
ಅಮರಾವತಿ(ನ.27): ಆಂಧ್ರಪ್ರದೇಶದಲ್ಲಿ ಶಾಲಾ ಮಕ್ಕಳ ನಡುವೆ ಪೆನ್ಸಿಲ್ ವಿವಾದದ ವಿಶಿಷ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೆಲವು ಮಕ್ಕಳು ಇಲ್ಲಿನ ಪೊಲೀಸ್ ಠಾಣೆಗೆ ಬಂದಿದ್ದರು. ಪೆನ್ಸಿಲ್ ಹಿಂತಿರುಗಿಸದೇ ತನ್ನ ಸಂಗಾತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಮಗು ಒತ್ತಾಯಿಸಿದೆ. ಪೊಲೀಸ್ ಠಾಣೆಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿ ಮಕ್ಕಳ ಜಗಳವನ್ನು ಬಗೆಹರಿಸಿದ್ದಾರೆ. ಆಂಧ್ರಪ್ರದೇಶ ಪೊಲೀಸರು ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ, ಪೆನ್ಸಿಲ್ ಅನ್ನು ಮರಳಿ ಪಡೆಯಲು ಮಗುವು ಪೊಲೀಸ್ ಠಾಣೆ ಮೆಟ್ಟಿಲೇರಿರುವುದಿ ಕಾಣಬಹುದು. ಈ ಘಟನೆ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಪೊಲೀಸ್ ಠಾಣೆಗೆ ಮಕ್ಕಳ ತಂಡವೊಂದು ಆಗಮಿಸಿತ್ತು.
ಪ್ರಕರಣ ದಾಖಲಿಸುವಂತೆ ಮಗುವಿನ ಆಗ್ರಹ
ಪೆನ್ಸಿಲ್ ತೆಗೆದುಕೊಂಡು ಹಿಂತಿರುಗಿಸದ ಕಾರಣ ತನ್ನೊಂದಿಗೆ ಓದುತ್ತಿರುವ ಮತ್ತೊಂದು ಮಗುವಿನ ವಿರುದ್ಧ ಮಗು ದೂರು ನೀಡಿದೆ. ಆರೋಪ ಮಾಡಿದ ಮಗು ಕೂಡ ಪೊಲೀಸ್ ಠಾಣೆಗೆ ಬಂದಿತ್ತು. ಪೊಲೀಸ್ ಅಧಿಕಾರಿಯೂ ಆ ಮಗುವಿನೊಂದಿಗೆ ಮಾತನಾಡಿದರು. ಈ ವೇಳೆ ಅಧಿಕಾರಿ ಆರೋಪ ಮಾಡಿದ ಮಗುವನ್ನು ಈ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳಲು ಬಯಸುತ್ತೀರಿ ಎಂದು ಪ್ರಶ್ನಿಸಿದರು. ಈ ಕುರಿತು ಮಗು ಪೆನ್ಸಿಲ್ ತೆಗೆದುಕೊಂಡು ಹೋದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬೇಡಿಕೆ ಇಟ್ಟಿದ್ದಾನೆ.
ಮಕ್ಕಳಿಬ್ಬರೂ ಪೊಲೀಸರ ಮುಂದೆ ತಮ್ಮ ವಾದ ಇಡುತ್ತಿದ್ದರೆ, ಹಿಂಬದಿಯಲ್ಲಿ ನಿಂತಿದ್ದ ಅವರ ಸಹಚರರು ನಗುತ್ತಿದ್ದರು. ಮಕ್ಕಳಿಬ್ಬರ ವಾದವನ್ನು ಆಲಿಸಿದ ಪೊಲೀಸ್ ಅಧಿಕಾರಿ ಇಬ್ಬರನ್ನು ಸಮಾಧಾನಗೊಳಿಸಲು ಯತ್ನಿಸಿದರು. ಆರೋಪ ಮಾಡುವ ಮಗು ಅಷ್ಟು ಸುಲಭವಾಗಿ ವಿಷಯವನ್ನು ಬಗೆಹರಿಸಲು ಸಿದ್ಧವಿರಲಿಲ್ಲ. ಆರೋಪಿಯ ತಾಯಿಯನ್ನಾದರೂ ಕರೆಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಆದರೆ, ಸಾಕಷ್ಟು ಪ್ರಯತ್ನದ ಬಳಿಕ ಇಬ್ಬರು ಮಕ್ಕಳನ್ನು ರಾಜಿ ಮಾಡುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಮಕ್ಕಳಿಬ್ಬರೂ ಪರಸ್ಪರ ಹಸ್ತಲಾಘವ ಮಾಡಿ ನಗುನಗುತ್ತಾ ಖುಷಿಯಿಂದ ಹಿಂತಿರುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ