ಅಗ್ನಿಪಥ್‌ ಹಿಂಸೆಗೆ 500 ರು. ಕೊಟ್ಟು ಜನರ ಬಳಕೆ: ವಿ.ಕೆ.ಸಿಂಗ್‌

Published : Jun 19, 2022, 02:00 AM IST
ಅಗ್ನಿಪಥ್‌ ಹಿಂಸೆಗೆ 500 ರು. ಕೊಟ್ಟು ಜನರ ಬಳಕೆ: ವಿ.ಕೆ.ಸಿಂಗ್‌

ಸಾರಾಂಶ

*  ಸಾರ್ವಜನಿಕ ಆಸ್ತಿ ನಾಶಕ್ಕೆ ಜನರಿಗೆ ದಿನಕ್ಕೆ 500 ರು. ನೀಡಿ ನೇಮಕ ಮಾಡಿಕೊಳ್ಳಲಾಗಿದೆ *  ಈಗ ನಡೆಯುತ್ತಿರುವುದೆಲ್ಲಾ ಟೂಲ್‌ಕಿಟ್‌ ಆಧರಿತವಾಗಿದೆ *  ಎಲ್ಲಾ ರಾಜ್ಯಗಳಲ್ಲೂ ನೌಕರಿಗೆ ಸಂಬಂಧಿಸಿದಂತೆ ಮಾಜಿ ಯೋಧರಿಗೆ ಎಂಬ ಕೋಟಾ ಇರುತ್ತದೆ

ನವದೆಹಲಿ(ಜೂ.19): ‘ಅಗ್ನಿಪಥ್‌ ವಿರೋಧಿ ಪ್ರತಿಭಟನೆ ವೇಲೆ ಸಾರ್ವಜನಿಕ ಆಸ್ತಿಗಳಿಗೆ ಬೆಂಕಿ ಹಚ್ಚಲು, ವಿಪಕ್ಷಗಳು ಕೆಲವು ಜನರನ್ನು ನೇಮಕ ಮಾಡಿವೆ’ ಎಂದು ನಿವೃತ್ತ ಸೇನಾ ಮುಖ್ಯಸ್ಥ, ಕೇಂದ್ರ ಸಚಿವ ವಿ.ಕೆ.ಸಿಂಗ್‌ ಶನಿವಾರ ಕಿಡಿಕಾರಿದ್ದಾರೆ.

‘ಸಾರ್ವಜನಿಕ ಆಸ್ತಿ ನಾಶಕ್ಕೆ ಈ ಜನರಿಗೆ ದಿನಕ್ಕೆ 500 ರು. ನೀಡಿ ನೇಮಕ ಮಾಡಿಕೊಳ್ಳಲಾಗಿದೆ. ಈಗ ನಡೆಯುತ್ತಿರುವುದೆಲ್ಲಾ ಟೂಲ್‌ಕಿಟ್‌ ಆಧರಿತವಾಗಿದೆ’ ಎಂದು ಅವರು ಆರೋಪಿಸಿದ್ದಾರೆ. ಈ ಯೋಜನೆಯ ಮೂಲಕ ಸೇನೆ, ವಾಯುಪಡೆಗೆ, ನೌಕಾದಳಕ್ಕೆ ನೇಮಕವಾಗುವ ಅಗ್ನಿವೀರರಿಗೆ ಇತರ ಸೈನಿಕರಂತೆಯೇ ತರಬೇತಿ ನೀಡಲಾಗುವುದು. ಆದರೆ ಈ ಯೋಜನೆಯ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ವಿನಾಕಾರಣ ತಪ್ಪು ಭಾವನೆಯನ್ನು ಹರಡಲಾಗುತ್ತಿದೆ ಎಂದು ಹೇಳಿದರು.

ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!

ಎಲ್ಲಾ ರಾಜ್ಯಗಳಲ್ಲೂ ನೌಕರಿಗೆ ಸಂಬಂಧಿಸಿದಂತೆ ಮಾಜಿ ಯೋಧರಿಗೆ ಎಂಬ ಕೋಟಾ ಇರುತ್ತದೆ. ಈ ಪ್ರಮಾಣವನ್ನು ಹೆಚ್ಚು ಮಾಡಲು ಎಲ್ಲಾ ರಾಜ್ಯಗಳಿಗೂ ಮನವಿ ಮಾಡಲಾಗಿದೆ. ಹಾಗಾಗಿ ಈ ಯೋಜನೆಯ ಮೂಲಕ ಸೈನ್ಯಕ್ಕೆ ಸೇರುವವರು ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು