ದೇಶದ 13 ರಾಜ್ಯಗಳಲ್ಲೀಗ ವಂದೇ ಭಾರತ್‌ ರೈಲು ಸೇವೆ

Published : Apr 02, 2023, 07:23 AM IST
ದೇಶದ 13 ರಾಜ್ಯಗಳಲ್ಲೀಗ ವಂದೇ ಭಾರತ್‌ ರೈಲು ಸೇವೆ

ಸಾರಾಂಶ

ಮಧ್ಯಪ್ರದೇಶದ ಕಮಲಾಪತಿ ರೈಲು ನಿಲ್ದಾಣದಲ್ಲಿ ಭೋಪಾಲ್‌-ದೆಹಲಿ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. 

ಭೋಪಾಲ್‌: ಮಧ್ಯಪ್ರದೇಶದ ಕಮಲಾಪತಿ ರೈಲು ನಿಲ್ದಾಣದಲ್ಲಿ ಭೋಪಾಲ್‌-ದೆಹಲಿ ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಇದರಿಂದಾಗಿ ದೇಶಕ್ಕೆ 11ನೇ ವಂದೇಭಾರತ್‌ ರೈಲು ಸೇರ್ಪಡೆ ಆದಂತಾಗಿದೆ. ದೇಶದ ಅತಿವೇಗದ ರೈಲು ಎಂಬ ಹೆಗ್ಗಳಿಕೆಯನ್ನು ‘ವಂದೇಭಾರತ್‌’ ಹೊಂದಿದ್ದು, 13 ರಾಜ್ಯಗಳಿಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಭೋಪಾಲ್‌-ದಿಲ್ಲಿ ವಂದೇಭಾರತ್‌ ರೈಲು ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ಸುಮಾರು 7 ಗಂಟೆಗಳಲ್ಲಿ 708 ಕಿ.ಮೀ ದೂರವನ್ನು ಕ್ರಮಿಸಲಿದೆ. ಈ ಮುಂಚಿನ ಹಲವು ಸಾಮಾನ್ಯ ಎಕ್ಸ್‌ಪ್ರೆಸ್‌ ರೈಲುಗಳು ಭೋಪಾಲ್‌ನಿಂದ ದಿಲ್ಲಿ ತಲುಪಲು 10 ತಾಸು ಸಮಯ ತೆಗೆದುಕೊಳ್ಳುತ್ತಿದ್ದವು.

13 ರಾಜ್ಯಕ್ಕೆ ವ್ಯಾಪ್ತಿ ವಿಸ್ತಾರ:

ದೇಶದ ಮೊದಲ ಮೊದಲ ವಂದೇಭಾರತ್‌ ರೈಲು ದಿಲ್ಲಿ-ವಾರಾಣಸಿ ನಡುವೆ ಆರಂಭವಾಗಿತ್ತು. ನಂತರ ಈವರೆಗೆ ಇನ್ನೂ 10 ರೈಲುಗಳನ್ನು ಆರಂಭಿಸಲಾಗಿದ್ದು, ದೇಶದ 13 ರಾಜ್ಯಗಳನ್ನು ವಂದೇಭಾರತ್‌ ರೈಲುಗಳು ಸಂಪರ್ಕಿಸಿದಂತಾಗಿದೆ. ವಾರಾಣಸಿ-ದಿಲ್ಲಿ, ನವದೆಹಲಿ-ಕಟ್ರಾ, ಗಾಂಧಿನಗರ-ಮುಂಬೈ, ದೆಹಲಿ-ಅಂಬ್‌ ಅಂದೂರಾ (ಹಿಮಾಚಲ), ಚೆನ್ನೈ-ಮೈಸೂರು, ನಾಗಪುರ-ಬಿಲಾಸ್‌ಪುರ, ಹೌರಾ-ನ್ಯೂಜಲಪೈಗುರಿ, ಸಿಕಂದರಾಬಾದ್‌-ವಿಶಾಖಪಟ್ಟಣಂ, ಮುಂಬೈ-ಸೊಲ್ಲಾಪುರ, ಮುಂಬೈ-ಶಿರಡಿ ಹಾಗೂ ಭೋಪಾಲ್‌-ದೆಹಲಿ ನಡುವೆ ಈಗ ವಂದೇಭಾರತ್‌ ರೈಲುಗಳು ಸಂಚರಿಸುತ್ತಿವೆ.

ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು, ಎಚ್ಚರಿಕೆ ನೀಡಿದ ಭಾರತೀಯ ರೈಲ್ವೇ!

ಇನ್ನೂ 3 ರೈಲು ಶೀಘ್ರ:

ದೆಹಲಿ-ಜೈಪುರ, ಸಿಕಂದರಾಬಾದ್‌-ತಿರುಪತಿ ಮತ್ತು ಚೆನ್ನೈ-ಕೊಯಮತ್ತೂರು ನಡುವೆ ಶೀಘ್ರದಲ್ಲೇ 3 ವಂದೇಭಾರತ್‌ ರೈಲು ಆರಂಭವಾಗಲಿವೆ ಎಂದು ಮೂಲಗಳು ಹೇಳಿವೆ. ಬೆಂಗಳೂರು-ಧಾರವಾಡ ವಂದೇಭಾರತ್‌ ಕೂಡ ಕೆಲವು ತಿಂಗಳಲ್ಲಿ ಆರಂಭವಾಗಬಹುದು ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು-ಧಾರವಾಡ ಮಾರ್ಗದ ಜೋಡಿಮಾರ್ಗ ಹಾಗೂ ವಿದ್ಯುದೀಕರಣ ಭರದಿಂದ ಸಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ 75 ವಂದೇಭಾರತ್‌ ರೈಲು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು.

ದೇಶದ ವಂದೇ ಭಾರತ್‌ ರೈಲಿನ ಮೇಲೆ ಇರಲಿದೆ ಇನ್ನು ಟಾಟಾ ಹೆಸರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

CCTVಗಾದ್ರೂ ಸ್ವಲ್ಪ ಮರ್ಯಾದೆ ಕೊಡಿ: ಮನೆಯಲ್ಲಿ ಏನೂ ಸಿಗದೆ ರೊಚ್ಚಿಗೆದ್ದ ಕಳ್ಳ ಬರೆದ ಪತ್ರದಲ್ಲಿ ಏನಿದೆ?
ಸಾಕುನಾಯಿಯ ಅನಾರೋಗ್ಯದಿಂದ ಖಿನ್ನತೆ: ಫಿನಾಯಿಲ್ ಸೇವಿಸಿ ಸೋದರಿಯರಿಬ್ಬರು ಸಾವಿಗೆ ಶರಣು