
ಡೆಹ್ರಾಡೂನ್(ಜು.04): ಉತ್ತರಾಖಂಡ್ನ ನೂತನ ಸಿಎಂ ಪುಷ್ಕರ್ ಸಿಂಗ್ ಧಾಮಿ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮೊದಲೇ ವಿವಾದಕ್ಕೀಡಾಗಿದ್ದಾರೆ. ಈ ವಿವಾದ ಆರು ವರ್ಷ ಹಳೆಯ ಟ್ವೀಟ್ನಿಂದಾಗಿ ಉಟ್ಟಿಕೊಂಡಿದೆ. ಧಾಮಿಯವರು 2015ರಲ್ಲಿ ಟ್ವೀಟ್ ಒಂದನ್ನು ಶೇರ್ ಮಾಡಿ ಅಖಂಡ ಭಾರತದ ನಕ್ಷೆ ಶೇರ್ ಮಾಡಿದ್ದರು. ಆದರೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಆರಂಭವಾಗಿದೆ. ಅಖಂಡ ಭಾರತ ಎಂದು ತೋರಿಸಲಾದ ಈ ನಕ್ಷೆಯಲ್ಲಿ ಲಡಾಖ್ನ ಕೆಲ ಭಾಗ ಹಾಗೂ ಪಾಕಿಸ್ತಾನ ಹಿಡಿತದಲ್ಲಿರುವ ಕೆಲ ಭಾಗಗಳು ಉಳಿದುಕೊಂಡಿವೆ.
ಧಾಮಿಯವರ ಪ್ರಮಾಣವಚನ ಸ್ವೀಕಾರ ವಿಧಿಗೂ ಮುನ್ನ ಟ್ವಿಟರ್ ಬಳಕೆದಾರರು 2025ರಲ್ಲಿ ಟ್ವೀಟ್ ಮಾಡಲಾದ ಈ ಮ್ಯಾಪನ್ನು ಹುಡುಕಿ ತೆಗೆದು ಪುಷ್ಕರ್ರಿಗೆ ಸವಾಲುಗಳನ್ನೆಸೆದಿದ್ದಾರೆ.
ಧಾಮಿಯವರು ಇಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಾಜಿ ಸಿಎಂ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ ಬೆನ್ನಲ್ಲೇ ಇವರನ್ನು ಸಿಎಂ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಧಾಮಿಯವರು ಜಕೇಂದ್ರ ಸಚಿವ ರಾಜನಾಥ್ ಸಿಂಗ್ ಆಪ್ತ ಹಾಗೂ ಆರ್ಎಸ್ಜೊತೆಯೂ ನಿಕಟ ಸಂಪರ್ಕ ಹೊಂದಿದ್ದಾರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ