 ದಿನ ಲಾಕ್‌ಡೌನ್‌ ವಿಸ್ತರಣೆ

ಹರ್ಯಾಣ, ಒಡಿಶಾ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳು ಲಾಕ್‌ಡೌನ್‌ ವಿಸ್ತರಿಸಿವೆ. ಭಾನುವಾರ ಕೇವಲ 18 ಸಾವಿರ ಪ್ರಕರಣ ಮಹಾರಾಷ್ಟ್ರದಲ್ಲಿ ದಾಖಲಾಗಿದ್ದು, ಇದು ಎರಡೂವರೆ ತಿಂಗಳ ಕನಿಷ್ಠ. ಆದರೂ ರಾಜ್ಯ 15 ದಿನಗಳ ಕಾಲ ಲಾಕ್‌ಡೌನ್‌ ವಿಸ್ತರಣೆ ಮಾಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು