ಕಾಣೆಯಾದ 136 ಜನರು ‘ಮೃತ’ ಎಂದು ಘೋಷಣೆಗೆ ನಿರ್ಧಾರ!

Published : Feb 24, 2021, 07:54 AM IST
ಕಾಣೆಯಾದ 136 ಜನರು ‘ಮೃತ’ ಎಂದು ಘೋಷಣೆಗೆ ನಿರ್ಧಾರ!

ಸಾರಾಂಶ

ಕಾಣೆಯಾದ 136 ಜನರು ‘ಮೃತ’ ಎಂದು ಘೋಷಿಸಲು ಸರ್ಕಾರ ಸಜ್ಜು| ಹೀಗೆ ಘೋಷಿಸಿದರೆ ಮೃತರ ಕುಟುಂಬಕ್ಕೆ ತಕ್ಷಣವೇ ಪರಿಹಾರ| ಉತ್ತರಾಖಂಡ ಹಿಮಕುಸಿತ ದುರಂತ

ಡೆಹ್ರಾಡೂನ್‌(ಫೆ.24): ಉತ್ತರಾಖಂಡದ ಚಮೋಲಿಯಲ್ಲಿ ಫೆಬ್ರವರಿ 7ರಂದು ಸಂಭವಿಸಿದ ಹಿಮಕುಸಿತ ದುರಂತದಲ್ಲಿ ಕಾಣೆಯಾಗಿರುವ 136 ಜನರನ್ನು ‘ಮೃತರು’ ಎಂದು ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಶೀಘ್ರ ಈ ಘೋಷಣೆ ಮಾಡುವ ಸಾಧ್ಯತೆ ಇದೆ.

ರಕ್ಷಣಾ ತಂಡಗಳು ಈವರೆಗೆ 68 ಶವಗಳನ್ನು ಚಮೋಲಿಯ ವಿದ್ಯುತ್‌ ಸ್ಥಾವರ ನಿರ್ಮಾಣ ಪ್ರದೇಶದ ಗಣಿ ಹಾಗೂ ಇತರ ಭಾಗಗಳಲ್ಲಿ ಪತ್ತೆ ಮಾಡಿದ್ದಾರೆ. ಆದರೆ 136 ಜನ ಇನ್ನೂ ನಾಪತ್ತೆಯಾಗಿದ್ದಾರೆ. ಇವರು ಬದುಕುಳಿದ ಸಾಧ್ಯತೆ ಕಮ್ಮಿ. ಹಾಗಾಗಿ ಇವರನ್ನು ‘ಮೃತರು’ ಎಂದು ಘೋಷಣೆ ಮಾಡಿದರೆ ಅವರ ಕುಟುಂಬಕ್ಕೆ ಸರ್ಕಾರದಿಂದ ದೊರಕುವ ಪರಿಹಾರ ಹಾಗೂ ಇತರ ಸವಲತ್ತುಗಳೆಲ್ಲ ಕೂಡಲೇ ದೊರಕುತ್ತವೆ. ಈ ಕಾರಣಕ್ಕೆ ಮೃತರು ಎಂದು ಘೋಷಿಸಲು ಸರ್ಕಾರ ನಿರ್ಧರಿಸಿದೆ.

ಸಾಮಾನ್ಯವಾಗಿ ಪ್ರಾಕೃತಿಕ ದುರಂತಗಳಲ್ಲಿ ನಾಪತ್ತೆಯಾಗಿ 7 ವರ್ಷ ಆದ ಬಳಿಕ ‘ಮೃತ’ ಎಂದು ಘೋಷಿಸುತ್ತಾರೆ. ಆದರೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿರುವ ಸರ್ಕಾರ, 1969ರ ಜನನ ಹಾಗೂ ಮರಣ ಕಾಯ್ದೆಯ ಅನುಸಾರ ಕೂಡಲೇ ‘ಮೃತರು’ ಎಂದು ಘೋಷಿಸುವ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಕೇದಾರನಾಥ ದುರಂತ ಸಂಭವಿಸಿದಾಗಲೂ ಇದೇ ಕ್ರಮವನ್ನು ಸರ್ಕಾರ ಅನುಸರಿಸಿತ್ತು.

ಸಾವಿನ ಘೋಷಣೆ ಬಳಿಕ ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ 2 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 4 ಲಕ್ಷ ರು. ಪರಿಹಾರ ದೊರಕಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?