
ಉತ್ತರ ಪ್ರದೇಶ(ನ.24): ದೇಶದಲ್ಲಿ ಲವ್ ಜಿಹಾದ್ ಕುರಿತು ಭಾರಿ ಕೋಲಾಹಲವೇ ಸೃಷ್ಟಿಯಾಗುತ್ತಿದೆ. ಕೆಲ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಪ್ರಬಲ ಕಾನೂನು ಜಾರಿಗೊಳಿಸುವ ಪ್ರಯತ್ನದಲ್ಲಿದೆ. ಇದರ ಬೆನ್ನಲ್ಲೇ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮದುವೆಗಾಗಿ ಮತಾಂತರ ಒಪ್ಪಲು ಸಾಧ್ಯವಿಲ್ಲ; ಮಹತ್ವದ ಆದೇಶ ನೀಡಿದ ಹೈಕೋರ್ಟ್!.
ಒಂದು ಪ್ರಕರಣದ ಕುರಿತು ಅಲಹಾಬಾದ್ ಹೈಕೋರ್ಟ್ ಇದೀಗ ಎರಡನೇ ತೀರ್ಪುು ನೀಡಿದೆ. ನವೆಂಬರ್ 11 ರಂದು ಅಲಹಬಾದಾ ಹೈಕೋರ್ಟ್ 14 ಪುಟಗಳ ಆದೇಶವನ್ನು ಮತ್ತೊಮ್ಮೆ ಅವಲೋಕನ ಮಾಡಿ ಹೊಸ ತೀರ್ಪುು ನೀಡಿದೆ. ಕೋರ್ಟ್ಗೆ ಹಿಂದೂ ಅಥವಾ ಮುಸ್ಲಿಂ ಎಂದಿಲ್ಲ, ಅನ್ಯಧರ್ಮಿಯರು ಅವರವರ ಬಾಳ ಸಂಗಾತಿ ಜೊತೆ ಬಾಳಲು ಕಾನೂನು ಅವಕಾಶ ನೀಡುತ್ತದೆ ಎಂದು ಕೋರ್ಟ್ ತೀರ್ಪು ನೀಡಿದೆ.
ಹತ್ರಾಸ್ ಪ್ರಕರಣ: ಸುಪ್ರೀಂ ಮಹತ್ವದ ಆದೇಶ!..
ಸಲಾಮತ್ ಅನ್ಸಾರಿ ಹಾಗೂ ಪ್ರಿಯಾಂಕ ಖರವಾರ್ ಪ್ರಕರಣ ಕುರಿತು ಅಲಹಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ ಹಾಗೂ ಮುಸ್ಲಿಂ ಕುಟುಂಬದ ಇವರಿಬ್ಬರು 2019ರಲ್ಲಿ ವಿವಾಹವಾಗಿದ್ದರು. ಮದುವೆ ಬಳಿಕ ಸಲಾಮತ್ ಅನ್ಸಾರಿ ತನ್ನ ಪತ್ನಿ ಪ್ರಿಯಾಂಕ ಖರವಾರ್ ಹೆಸರನ್ನು ಆಲಿಯಾ ಎಂದು ಬದಲಿಸಿದ್ದರು.
ಇದರ ವಿರುದ್ಧ ಪ್ರಿಯಾಂಕ ಖರವಾರ ತಂದೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಈ ಕುರಿತು ನವೆಂಬರ್ 11 ರಂದು ಅಲಹಾಬಾದ್ ಹೈಕೋರ್ಟ್, ಮದುವೆಗಾಗಿ ಮತಾಂತರ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿತ್ತು. ಇಷ್ಟೇ ಅಲ್ಲ ಈ ಪ್ರಕರಣದ ವಿಚಾರಣೆಯನ್ನ ಮುಂದೂಡಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್, ಸಲಾಮತ್ ಅನ್ಸಾರಿ ಹಾಗೂ ಪ್ರಿಯಾಂಕ ವಯಸ್ಕರಾಗಿದ್ದಾರೆ. ಹೀಗಾಗಿ ಇವರ ಕುಟುಂಬದ ಮಧ್ಯೆ ಕೋರ್ಟ್ ಪ್ರವೇಶಿಸುವುದಿಲ್ಲ. ಕಾನೂನು ಪ್ರಕರಾ ಅವರಿಗೆ ಎಲ್ಲಾ ಭದ್ರತೆ ನೀಡಲಾಗುವುದು ಎಂದಿದೆ.
ಸಲಾಮತ್ ಅನ್ಸಾರಿ ಹಾಗೂ ಪ್ರಿಯಾಂಕ ಖರವಾರ ಅವರನ್ನು ಕೋರ್ಟ್ ಹಿಂದೂ ಮುಸ್ಲೀಂ ಎಂದುು ನೋಡುವುದಿಲ್ಲ. ಅವರಿಗೆ ಶಾಂತಿಯುತವಾಗಿ ಬಾಳುವ ಸ್ವಾತಂತ್ರ್ಯವಿದೆ. ಈ ಸ್ವಾತಂತ್ರ್ಯಕ್ಕೆ ಯಾರು ಅಡ್ಡಿಪಡಿಸುವಂತಿಲ್ಲ, ಇದಕ್ಕೆ ಸರ್ಕಾರ ಕೂಡ ಹೊರತಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ