Covid Vaccine ಹಾಕಿಸಲು ಅಪ್ಪನನ್ನು ಆರು ಗಂಟೆ ಬೆನ್ನ ಮೇಲೆ ಹೊತ್ತು ಸಾಗಿದ ಮಗ!

Published : Jan 16, 2022, 02:16 PM IST
Covid Vaccine ಹಾಕಿಸಲು ಅಪ್ಪನನ್ನು ಆರು ಗಂಟೆ ಬೆನ್ನ ಮೇಲೆ ಹೊತ್ತು ಸಾಗಿದ ಮಗ!

ಸಾರಾಂಶ

* ಕೊರೋನಾ ನಿಯಂತ್ರಿಸಲು ಲಸಿಕಾ ಅಭಿಯಾನ * ಕೋವಿಡ್ ಲಸಿಕೆ ಹಾಕಿಸಲು ಅಪ್ಪನನ್ನು ಆರು ಗಂಟೆ ಬೆನ್ನ ಮೇಲೆ ಹೊತ್ತು ಸಾಗಿದ ಮಗ!

ಬ್ರೆಜಿಲ್(ಜ.16): ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದರ ಹಿಂದಿನ ಕಥೆ ತಿಳಿದ ಜನರು ಭಾವುಕರಾಗುತ್ತಿದ್ದಾರೆ. ಅನೇಕ ಭಾರತೀಯರು ಈ ಯುವಕನನ್ನು ಆಧುನಿಕ ಕಾಲದ 'ಶ್ರವಣ ಕುಮಾರ' ಎಂದು ಕರೆಯುತ್ತಿದ್ದಾರೆ. ವಾಸ್ತವವಾಗಿ, ಈ ಘನಟೆ ನಡೆದಿದ್ದು ಬ್ರೆಜಿಲ್‌ನಲ್ಲಿರುವ ಅಮೆಜಾನ್‌ನಲ್ಲಿ. ಇಲ್ಲಿ ಒಬ್ಬ ಮಗ ಕಾಡಿನಲ್ಲಿ ಹಲವಾರು ಗಂಟೆಗಳ ಕಾಲ ತನ್ನ ವಯಸ್ಸಾದ ತಂದೆಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಸಾಗಿ ಕೊರೋನಾ ಲಸಿಕೆ ಹಾಕಿಸಿದ್ದಾನೆ. ಈ ಫೋಟೋವನ್ನು ಎರಿಕ್ ಜೆನ್ನಿಂಗ್ಸ್ ಸೈಮ್ಸ್ ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ.

ತಂದೆ ಮಗನ ಪ್ರೀತಿ, ಬಾಂಧವ್ಯ

ಎರಿಕ್ ವೃತ್ತಿಯಲ್ಲಿ ವೈದ್ಯ. ಈ ಅದ್ಭುತ ಕ್ಷಣವನ್ನು ಅವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅವರ ಪ್ರಕಾರ, 'ಟಾವಿ ತನ್ನ ತಂದೆ ವಹುವನ್ನು ಬೆನ್ನಿನ ಮೇಲೆ 6 ಗಂಟೆಗಳ ಕಾಲ ಹೊತ್ತುಕೊಂಡು ಕಾಡು ದಾರಿಯಲ್ಲಿ ನಡೆದುಕೊಂಡು ಬಂದಿದ್ದಾನೆ. ಮತ್ತು ಹೌದು, ಲಸಿಕೆ ಪಡೆದ ನಂತರ, ಅವನು ಮತ್ತೆ ತನ್ನ ತಂದೆಯನ್ನು ತನ್ನ ಬೆನ್ನಿನ ಮೇಲೆ ಎತ್ತಿಕೊಂಡು 6 ಗಂಟೆಗಳ ಕಾಲ ನಡೆದು ಮನೆ ತಲುಪಿದ್ದಾನೆ.

ತಂದೆಯನ್ನು ಬೆನ್ನ ಮೇಲೆ ಹೊತ್ತುಕೊಂಡಿದ್ದೇಕೆ?

ಡಾ. ಎರಿಕ್ ಬಿಬಿಸಿಗೆ ಈ ಬಗ್ಗೆ ಹೇಳಿಕೆ ಕೊಟ್ಟಿದ್ದು, ಯುವಕನ 67 ವರ್ಷ ವಯಸ್ಸಿನ ತಂದೆಗೆ ದೃಷ್ಟಿದೋಷವಿತ್ತು. ಇದಲ್ಲದೇ ಮೂತ್ರದ (ಮೂತ್ರ) ಸಮಸ್ಯೆಯಿಂದ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, 24 ವರ್ಷದ ಮಗ ತನ್ನ ಬೆನ್ನಿನ ಮೇಲೆ ಅಪ್ಪನನ್ನು ಹೊತ್ತುಕೊಂಡು ಲಸಿಕೆ ಹಾಕುವ ಸ್ಥಳಕ್ಕೆ ಕರೆತಂದನು. ಎರಿಕ್ ಅಂದಾಜಿಸುವಂತೆ ತಾವಿ ತನ್ನ ತಂದೆಯನ್ನು ಬೆನ್ನಿನ ಮೇಲೆ ಸುಮಾರು 5-6 ಗಂಟೆಗಳ ಕಾಲ ಕಾಡಿನಲ್ಲಿ ಪ್ರಯಾಣಿಸಿದನು. ಅವರಿಬ್ಬರ ನಡುವಿನ ಪ್ರೀತಿ ಎಷ್ಟಿದೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ!

ವರದಿಯ ಪ್ರಕಾರ, ಈ ಚಿತ್ರವನ್ನು ಜನವರಿ 2021 ರಲ್ಲಿ ಬ್ರೆಜಿಲ್‌ನಲ್ಲಿ ಕೋವಿಡ್ -19 ಲಸಿಕೆ ಅಭಿಯಾನದ ಪ್ರಾರಂಭದಲ್ಲಿ ತೆಗೆದುಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗದಿಂದ ಹೆಚ್ಚು ಪ್ರಭಾವಿತವಾಗಿರುವ ವಿಶ್ವದ ದೇಶಗಳಲ್ಲಿ ಬ್ರೆಜಿಲ್ ಕೂಡ ಒಂದು ಎಂಬುವುದು ಉಲ್ಲೇಖನೀಯ. ಆದಾಗ್ಯೂ, ಹೊಸ ವರ್ಷದ ಆರಂಭಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುವ ಉದ್ದೇಶದಿಂದ ಡಾ.ಎರಿಕ್ ಈ ಫೋಟೋವನ್ನು ಜನವರಿ 1, 2022 ರಂದು Instagram ನಲ್ಲಿ ಹಂಚಿಕೊಂಡಿದ್ದಾರೆ.

ಯುವಕನ ತಂದೆ ಜೀವಂತವಾಗಿಲ್ಲ

ಕಳೆದ ಸೆಪ್ಟೆಂಬರ್‌ನಲ್ಲಿ ವಾಹೂ ಸಾವನ್ನಪ್ಪಿದ್ದಾರೆಂದು ವರದಿ ಹೇಳಿದೆ. ಆದಾಗ್ಯೂ, ಸಾವಿನ ಕಾರಣಗಳು ಸ್ಪಷ್ಟವಾಗಿಲ್ಲ. ಸದ್ಯಕ್ಕೆ, ತಾವಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ ಮತ್ತು ಅವರು ಇತ್ತೀಚೆಗೆ ತಮ್ಮ ಮೂರನೇ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಅದೇನಿದ್ದರೂ ಆಧುನಿಕ ಕಾಲದಲ್ಲಿ ಹೆತ್ತವರನ್ನು ಭಾರವೆಂದು ಭಾವಿಸಿ ಅನಾಥಾಶ್ರಮಕ್ಕೆ ಸೇರಿಸುವ ಅನೇಕ ಮಕ್ಕಳ ಮಧ್ಯೆ, ತಂದೆಯ ಆರೋಗ್ಯಕ್ಕಾಗಿ ಶ್ರಮಪಟ್ಟ ಈ 'ಆಧುನಿಕ ಶ್ರವಣಕುಮಾರ'ನ ಪ್ರೀತಿ ಬೆಲೆಕಟ್ಟಲಾಗದ್ದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು